Breaking News

ಕೃಷ್ಣಾಪೂರಅಂಗನವಾಡಿಕೇಂದ್ರದಲ್ಲಿಪೋಷಕರ ನಡೆ ಅಂಗನವಾಡಿ ಕಡೆ

At Krishnapura Anganwadi Center, parents walk towards the Anganwadi



ಗಂಗಾವತಿ: ಶಾಲಾಪೂರ್ವ ಕಾರ್ಯಚಟುವಟಿಕೆಗಳ ಮೂಲಕ ಶಿಶುಗಳನ್ನು ಪ್ರಾಥಮಿಕ ಶಾಲಾ ಹಂತಕ್ಕೆ ಹೋಗಲು ಅಂಗನವಾಡಿ ಕೇಂದ್ರಗಳು ಸಿದ್ಧಗೊಳಿಸುತ್ತವೆ. ಮಕ್ಕಳ ದೈಹಿಕ, ಮಾನಸೀಕ ಆರೋಗ್ಯಕ್ಕೆ ಸರಕಾರ ಅಂಗನವಾಡಿಗಳ ಮೂಲಕ ಅನೇಕ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಪೋಷಕರ ನಡೆ ಅಂಗನವಾಡಿ ಕಡೆ ಎನ್ನುವ ಕಾರ್ಯಕ್ರಮದ ಮೂಲಕ ಅಂಗನವಾಡಿ ಕಾರ್ಯಗಳನ್ನು ಪೋಷಕರಿಗೆ ತಿಳಿಸಲಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆ ಕವಿತಾ ಡೊಳ್ಳಿನ್ ಹೇಳಿದರು.
ಅವರು ತಾಲೂಕಿನ ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಷಕರು ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರಲ್ಲಿ ಪೌಷ್ಠಿಕತೆ ಕೊರತೆಯಾಗದಂತೆ ಎಚರಿಕೆ ವಹಿಸಬೇಕು. ಆರೋಗ್ಯ ತಪಾಸಣೆ ಹಾಗೂ ಅಂಗನವಾಡಿಗಳಲ್ಲಿ ಕೊಡುವ ಆಹಾರ ಸೇವನೆ ಮೂಲಕ ದೈಹಿಕ ಆರೋಗ್ಯ ಆರೋಗ್ಯ ಕಾಪಾಡಿಕೊಳ್ಳಬೇಕು. ಸರಕಾರದ ಯೋಜನೆಗಳನ್ನು ಸದುಪಯೋಗದ ಮೂಲಕ ಮಕ್ಕಳನ್ನು ಆರೋಗ್ಯವಂತರು. ಶಿಕ್ಷಣವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ರಂಜಿತಾ ತಾಯಂದಿರಾದ ಚಂದ್ರಿಕಾ, ವೆಂಕಟಲಕ್ಷಿö್ಮ, ಹನುಮಮ್ಮ ಸಹಾಯಕಿ ಹೊಳಿಯಮ್ಮ ಸೇರಿ ಅನೇಕರಿದ್ದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.