Breaking News

ಚಂದ್ರಯಾನ-೩ ಯಶಸ್ವೀಗೆ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು

School students prayed for Chandrayaan-3 success

ಜಾಹೀರಾತು
ಜಾಹೀರಾತು


ಕೊಪ್ಪಳ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ಯಶಸ್ವೀಯಾಗಲಿ ಎಂದು ನಗರದ ಶ್ರೀಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಂಸ್ಥೆಯ ಅಧ್ಯಕ್ಷ ವಿರೇಶ ಮಹಾಂಯ್ಯನಮಠ ಮಾತನಾಡಿ ಭಾರತದ ಹೆಮ್ಮೆ ಸಂಸ್ಥೆ ಇಸ್ರೋ ಪ್ರತಿಭಾವಂತ ವಿಜ್ಞಾನಿಗಳು ಕೈಗೊಂಡ ಚಂದ್ರಯಾನ-೩ ಯಶಸ್ವೀಗೊಂಡು ಭಾರತ ವಿಶ್ವದಲ್ಲಿ ಮಹತ್ವದ ಸ್ಥಾನ ಗಳಿಸಲಿ ಎಂಬುದು ಎಲ್ಲಾರ ಆಶಯ ಚಂದ್ರಯಾನ-೩ ಯಶಸ್ವೀಗೆ ಶುಭಾವಾಗಲಿ ಎಂದರು.
ನAತರ ಸಮಾಜ ಸೇವಕರು ಹಾಗೂ ಹಿರಿಯ ಮುಖಂಡರಾದ ದೊಡ್ಡನಗೌಡ ಓಜಿನಹಳ್ಳಿ ಮಾತನಾಡಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ವಿಕ್ರಮ್ ನೌಕೆಯು ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಿ ಎಂದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಚಂದ್ರಯಾನ-೩ ಯಶಸ್ವೀಯಾಗಲಿ, ಬೋಲೋ ಭಾರತ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್ ಘೋಷಣೆ ಹಾಕಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದರು.
ನಂತರ ಪೂರ್ಣಿಮ ದೊಡ್ಡನಗೌಡ ಓಜಿನಹಳ್ಳಿ, ಸಂಕೇತಗೌಡ ಓಜಿನಹಳ್ಳಿ ಅವರು ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ಯಶಸ್ವೀಯಾಗಲಿ ಎಂದು ಶುಭಾ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಭಾರತಿ ಎಂ.ಎಸ್.ಮಹಾAತಯ್ಯನಮಠ, ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ ಕೆ.ಎಂ. ಪವಿತ್ರ ಮಡಿವಾಳರ, ರೇಣುಕಾ ಹೂಗಾರ, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.