Breaking News

ವಚನ ಬದುಕಿನ ಮೌಲ್ಯ – ಜಿ.ಎಸ್.ಗೋನಾಳ.

Screenshot 2025 07 07 13 46 30 27 E307a3f9df9f380ebaf106e1dc980bb64910018828285976246 1024x692

ಕೊಪ್ಪಳ ಜು ೭: ವಚನ ಸಾಹಿತ್ಯ ಬದುಕಿನ ಮೌಲ್ಯವನ್ನು ಹೆಚ್ಚಿಸುವ ದಿವ್ಯ ಔಷಧಿಯಾಗಿದೆ ಎಂದು ವಚನ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗೋನಾಳ ಹೇಳಿದರು. ವಚನ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕು ಘಟಕ ಅಧ್ಯಕ್ಷ ಭಾಗ್ಯನಗರದ ಶಿಕ್ಷಕ ಮೈಲಾರಪ್ಪ ಉಂಕಿ ಅವರ ಸದನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಜಿಲ್ಲೆಯ ಪ್ರತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬೆಳಗಿನ ಜಾವ ನಡೆಯುವ ಪ್ರಾರ್ಥನೆಯಲ್ಲಿ ಒಂದು ವಚನವನ್ನು ಮಕ್ಕಳ ಬಾಯಲ್ಲಿ ಹೇಳಿಸುಂತಾಗಬೇಕು. ಆ ದಿಸೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕ್ರಮ ಕೈಗೊಳ್ಳಲು ಅವರು ಮನವಿ ಮಾಡಿದರು.

ಬಸವಾನುಯಾಯಿ ವೈ. ಎಚ್ ಹಳ್ಳಿಕೇರಿ ಮಾತನಾಡಿ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ಬಸವಣ್ಣನು ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ ಎಂದು ಅಭಿಪ್ರಾಯ ಪಟ್ಟರು. ಸಭೆಯಲ್ಲಿ ಉಪಸ್ತಿತರಿದ್ದ ಸಾಹಿತಿ ಶಿ.ಕಾ. ಬಡಿಗೇರ ಪ್ರತಿ ತಿಂಗಳು ವಚನ ಗೋಷ್ಟಿ, ವಚನ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು.

ಹಿರಿಯ ಮಕ್ಕಳ ಸಾಹಿತಿ ಎ. ಪಿ ಅಂಗಡಿ, ಗವಿಸಿದ್ದಪ್ಪ ಬಾರಕೇರ, ಸುರೇಶ ಕುಂಬಾರ ಹಾಗೂ ಪ್ರದೀಪ ಹದ್ದಣ್ಣವರ ವಚನಕಾರರ ಒಂದೊAದು ವಚನ ಓದಿದರು. ಇದೇ ಸಂದರ್ಭದಲ್ಲಿ ಮೈಲಾರಪ್ಪ ಉಂಕಿ ದಂಪತಿಗಳನ್ನು ಸನ್ಮಾನಿಸಲಾಯಿತು.

About Mallikarjun

Check Also

ಹಳಿಯಾಳ ಆರ್‌ಸೆಟಿ ಸಂಸ್ಥೆಯಿಂದ ವಿವಿಧ ತರಬೇತಿ: ಅರ್ಜಿ ಆಹ್ವಾನ

ಹಳಿಯಾಳ ಆರ್‌ಸೆಟಿ ಸಂಸ್ಥೆಯಿಂದ ವಿವಿಧ ತರಬೇತಿ: ಅರ್ಜಿ ಆಹ್ವಾನ Various training from Haliyala RSETI Institute: Applications invited …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.