Dr. Ambedkar’s 134th Birth Anniversary

ಬೆಂಗಳೂರು: ಶ್ರೀ ನುಲಿಯ ಚಂದಯ್ಯ ರಾಜ್ಯ ಕೊರಮ ಜನಾಂಗದ ಅಂಬೇಡ್ಕರ್ ಸಿದ್ದಂತ ವೇದಿಕೆಯ ಮೊದಲನೇ ವರ್ಷದ ವಾರ್ಷಿಕೋತ್ಸವ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 134 ನೇ ಜನ್ಮದಿನೋತ್ಸವ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಲಿತ ಸೇನೆ ಹಾಗು ಎಲ್.ಜೆ.ಪಿ ಪಕ್ಷದ ರಾಜ್ಯಾಧ್ಯಕ್ಷರಾದ ಎಂ.ಎಸ್. ಜಗನ್ನಾಥ್, ಸಂಘದ ಸಂಸ್ಥಾಪಕರಾದ ಎಂ. ಶ್ರೀನಿವಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಂ. ವೆಂಕಟೇಶ್, ಮಾಜಿ ಕೆಇಬಿ ಅಧ್ಯಕ್ಷರ ಎಂ. ನಾಗರಾಜು, ಜಿ.ಮಾದೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಬಾಲಾಜಿ ಯತಿರಾಜು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಸಿ. ರಾಮಾಂಜಿನಿ, ಎಂ.ಗಂಗಾಧರ್, ಹೆಚ್.ಕೆ.ಎಸ್ ಫೌಂಡೇರೇಷನ್ ನ ಹೇಮಂತ್ ಕುಮಾರ್, ಅಖಿಲಾ ಕರ್ನಾಟಕ ಕೊರಚ ಮಹಾಸಭಾದ ಸಂಪತ್ ಕುಮಾರ್, ಸಂಘದ ರಾಜ್ಯ ಸಂಚಾಲಕರಾದ ವಿ. ಸೌಭಾಗ್ಯ, ಉಪಾಧ್ಯಕ್ಷ ಲಕ್ಷ್ಮೀಯ್ಯ ಅಮ್ಮಿ, ಖಜಾಂಚಿಗಳಾದ ಆರ್, ಸಂಪತ್ ಕುಮಾರ್ ಹಾಗೂ ರಾಜ್ಯ ಸಂಚಾಲಕರಾದ ಲಿಂಗರಾಜು ಉಪಸ್ಥಿತರಿದ್ದರು