Breaking News

ಲಿಂಗವಂತರಿಗೆ ಮುಟ್ಟು ಮೈಲಿಗೆ ಇಲ್ಲ

Menstruation is not allowed for transgenders.

ಯಲಬುರ್ಗಾ ತಾಲೂಕಿನ ವನಜಭಾವಿ ಗ್ರಾಮದಲ್ಲಿ 87 ನೇ ಮಾಸಿಕ ಬಸವಾನುಭವ ಮತ್ತು ಶರಣ ಹನಮಂತಪ್ಪ ಗೂರಪ್ಪ ಮೇಟಿ ಇವರ ಮೊಮ್ಮಗಳ ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದ ಬಸವರಾಜ ಹೂಗಾರ ಮಾತನಾಡಿ, ಇಂದಿನ ದಿನಮಾನದ ಗ್ರಾಮೀಣ ಮಟ್ಟದಲ್ಲಿ ವಿಜ್ಞಾನಕ್ಕೆ ಹತ್ತಿರವಿಲ್ಲದ ಅವೈಜ್ಞಾನಿಕವಾದ ಮೂಢನಂಬಿಕಗಳ ಮೌಢ್ಯಾಚರಣೆಗಳು ಹೆಚ್ಚುತಲಿವೆ. ಕಾರಣ ವಚನ ಸಾಹಿತ್ಯದ ಸಾರ ಅರಿಯದೇ ಇರುವುದರಿಂದ. ಅದಕ್ಕಾಗಿ ನಾವು ಇಂದು ಗ್ರಾಮದಲ್ಲಿ ಕುಮಾರಿ ರಕ್ಷಿತಾ ಎಂಬ ಕುವರಿಯು ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ನೆಪಮಾಡಿಕೊಂಡು, ನಿಜಾಚರಣೆಗಳನ್ನೊಳಗೊಂಡ ಗುರು ಬಸವಣ್ಣನವರ ವಚನ ಸಾಹಿತ್ಯ ಬಿತ್ತರಿಸುವ ಕಾರ್ಯವೆ ವೃತುಮತಿಯಾದ ಕುವರಿಯ ಪುಷ್ಪವೃಷ್ಟಿ ದಕಾರ್ಯಕ್ರಮ.

ಸಹಜವಾಗಿವಯೋಮಾನದ ಹಂತದಲ್ಲಿ ರಜಸ್ವು ಅಂದರೆ ಮುಟ್ಟು ಆಗುವುದು ಸಹಜವಾದ ಕ್ರೀಯೆ. ಅದನ್ನೇ ನಾವು ನಮ್ಮ ಮನೆಯಲ್ಲಿ ಮುಟ್ಟಾದ ಮಕ್ಕಳ ಮಟ್ಟದೆ ಒಂದು ಮೂಲೆಯಲ್ಲಿ ಕಳ್ಳಿರಿಸಿ, ಅವರನ್ನ ಹೀನಸ್ಥಿತಿಯಲ್ಲಿ ಕಾಣುವುದ ಮಾನವೀಯ ಸಂಸ್ಕೃತಿ ಅಲ್ಲ. ಸರ್ವಜ್ಞ ಕವಿ ಹೇಳುವಂತೆ ಮುಟ್ಟಾದ ಮೂರು ದಿನಕೆ ಗಟ್ಟಿಗೊಂಡಿಹುದು ಈ ಜೀವ, ಅದೇಗೆ ಮೈಲಿಗೆ ಆಗಲು ಸಾದ್ಯ? ಎಂಬ ಪ್ರಶ್ನೆ ಮಾಡುವುದರ ಜೊತೆಗೆ, ಉತ್ತರವಾಗಿ ಸುಸಂಸ್ಕೃತಿಯ ಸಾಹಿತ್ಯ ಹೊಂದಿರುವ ಈ ನಾಡಿಗೆ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ, ಅದಕ್ಕಾಗಿ ನಾವು ಶರಣರ ಸಂತರ ಸಂಸ್ಕಾರಗಳನ್ನ ಅರಿತು ನಮ್ಮ ಮನೆಯಲ್ಲಿ ಬರುವ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದಾಗ ಮಾತ್ರ ಮೌಢ್ಯತೆಯಿಂದ ಹೊರ ಬರುಲು ಸಾದ್ಯವಿದೆ ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರು ಮಾತನಾಡಿ,
ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲ. ಎನ್ನುವ ಮೂಲಕ ಬಸವಾದಿ ಶಿವಶರಣರು, ಮಡಿ, ಮೈಲಿಗೆ, ಕಂದಾಚಾರ, ಮೂಢನಂಬಿಕೆಗಳನ್ನು ದಿಕ್ಕರಿಸಿದ್ದಾರೆ. ನಾರಿ ಪರರುಪಕಾರಿ, ನಾರಿ ಸ್ವರ್ಗಕ್ಕೆ ದಾರಿ, ನಾರಿ ಸಕಲರಿಗೆ ಹಿತಕಾರಿ, ಮುನಿದರೆ ನಾರಿಯೆ ಮಾರಿ ಎನ್ನುವ ನುಡಿಗಳನ್ನ ಕವಿ ಕಾದಂಬರಿಗಳಲ್ಲಿ ನಾವು ಕಾಣಬಹುದು. ಗುರು ಬಸವಣ್ಣನವರು, 12 ನೇ ಶತಮಾನದಲ್ಲಿ, ತಾನು ಎಂಟು ವರ್ಷದ ಲ್ಲಿದ್ದಾಗ ತನ್ನ ಅಕ್ಕನಾದ ಅಕ್ಕನಾಗಲಾಂಬಿಕೆ ಮಟ್ಟಾದಾಗ, ಅವರ ತಂದೆ ತಾಯಿಗಳು ಹೊರಗಿಟ್ಟು, ಊಟೋಪಚಾರ ನೀಡುವುದನ್ನ ಕಂಡ ಬಸವಣ್ಣ, ಶೋಷಣೆಗೊಳಗಾದ ತನ್ನ ಅಕ್ಕನ ಕುರಿತಾಗಿ ತನ್ನ ತಂದೆಯವರಿಗೆ ಪ್ರಶ್ನಿಸಿ, ಪುರುಷರಷ್ಟೆ ಸ್ತ್ರೀ ಯರಿಗು ಕೂಡ ಸಮಾನತೆ ಕಾಣಬೇಕು ಎಂಬ ಮಾತಿಗೆ ಒಪ್ಪದ ತಂದೆ ತಾಯಿಗಳನ್ನ ಧಿಕ್ಕರಿಸಿ, ಬಸವನ ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಬಂದು ಮುಟ್ಟು, ಮೈಲಿಗೆ ಎಂಬ ಕಳಂಕಕ್ಕೆ ತಿಲಾಂಜಲಿ ನೀಡಿ, ಪುರುಷರಷ್ಟೇ ಸ್ತ್ರೀಯರಿಗೂ ಕೂಡ ಸಮಾನತೆ ಇದೆ ಎಂಬುದನ್ನು ಮೊಟ್ಟೆ ಮೊದಲು ಜನ ಮನಗಳಿಗೆ ತಿಳಿಸಿಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶರಣ ಶಿವನಾಗಯ್ಯ ಶಾಸ್ತ್ರಿಗಳು ನಿಲೋಗಲ್ ಇವರು ಮಾತನಾಡಿ, ಇಂದಿನ ದಿನಮಾನದಲ್ಲಿ ಯಾರು ಅಂಗದ ಮೇಲೆ ಲಿಂಗ ಧರಿಸಿ, ಬಸವ ನಾಮಸ್ಮರಣೆ ಮಾಡುತಿರುತ್ತಾರೋ ಅಂಥವರಿಗೆ ಯಾವುದೆ ಮುಟ್ಟು ಮೈಲಿಗೆ ಇರುವುದಿಲ್ಲಾ. ಅಸ್ಪೃಶ್ಯತೆ ನಿವಾರಣೆ, ಸ್ತ್ರೀ ಸಮಾನತೆ, ಅಹಿಂಸೆ, ಸ್ವಾತಂತ್ರ್ಯ, ಶಾಂತಿ, ಪ್ರಜಾಪ್ರಭುತ್ವ ಸೇರಿದಂತೆ ಎಲ್ಲ ಪ್ರಗತಿ ಪರ ತತ್ತ್ವಗಳನ್ನು ಜಾರಿಗೆ ತರಲು ಈ ಆಧುನಿಕ ಕಾಲದಲ್ಲೂ ಕಷ್ಟ ಸಾಧ್ಯ. ಆದರೆ, 12ನೇ ಶತಮಾನದಲ್ಲೇ ಅವುಗಳನ್ನು ಅಕ್ಷರಶಃ ಜಾರಿಗೆ ತರಲು ವಿಶ್ವಗುರು ಬಸವಣ್ಣನವರು ಪ್ರಯತ್ನಿಸಿದರು. ಸಮಾನತೆಯ ಸಮಾಜ ಕಟ್ಟಲು ಪಣತೊಟ್ಟವರು ಅವರು. ಇಂದಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಹಾ ಮಾನವತಾವಾದಿಯ ವಿಚಾರ ಬಿತ್ತರಿಸುವದರ ಮೂಲಕ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯವಾದದ್ದು ಎಂದರು. ಪರಮ ಪೂಜ್ಯ ಶಿವಾನಂದ ಸ್ವಾಮಿಗಳು ಶಿವಾನಂದ ಆಶ್ರಮ ಮಕ್ಕಳ್ಳಿ ಆಶ್ರವಚನ ನೀಡಿದರು, ಅಮರೇಶಪ್ಪ ಗಡಿಹಳ್ಳಿ ಸಾ ಸೋಮಸಾಗರ, ಬಸವರಾಜಪ್ಪ ಇಂಗಳದಾಳ, ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ ಇವರು ಕೂಡ ಕಾರ್ಯಕ್ರಮದ ಕುರಿತಾಗಿ ತಮ್ಮ ಅನುಭಾವದ ಅಮೃತದ ನುಡಿಗಳನ್ನ ನುಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಶರಣ ಶಿವಬಸಯ್ಯ ಹಿರೇಮಠ ವೀರಾಪುರ, ಕಳಕಪ್ಪ ವಿವೇಕಿ, ಪರಪ್ಪ ಗೊಂದಿ, ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ, ನಾಗನಗೌಡ ಜಾಲಿಹಾಳ ಗೌರವಾಧ್ಯಕ್ಷರು ಮಾಟಲದಿನ್ನಿ, ಅಮರಪ್ಪ ಅಳ್ಳಳ್ಳಿ ಸಾ. ಯಡ್ಡೋಣಿ ಇವರು ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವನಜಭಾವಿ ಗ್ರಾಮದ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರಾದ ಶರಣ ದೇವಪ್ಪ ಕೋಳೂರು, ಗಿರಿಮಲ್ಲಪ್ಪ ಪರಂಗಿ, ವಿರುಪಣ್ಣ ಮೇಟಿ, ಚಿದಾನಂದಪ್ಪ ಗೊಂದಿ, ವೀರನಗೌಡ ಪಾಟೀಲ್, ನಿಂಗಪ್ಪ ಪರಂಗಿ, ಯಲ್ಲಪ್ಪ ಆಡಿನ್, ಶೇಖಪ್ಪ ನಿಡಶೇಸಿ, ಶರಣಪ್ಪ ಗೊಂದಿ, ಜಗದೀಶ್ ಗೌಡರ್, ಓಂಕಾರಪ್ಪ ಮೇಟಿ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣದ ಶರಣೆ ಯಮನಮ್ಮ ಗೌಡ್ರ, ಬಸಮ್ಮ ಹನಮಂತಪ್ಪ ಮೇಟಿ, ನಾಗಮ್ಮ ಜಾಲಿಹಾಳ, ಮಲ್ಲಮ್ಮ ಮಂತ್ರಿ, ಯಮನಮ್ಮ ಮೇಟಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಾದ ಗುಳೆ, ಮರಕಟ್ಟ ಚವಡಾಪುರ ತಾಳಕೇರಿ, ಯಡ್ಡೋಣಿ, ಕೊಪ್ಪಳ, ಟಣಕನಕಲ್, ತರಲಕಟ್ಟಿ ಕಲಭಾವಿ, ಮಾಟಲದಿನ್ನಿ ಗ್ರಾಮದ ಸದ್ಭಕ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
✍️ ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ

About Mallikarjun

Check Also

ಹೆರಿಗೆ ಆಸ್ಪತ್ರೆಯ ಮುಂದುಗಡೆ ಇರುವ ರಸ್ತೆಯಲ್ಲಿ ಹಮ್ಸ್ ಗಳನ್ನು ಹಾಕಿ

ಗಂಗಾವತಿ: 19 ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯೂ ಮುಖ್ಯರಸ್ತೆಗೆ ಹೊಂದಿಕೊಂಡಿದ್ದು ದಿನನಿತ್ಯ ನೂರಾರು ಜನರು ಈ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.