MPs’ appeal to Koppal MLA for state grants.

ಗಂಗಾವತಿ: ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ಣಾಳ ಅವರನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಭೇಟಿಯಾಗಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಕೊಪ್ಪಳ ಕ್ಷೇತ್ರದ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ,ದರೋಜಿ-ಗಂಗಾವತಿ ಹಾಗೂ ಗಂಗಾವತಿ-ಬಾಗಲಕೋಟ್ ನೂತನ ಬ್ರಾಡಗೇಜ್ ರೇಲ್ವೆ ಲೈನ್ ಕಾಮಗಾರಿ ಆರಂಭಿಸಲು ರಾಜ್ಯದ ಅನುದಾನವನ್ನು ಬಿಡುಗಡೆ ಮಾಡಿಸಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಕೋರಿದರು.ಇದಕ್ಕೆ ಶಾಸಕರು ತಮ್ಮ ಸಹಮತ ವ್ಯಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಗಂಗಾವತಿ ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ,ಕೆ.ವಿಶ್ವನಾಥ,ಸಂಸದ ರಾಜಶೇಖರ ಹಿಟ್ನಾಳ, ಉಗಮ,ರಾಜ್,ಮಹಾವೀರ ಜೈನ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಶ್ರೇಷ್ಟಿ ,ಕಂಪ್ಲಿ ರೇಲ್ವೇ ಸಮಿತಿಯ ಕಾರ್ಯದರ್ಶಿ ಕಾಳಿಂಗ ವರ್ಧನ ಹಾದಿಮನಿ,ಅಧ್ಯಕ್ಷ ಹೇಮಯ್ಯ ಸ್ವಾಮಿ ಮತ್ತಿತರರನ್ನು ಚಿತ್ರದಲ್ಲಿ ಕಾಣಬಹುದು
Kalyanasiri Kannada News Live 24×7 | News Karnataka
