Jayanagar Srigangadhareshwar Mahilamandal members distributing fruits to the elderly in the old age home.
ಗಂಗಾವತಿ: ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ, ಮೊಮ್ಮಕ್ಕಳೊಂದಿಗೆ ಪ್ರೀತಿಯಿಂದ ಕಾಲಕಳೆಯುತ್ತ ಇರಬೇಕಾಗಿದ್ದ ೪೦ ವೃದ್ದ ಜೀವಗಳು ತಮ್ಮ ಬದುಕಿಗೆ ಯಾರು ಇಲ್ಲದೆ ಅನಾಥಾಶ್ರಮವನ್ನೆ ನಂಬಿಕೊಂಡಿದ್ದ ಹಿರಿಯ ನಾಗರಿಕ ವೃದ್ಧರಿಗೆ ,ಮಹಿಳಾ ದಿನಾಚರಣೆ ಪ್ರಯುಕ್ತ ಜಯನಗರ ಶ್ರೀ ಗಂಗಾಧರೇಶ್ವರ ಮಹಿಳಾ ಮಂಡಳಿ ಸದಸ್ಯರಿಂದ ಹಣ್ಣು ಹಂಪಲು, ಬಿಸ್ಕೆಟ್ಟು ಮತ್ತು ತಂಪು ಪಾನೀಯ ವಿತರಿಸಲಾಯಿತು
ನಗರದ ಕಂಪ್ಲೀ ರಸ್ತೆಯಲ್ಲಿರುವ ಮಾರನಾಥ ಚಾರಿಟೇಬಲ್ ಟ್ರಸ್ಟ್ ನವ ಜೀವನ ವೃದ್ಧಾಶ್ರಮದಲ್ಲಿ ಸುಮಾರು ೪೦ -೫೦ ವೃಧ್ಧರು ತಮ್ಮ ವೃದ್ಧಾಪ್ಯ ಜೀವನವನ್ನು ಕಳೆಯುತ್ತಿರುವುದು ನಿಜಕ್ಕೂ ಶೋಚನೀಯ ,ಅಂತಹವರ ಪಾಲಿಗೆ ದೇವರು ಸದಾ ಬೆನ್ನೆಲುಬಾಗಿರುತ್ತಾನೆ ಎಂದು ಉಪಸ್ಥಿತರಿದ್ದ ಎಲ್ಲರೂ ಸದಸ್ಯರು ಸಾಂತ್ವಾನ ವ್ಯಕ್ತಪಡಿಸಿದರು
ಈ ಕರ್ಯಕ್ರಮದಲ್ಲಿ ಮಂಡಳಿಯ ಸದಸ್ಯರಾದ ಶ್ರೀಮತಿ ರತ್ನಮ್ಮ ರಂಗಾರೆಡ್ಡಿ, ದೊಡ್ಡಬಸಮ್ಮ ಗುರುವಿನ ಮಠ, ಪದ್ಮಾವತಿ ಆಂಜನೇಯ, ಪುಷ್ಪಾ ಪ್ರೇಮಮರ್ತಿ, ಗೀತಾ ಪಾಟೀಲ್, ದೇವಿಕಾ ಸೋಮನಾಥ್, ಲಕ್ಷ್ಮಿ ಮತ್ತು ಶ್ರೀದೇವಿ ಇತರ ಸದಸ್ಯರು ಉಪಸ್ಥಿತರಿದ್ದು ವೃದ್ಧರಿಗೆ ಹಣ್ಣು ಹಂಪಲು, ಬಿಸ್ಕೆಟ್ ಮತ್ತು ತಂಪು ಪಾನೀಯಗಳನ್ನು ವಿತರಿಸಿದರು
ಅನಾಥಾಶ್ರಮದ ಮುಖ್ಯಸ್ಥರು ಈ ಕರ್ಯಕ್ರಮಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದರು