Breaking News

ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಉದ್ಘಾಟನಾಸಮಾರಂಭ ಉಪ ವಿಭಾಗ ಆಸ್ಪತ್ರೆ

Active Tuberculosis Detection Movement Inauguration Ceremony Sub Divisional Hospital




ಗಂಗಾವತಿ:ಸೋಮವಾರ ಜುಲೈ 17 ರಿಂದ ಆಗಸ್ಟ್ 3 ರ ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯ ಆರಂಭವಾಗಲಿದೆ ಇದರ ಸದುಪಯೋಗವನ್ನು ಸಮಾಜದ ಎಲ್ಲಾ ನಾಗರಿಕರು ಬಳಸಿಕೊಂಡು ಕ್ಷಯ ಮುಕ್ತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್ ಅವರು ಮಾತನಾಡುತ್ತಾ ವಿಶೇಷವಾಗಿ ಗಂಗಾವತಿ ನಗರದ ಗುಂಡಮ್ಮ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್, ಎಚ್ ಆರ್ ಎಸ್ ಕಾಲೋನಿ, ಗಾಂಧಿನಗರ, ಹಿರೇ ಜಂತಕಲ್, ಹಮಾಲರ ಕಾಲೋನಿ, ಮೆಹಬೂಬ ನಗರ, ಸಂತೆ ಬಯಲು, ಸಂಗಾಪುರ ಆನೆಗುಂದಿ ವೆಂಕಟಗಿರಿ ಶ್ರೀರಾಮನಗರ ಹೊಸಕೇರಿ ವಡ್ಡರಹಟ್ಟಿ, ಪ್ರದೇಶಗಳಲ್ಲಿ ಸಂಶಯಸ್ಪದ ಕ್ಷಯ ರೋಗಿಗಳು ಇದ್ದು ಪರೀಕ್ಷೆಗೆ ಒಳಪಡದ ಕಾರಣ 2022-23ರಲ್ಲಿ ಪತ್ತೆ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಈಶ್ವರ ಸವಡಿ ಅವರು ಒಬ್ಬ ಚಿಕಿತ್ಸೆ ಪಡೆಯದ ಕ್ಷಯ ರೋಗಿಯು ಒಂದು ವರ್ಷಕ್ಕೆ ಸುಮಾರು 15 ರಿಂದ 18 ಜನಕ್ಕೆ ಕ್ಷಯ ರೋಗವನ್ನು ಹರಡಿಸಬಲ್ಲ ಆದ್ದರಿಂದ ಸಂಶಯಸ್ಪದ ಕ್ಷಯರೋಗದ ಲಕ್ಷಣಗಳಾದ ಎರಡು ವಾರಕ್ಕೂ ಮೇಲ್ಪಟ್ಟು ಕೆಮ್ಮು ಸಾಯಂಕಾಲದ ವೇಳೆ ಜ್ವರ ಬರುವುದು ಹಸಿವೆ ಆಗದಿರುವುದು ಕಫದಲ್ಲಿ ರಕ್ತ ಬೀಳುವುದು ದೇಹದ ತೂಕ ಕಡಿಮೆಯಾಗಿರುವುದು ಕತ್ತು ಮತ್ತು ಕಂಕಳಲ್ಲಿ ಗಡ್ಡೆಗಳಾಗಿರುವುದು ಲಕ್ಷಣಗಳು ಗೋಚರಿಸಿದಾಗ ಹತ್ತಿರದ ಆಶಾ ಕಾರ್ಯಕರ್ತೆಯರು ಅಥವಾ ಇಂದಿನಿಂದ 15 ದಿನಗಳವರೆಗೆ ಪ್ರತಿ ಮನೆಗೆ ಇಲಾಖೆಯ ಆರೋಗ್ಯ ಕಾರ್ಯಕರ್ತರು ಭೇಟಿ ನೀಡುವಾಗ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಎಂದು ಸಲಹೆ ನೀಡಿದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಕ್ಷಯ ರೋಗ ನಿರ್ಮೂಲ ಕಚೇರಿ ಕೊಪ್ಪಳ ಉಪ ವಿಭಾಗ ಆಸ್ಪತ್ರೆ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಗಂಗಾವತಿ ಕ್ಷಯರೋಗ ಘಟಕದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಕೈ ಜೋಡಿಸಿ 2025 ಕ್ಕೆ ಕ್ಷಯ ಮುಕ್ತ ಸಮಾಜ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು, ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಶರಣಪ್ಪ ಚಕೋರಿ ವಿಜಯಪ್ರಸಾದ್ ಮಲ್ಲಿಕಾರ್ಜುನ್ ರಾಘವೇಂದ್ರ ಜೋಶಿ ಕಾಶಿಮ್ ಬಿ ಹನುಮಂತಪ್ಪ ಹಾಗೂ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.