Breaking News

ಗಡ್ಡಿ ಯಲ್ಲಿ ಉಚಿತವಾಗಿ ಅಯ್ಯಾಚಾರ ಮತ್ತು ಶಿವ ದೀಕ್ಷೇ ಯನ್ನು ಹಮ್ಮಿಕೊಳ್ಳಲಾಯಿತು

Ddharma Sri Ajata Appaji’s holy shrine Sri Kshetra Gaddi was offered free Ayyachar and Shiva Deekshe.

ಗಂಗಾವತಿ.29  ;ಗಂಗಾವತಿ ಸಮೀಪದ ಗಡ್ಡಿ ಗ್ರಾಮದ ಸದ್ದರ್ಮ   ಶ್ರೀ ಅಜಾತ ಅಪ್ಪಾಜಿಯವರ ಪವಿತ್ರ ಪುಣ್ಯಾಶ್ರಮ ಶ್ರೀ ಕ್ಷೇತ್ರ ಗಡ್ಡಿ ಯಲ್ಲಿ ಉಚಿತವಾಗಿ ಅಯ್ಯಾಚಾರ ಮತ್ತು ಶಿವ ದೀಕ್ಷೇ ಯನ್ನು ಹಮ್ಮಿಕೊಳ್ಳಲಾಯಿತು ಪರಮ ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಷ. ಬ್ರ. 108 ಶ್ರೀ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಅಂಕುಷದೊಡ್ಡಿ ಪುಜ್ಯರಿಂದ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ಭಕ್ತ ಗಣದ ಎಲ್ಲಾ ಸಮಾಜದ ಸದ್ಬಕ್ತರಿಗೆ ಶಿವ ದೀಕ್ಷೆ ನಡೆಯಿತು ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ನಾಗಭೂಷಣ ದೇವರು ಸದಾನಂದ ಶಿವಯೋಗಿ ಮಠ ಗುಳೇದಗುಡ್ಡ ಇವರು ಸಾನಿಧ್ಯವನ್ನು ವಹಿಸಿ ಪಿಂಡ ಮಯ ಶರೀರವನ್ನು ಮಂತ್ರಮಯ ಶರೀರವನ್ನಾಗಿಸಲು ಶಿವ ದೀಕ್ಷಾ ಮತ್ತು ಅಯ್ಯಾಚಾರ ದಂತಹ ಕಾರ್ಯಕ್ರಮಗಳು ಇಂದಿನ ದಿನದಲ್ಲಿ ಸಂಸ್ಕಾರವನ್ನುಂಟು ಮಾಡುವ0ತಹ ಮಹತ್ ಕಾರ್ಯವಾಗಿದೆ ಶ್ರೀಮಠದಿಂದ ಅನೇಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬಂದಿದ್ದು ಪೂಜ್ಯರು ಇಂತಹ ಬರಗಾಲದ ದಿನಗಳಲ್ಲೂ ಕೂಡ ಭಿಕ್ಷಾಟನೆ ಮಾಡಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ವಸತಿಯ ಜೊತೆ ಜ್ಞಾನ ದಾಸೋಹವನ್ನು ನೀಡುವುದರ ಮೂಲಕ ತ್ರಿವಿಧ ದಾಸೋಹವನ್ನು ನಡೆಸುತ್ತಿರುವ ಪೂಜ್ಯರ ಕಾರ್ಯ ಶ್ಲಾಗನಿಯ ಎಂದು ಅಭಿಪ್ರಾಯಪಟ್ಟರು ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಸ್ವಾಮಿ ಗಡ್ಡಿಮಠ ಶ್ರೀ ಶರೀಫ ಶಿವಯೋಗಿ ಓಜನಹಳ್ಳಿ ಹುಟ್ಟು ಶಾಸ್ತ್ರಿ ಮತ್ತು ಜಂಗಮ ಸಮಾಜದ ಗಣ್ಯರು ಹಾಗೂ ವಟು ಸಾಧಕರು ಮತ್ತು ಸದ್ಭಕ್ತರು ಮತ್ತಿತರರು ಉಪಸ್ಥಿತರಿದ್ದರು

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.