Breaking News

ಅಂಜನಾದ್ರಿ ಬೆಟ್ಟ ಹುಂಡಿಯಲ್ಲಿ ರೂ 61,64,760/- ಸಂಗ್ರಹ

61,64,760/- collected in Anjanadri Betta Hundi

ಜಾಹೀರಾತು

ಗಂಗಾವತಿ, ತಾಲುಕಿನ ಆನೆಗುಂದಿ ಸಮೀಪದ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟದಲ್ಲಿ
ಇಂದು ದಿ. 20/01/2025 ರಂದು ಎಂ ಹೆಚ್ ಪ್ರಕಾಶ ರಾವ್ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಪ್ರಕಾರ ಹಾಗೂ ಅವರ ಉಪಸ್ಥಿತಿಯಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು.

(ದಿ.02-12-2024 ರಿಂದ 20-01-2025 ರವರೆಗೆ ಒಟ್ಟು 50 ದಿನಗಳ ಅವಧಿಯಲ್ಲಿ) ಒಟ್ಟು ರೂ.61,64,760/- ರೂ ಗಳು ಸಂಗ್ರಹವಾಗಿರುತ್ತದೆ. *ವಿದೇಶಿ ನಾಣ್ಯಗಳು , ನೋಟುಗಳು( * ಯು ಎಸ್ ಎ , ನೇಪಾಳ್, ಮತ್ತು ಇತರೆ ದೇಶ ಗಳು )ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಶಿರಸ್ತೇದಾರಾದ ರವಿಕುಮಾರ್ ನಾಯಕವಾಡಿ , ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಮಂಜುನಾಥ ಹಿರೇಮಠ, ಪ್ರ.ದ.ಸ, , ಮಹಮ್ಮದ್ ರಫಿ, ಗಾಯತ್ರಿ, ಶ್ರೀರಾಮ ಜೋಶಿ , ಸೌಭಾಗ್ಯಮ್ಮ, ಕವಿತಾ, ಸುಧಾ ,ಕವಿತಾ ಎಸ್ ದ್ವಿ.ದ.ಸ. ಮಹಾಲಕ್ಷ್ಮಿ ,ಪೂಜಾ , ಅಸ್ಲಾಂ ಪಟೇಲ್, ಮಂಜುನಾಥ ದುಮ್ಮಾಡಿ ಗ್ರಾಮ ಆಡಳಿತ ಅಧಿಕಾರಿಗಳು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಮ್ಯಾನೇಜರ್ ನವೀನ್ ಕುಮಾರ , ಸತೀಶ್, ಪ್ರವೀಣ್ ಕುಮಾರ ವಿನೋದ್ ,ಶ್ರೀಮಂತ . ಭೀಮಪ್ಪ HC ಪೋಲಿಸ್ ಸಿಬ್ಬಂದಿ , ಪ್ರವಾಸಿ ಮಿತ್ರರು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ, ಮಹಿಳಾ ಸ್ವಯಂ ಸೇವಾ ಸಂಘದವರು ಹಾಜರಿದ್ದರು

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .02/12/2024 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ ರೂ.26,60,917 /- ಸಂಗ್ರಹವಾಗಿತ್ತು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *