Breaking News

ಬೇವೂರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಯಶಸ್ವಿ

Educational tour of Bevur students was successful

ಜಾಹೀರಾತು


ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಬೇವೂರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಪಠ್ಯೇತರ ಚಟುವಟಿಕೆಯೊಂದಿಗೆ ಹೊರಗಿನ ಪರಿಸರ ಮತ್ತು ಪಠ್ಯದಲ್ಲಿ ಬರುವ ವಿಷಯಗಳ ಪರಿಚಯಕ್ಕಾಗಿ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತು.
ಪ್ರೌಢಶಾಲೆಯ ೮ ರಿಂದ ೧೦ನೇ ತರಗತಿಯ ಒಟ್ಟು ೯೪ ವಿದ್ಯಾರ್ಥಿಗಳು ಈ ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳನ್ನು ಬನವಾಸಿ, ಹೊರನಾಡು, ಕೊಲ್ಲೂರು, ಉಡುಪಿ, ಮಣಿಪಾಲ್ ವಿಜ್ಞಾನದ ವಸ್ತು ಸಂಗ್ರಾಲಯ, ಮಲ್ಪೆ ಬೀಚ್ ಸೇರಿದಂತೆ ಇತರೆ ಸ್ಥಳಗಳ ಪರಿಚಯ ಮಾಡಿಸಲಾಯಿತು. ಈ ಶೈಕಣಿಕ ಪ್ರವಾಸದ ಉಸ್ತುವಾರಿಯನ್ನು ಶಾಲೆಯ ಮುಖ್ಯೋಪಾಧ್ಯಯರಾದ ಗಣೇಶ ಪತ್ತಾರ, ಸಂಗೀತ ಶಿಕ್ಷಕರಾದ ಮಹಾಂತೇಶಯ್ಯ ಶಾಸ್ತಿç, ಸಹ ಶಿಕ್ಷಕರಾದ ಮಹೇಶಕುಮಾರ ದೇವಗಣಮಠ, ಪ್ರಕಾಶ್ ಎಲ್, ಶ್ರೀಮತಿ ವಿಜಯಲಕ್ಷಿö್ಮÃ ಸೇರಿದಂತೆ ಮತ್ತಿತರ ಶಿಕ್ಷಕರು ಬಿಸಿಯೂಟದ ಅಡುಗೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *