Create unique writing and epic works for the world. Such contribution belongs to Kanakadasari : MLA M.R. Manjunath Abhimata
ಹನೂರು : ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕನಕದಾಸರ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದ ಶಾಸಕರು
ಕನಕದಾಸರು ರಚಿಸಿದ ಸಾವಿರಾರು ಕೃತಿಗಳು ಕೀರ್ತನೆಗಳ ಮೂಲಕ ಸಂಗೀತ ಜಗತ್ತಿಗೆ ನೀಡಿದಂತ ಕೊಡುಗೆ ಅಪಾರವಾದದ್ದು .ಕನಕದಾಸರು ವಿಶಿಷ್ಟ ಕಾವ್ಯಗಳ ಮೂಲಕ ತಮ್ಮದೇ ಆದ ಕೊಡುಗೆಯನ್ನು ದೇಶಕ್ಕೆ ನೀಡಿದ್ದಾರೆ ಜೊತೆಗೆ ಪ್ರಮುಖವಾಗಿ 5 ಮುಖ್ಯ ಕಾವ್ಯ ಕೃತಿಗಳು ಇಡೀ ಜಗತ್ತಿಗೆ ಕನಕದಾಸರ ಬಗ್ಗೆ ಕೀರ್ತನೆಗಳ ಮೂಲಕ ಮೋಹನ ತರಂಗಿಣಿ ನಾಳ ಚರಿತ್ರೆ ರಾಮಧ್ಯಾನ ಚರಿತೆ ಹರಿ ಭಕ್ತ ಸಾರ ನೈಸಿಂಹಾಸ್ತವ ಕೃತಿಗಳನ್ನು ರಚನೆ ಮಾಡಿ ಇಡೀ ಜಗತ್ತಿಗೆ ಸಾರಿದ ಮಹಾನು ಕಾವ್ಯ ಪುರುಷ ಕನಕದಾಸರು ಅವರು ಹಾಕಿಕೊಟ್ಟಂತ ಅವರು ಸಮಾಜಕ್ಕೆ ನೀಡಿದಂತಹ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಹೆಸರು ತಂದು ಕೊಡುವ ಮೂಲಕ ಕನಕದಾಸರ ಜಯಂತಿ ದೇಶಾದ್ಯಂತ ಇಂದು ನಡೆಯುತ್ತಿದೆ ಪಟ್ಟಣದಲ್ಲಿ ಕನಕ ಭವನ ನಿರ್ಮಾಣ ಹಂತದಲ್ಲಿದ್ದು ಇನ್ನೂ ಸಹ ಅದು ಕಾಮಗಾರಿ ಮುಗಿಯದೆ ಇರುವುದರಿಂದ ಇದೀಗ ಶಾಸಕನಾಗಿ ಆರು ತಿಂಗಳು ಕಳೆದಿದೆ ಮುಂದಿನ ವರ್ಷದೊಳಗೆ ಕನಕ ಭವನವನ್ನ ಉದ್ಘಾಟನೆ ಮಾಡುವ ಮೂಲಕ ಇಂತಹ ಕಾರ್ಯಕ್ರಮಗಳನ್ನು ಅಲ್ಲಿಯ ಹಮ್ಮಿಕೊಳ್ಳಲು ಶ್ರಮಿಸುವುದಾಗಿ ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ತಹಿಸಿಲ್ದಾರ್ ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ,ಕಾರ್ಯ ನಿರ್ವಹಣಾಧಿಕಾರಿ ಉಮೇಶ್, ಶ್ರೀನಿವಾಸ್ ನಾಯ್ಡು, ಕೃಷಿ ಇಲಾಖೆಯ ನಿರ್ದೇಶಕಿ ಸುಂದರಮ್ಮ, ಶಿವಪ್ಪ ವೆಂಕಟೇಗೌಡ ,ಮಹಾದೇವ್ ಪ್ರಸಾದ್ , ಹುಚ್ಚಯ್ಯ , ವಿಜಯ್ ಕುಮಾರ್, ಜೆಸಿಮ್ , ಹಾಗೂ ಮತ್ತಿತರು ಉಪಸ್ಥಿತರಿದ್ದರು…