Donation of 21 quintals of rice to Dasoh of Halumata culture
ಗಂಗಾವತಿ: ಲಿಂಗಸಗೂರು ತಾಲೂಕಿನ ತಿಂಥಿಣಿ ಬ್ರಿಜ್ನಲ್ಲಿರುವ ಶ್ರೀರೇವಣಸಿದ್ದೇಶ್ವರ ಸಂಸ್ಥಾನಮಠದ ಶ್ರೀಕನಕಗುರುಪೀಠದ ಶಾಖಾ ಮಠದಲ್ಲಿ ಜ.೧೨,೧೩ ಮತ್ತು ೧೪ ರಂದು ಆಯೋಜಿಸಿರುವ ಹಾಲುಮತಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರ ದಾಸೋಹಕ್ಕೆ ೨೧ ಕ್ವಿಂಟಲ್ ಅಕ್ಕಿ ದೇಣಿಗೆಯನ್ನು ಗಂಗಾವತಿ ತಾಲೂಕು ಹಾಲುಮತ ಕುರುಬ ಸಮಾಜದ ವತಿಯಿಂದ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಕನಕದಾಸ ತಾಲೂಕ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಯಮುನಪ್ಪ ವಿಠಲಾಪೂರ, ಸಣ್ಣಕ್ಕಿ ನೀಲಪ್ಪ, ಶರಣೇ ಗೌಡ, ರುದ್ರೇಶ್ ಗಂಗಾವತಿ, ಸಿದ್ದಲಿಂಗಪ್ಪ ಗೌಡ, ಬಸವರಾಜ್ ಸಂಗಟಿ, ಕೆ.ನಾಗೇಶಪ್ಪ, ಬೆಟ್ಟಪ್ಪ ಹುರಕಡ್ಲಿ, ಮೋರಿ ದುರುಗಪ್ಪ, ಮರಿಯಪ್ಪ, ಶಿವರಾಜ್ ಹೊಸಳ್ಳಿ, ನಾಗಪ್ಪಬಲಕುಂದಿ, ವಿರುಪಾಕ್ಷಪ್ಪ ರೇಷ್ಮೆ ಇದ್ದರು.