Direct phone-in program on radio program about Musturu Gram Pm projects and problems.
ಗಂಗಾವತಿ: ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿಯ ಯೋಜನೆಗಳು ಹಾಗೂ ಸಮಸ್ಯೆಗಳ ಕುರಿತು ಜನೇವರಿ-೦೧ ರಂದು ಗಂಗಾವತಿ ನಗರದ ದೀಪಾ ಸಮಾಜಸೇವಾ ಸಂಸ್ಥೆಯ ಗ್ರಾಮೀಣ ಭಾರತಿ ಸಮುದಾಯ ರೆಡಿಯೋ ಕೇಂದ್ರದಲ್ಲಿ ನಮ್ಮೂರ ಪಂಚಾಯತ್ ಗ್ರಾಮಾಭಿವೃದ್ದಿಯ ಮಾತು ಮಂಥನ ನೇರ ಪೋನ್ ಇನ್ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ರೇಡಿಯೋ ಕೇಂದ್ರಕ್ಕೆ ಸುಮಾರು ೧೦ ರಿಂದ ೧೧ ದೂರವಾಣಿ ಕರೆಗಳು ಬಂದಿದ್ದು, ಮುಸ್ಟೂರು ಗ್ರಾ.ಪಂ ಯ ಅಧ್ಯಕ್ಷರಾದ ಆದಿಲ್ಪಾಷಾರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ದೂರವಾಣಿ ಕರೆಗಳಿಗೆ ಸ್ಪಂದಿಸಿ, ಗ್ರಾಮ ಪಂಚಾಯತಿ ಯೋಜನೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.