CPI ML Liberation Party demands Amit Shah’s resignation

ಕೊಟ್ಟೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆ ಕಲಾಪದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅತ್ಯಂತ ಕೀಳು ಅಭಿರುಚಿಯಲ್ಲಿ ಹೀಯಾಳಿಕೆ ಮಾತನಾಡಿರುವುದನ್ನು ಸಿಪಿಐ ಎಂಎಲ್ ಲಿಬರೇಷನ್ ಪಕ್ಷ ಬಲವಾಗಿ ಖಂಡಿಸಿದೆ ಈ ಕೂಡಲೇ ಅವರು ರಾಜೀನಾಮೆ ನೀಡಿ
ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಧರಣಿಯಲ್ಲಿ ಒತ್ತಾಯ ಮಾಡಲಾಯಿತು.
ಧರಣಿಯ ಕುರಿತು ತಾಲೂಕು ಸಮಿತಿ ಅಧ್ಯಕ್ಷರಾದ ದೊಡ್ಡ ಹಾಲಯ್ಯ , ತಾಲೂಕಾ ಕಾರ್ಯದರ್ಶಿ ಬಾಲಗಂಗಾಧರ ಮಾತನಾಡಿದರು ಸಿಪಿಐ ಎಂಎಲ್ ಜಿಲ್ಲಾ ಮುಖಂಡ ಗುಳದಟ್ಟಿ ಸಂತೋಷ್ಙ ಮಾತನಾಡಿದರು.
ಈ ಸಂದರ್ಭದಲ್ಲಿ ಧರಣಿಯಲ್ಲಿ ಅಜ್ಜಪ್ಪ, ದೊಡ್ಡಬಸಪ್ಪ, ಮೈಲಪ್ಪ, ರಾಮನಗೌಡ, ಹಾಲಪ್ಪ,ಸಾಕಮ್ಮ, ಹುಲಿಗೆಮ್ಮ, ಡಿ ಉಮೇಶ, ಮಂಜುನಾಥ್ ಹರಾಲ್, ಇನ್ನು ಹಲವರು ಕಾರ್ಯಕರ್ತರು ಭಾಗವಹಿಸಿದ್ದರು