ಬೆಂಗಳೂರುದಲ್ಲಿ ” ವಚನ ದರ್ಶನ ಮಿಥ್ಯ vs ಸತ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಕಾಂತ ಸ್ವಾಮಿಯವರಿಗೆ ಸನ್ಮಾನಿಸಲಾಯಿತು

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Srikanta Swamy was felicitated at the “Vachana Darshan Mithya vs Satya” book launch event in Bangalore.

ಜಾಹೀರಾತು

ಬೆಂಗಳೂರು: ದಿ, 27/02/2025 ರಂದು ಮುಂಜಾನೆ ಬಸವ ಸಮಿತಿ ಅನುಭವ ಮಂಟಪ ಸಭಾಂಗಣ , ಬೆಂಗಳೂರುದಲ್ಲಿ ” ವಚನ ದರ್ಶನ ಮಿಥ್ಯ vs ಸತ್ಯ” ಪುಸ್ತಕ ಬಿಡುಗಡೆ ಮಾಡಲಾಯಿತು. ಹಲವಾರು ಹಿರಿಯರ ಮತ್ತು ಹೊಸಬರ ಲೇಖನಗಳನ್ನು ಸಂಪಾದನೆ ಮಾಡಿ ಪ್ರಕಟಣೆ ಮಾಡಲಾಗಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬೀದರ ಜಿಲ್ಲೆಯ ಶರಣ ಶ್ರೀ ಶ್ರೀಕಾಂತ ಸ್ವಾಮಿ ಅವರ ಏಕೈಕ ಲೇಖನ ” ವಚನ ದರ್ಶನ ಕಲುಷಿತ ಮನಸ್ಸಿನ,ಸಮಾಜ ವಿರೋಧಿ, ಕಳಪೆ ಪುಸ್ತಕ” ಪ್ರಕಟಣೆ ಮಾಡಿದ್ದು, ಅಂದು ಸನ್ಮಾನ್ಯ ಡಾ ಎಂ ಬಿ ಪಾಟಿಲ ಮಾನ್ಯ ಸಚಿವರು ಮತ್ತು ಪೂಜ್ಯ ಶ್ರೀ ತೋಂಟದಾರ್ಯ ಜಗದ್ಗುರು ಡಾ ಸಿದ್ದರಾಮ ಮಹಾಸ್ವಾಮಿಗಳು ಸೇರಿ ಶ್ರೀಕಾಂತ ಸ್ವಾಮಿಯವರನ್ನು ಸನ್ಮಾನಿಸಲಾಯಿತು.

ಭಾರತೀಯ ಪರಂಪರೆ ಯಾವುದು ಅನ್ನೋದು ಪ್ರಶ್ನೆ ಮಾಡುತ್ತಾ, ಅದು ಸಮಾನತೆ ಸಾರುವ ಬಸವ ಪರಂಪರೆ ಆಗಬೇಕು ವಿನಹ ಸಮಾಜವನ್ನು ಒಡೆಯುವ ಅಸಮಾನತೆ ಸಾರುವ ಜಾತಿಯತೆ ಲಿಂಗ ಭೇದ ಮಾಡುವ ಆಶ್ಪುರುಷತೆ ಪಾಲಿಸುವ ಪರಂಪರೆ ಆಗಬಾರದು ಎಂದು ಲೇಖಕರು ಬರೆದಿದ್ದಾರೆ ಎಂದು ಪೂಜ್ಯ ತೋಂಟದಾರ್ಯ ಜಗದ್ಗುರು ಪುಸ್ತಕ ಓದಿ ಕಾರ್ಯಕ್ರಮದಲ್ಲಿ ಪುನರುಚ್ಚರಿಸಿದರು. ಲೇಖನ ಎಲ್ಲರೂ ಮೆಚ್ಚುವಂತದ್ದು ಎಂದು ಎಲ್ಲರೂ ಭಾಷಣದಲ್ಲಿ ಕೊಂಡಾಡಿದ್ದರು.

Total Views: 0
Share This Article