Breaking News

೨೦೨೪ ರಲ್ಲಿ ನಡೆಯುವ ಸಂತ ರಾಷ್ಟ್ರೀಯ ಈ ಮಟ್ಟದ ಪಾನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಗೇಮ್ಸ್ಗೆ ಆಯ್ಕೆ.

Selection for the Pan Masters Athletics Games of this level in Sant Rashtriya in 2024.

ಗಂಗಾವತಿ: ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ದಿನಾಂಕ ೪ ಮತ್ತು ೫ ನವಂಬರ್ ೨೦೨೩ ರಂದು ಧಾರವಾಡದ ಆರ್.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಸ್ಟೇಟ್ ಓಪನ್ ನ್ಯಾಷನಲ್ ಮಾಸ್ರ‍್ಸ್ ಗೇಮ್ಸ್ ನಡೆಸಲಾಯಿತು.
ಇದರಲ್ಲಿ ಭಾಗವಹಿಸಿದ ರನ್ನರ್ಸ್ ಯುನಿಟಿ ಟೀಮ್ ಗಂಗಾವತಿಯ ಒಟ್ಟು ನಾಲ್ಕು ಸ್ಪರ್ದಾಳುಗಳು ಭಾಗವಹಿಸಿ ಮೂರು ಚಿನ್ನದ ಪದಕ, ಐದು ಬೆಳ್ಳಿ ಪದಕಗಳನ್ನು ಪಡೆದು ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಮುಖ್ಯ ತರಬೇತಿದಾರರಾದ ಷಣ್ಮುಖಪ್ಪನವರು ತಿಳಿಸಿದ್ದಾರೆ.
೪೦ ವರ್ಷದ ವಯೋಮಿತಿಯ ಒಳಗಡೆ ಷಣ್ಮುಖಪ್ಪನವರು ೪೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ, ೮೦೦ ಮೀಟರ್ ಓಟದಲ್ಲಿ ಬಂಗಾರದ ಪದಕ, ೫೦೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಹಾಗೂ ೧೦, ೦೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಚಿರಂಜೀವಿ ಸಿದ್ದಾಪುರ ಅವರು ೩೫ ವರ್ಷದ ವಯಮಿತಿಯ ೫ ಕಿ.ಮೀ ಓಟದಲ್ಲಿ ಬೆಳ್ಳಿ ಪದಕ, ೪೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ, ಶಿವರಾಜ್ ಹೊಸಮನಿ (ಬೇವಿನಾಳ) ಕಾರಟಗಿ ೩೦ ವರ್ಷದ ವಯೋಮಿತಿಯ ಒಳಗಡೆ ೫ ಕಿ.ಮೀ ಓಟದಲ್ಲಿ ಬಂಗಾರದ ಪದಕ ಹಾಗೂ ೧೦ ಕಿ.ಮೀ ನಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾರೆ ಹಾಗೂ ಅಂತಿಮವಾಗಿ ಪ್ರವೀಣ್ ಕುಮಾರ್ ಚಳ್ಳಮರದ ೪೦ ವರ್ಷದ ವಯೋಮಿತಿಯ ಒಳಗಡೆ ೫ ಕಿಲೋಮೀಟರ್ ವಲ್ಕ್ ರೇಸ್‌ನಲ್ಲಿ ನೂರು ಮೀಟರ್ ಓಟ ಹಾಗೂ ೬೦ ಮೀಟರ್ ಓಟದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದುಕೊಂಡರೆ, ಸಾಧನೆಗೈದ ಎಲ್ಲಾ ಕ್ರೀಡಾಪಟುಗಳಿಗೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಹ ಪಾಠಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.