Breaking News

ಕ್ರೀಡೆಯಿಂದಆರೋಗ್ಯವನ್ನುಕಾಪಾಡಬಹುದು:ಫಾದರ್ ರೋಷನ್ ಬಾಬು

Sports can preserve health: Father Roshan Babu

ಜಾಹೀರಾತು


ವರದಿ : ಬಂಗಾರಪ್ಪ ಸಿ .
ಹನೂರು :- ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2024 ಗುಂಡು ಎಸೆಯುವುದರ ಮೂಲಕ
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ರೋಷನ್ ಬಾಬು ನಂತರ ಮಾತನಾಡಿದ ಅವರು ಕ್ರೀಡಾ ಕೂಟಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ನೀಡುತ್ತೆವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ . ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮವಾಗಿ ಆರೋಗ್ಯ ಸುಧಾರಿಸಲು ಕ್ರೀಡೆಯು ಬಹಳ ಸಹಾಯ ಮಾಡುತ್ತದೆ ಎಂದು ತಿಳಿಸಿದರು .

ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಕ್ರಿಸ್ತರಾಜ ಪ. ಪೂರ್ವ ಕಾಲೇಜು ಹನೂರು ಹಾಗೂ ಸೆಂಟ್ ಮೇರಿಸ್ ಪ. ಪೂರ್ವ ಕಾಲೇಜು ಮಾಟಳ್ಳಿ ಇವರ ವತಿಯಿಂದ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದ ಸಂದರ್ಭದಲ್ಲಿ ಮಾತನಾಡಿದ ಪಪೂರ್ವ ಕಾಲೇಜಿನ ಜಿಲ್ಲಾ ಉಪ ನಿರ್ದೇಶಕರಾದ
ಮಂಜುನಾಥ್ ಪ್ರಸನ್ನ ಮಾತನಾಡಿ ಕ್ರೀಡಾ ಕೂಟದ ಅಯೋಜಕರು ಪ್ರತಿವರ್ಷವು ಅಯಾ ಶಾಲಾ ಕಾಲೇಜುಗಳಲ್ಲಿ ಸಹಪಟ್ಯ ಚಟುವಟಿಕೆಗಾಗಿ ಕ್ರೀಡಾ ಕೂಟ ಹಮ್ಮಿಕೊಂಡಿದ್ದೆವೆ ಹಲವಾರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಗ್ರಾಮೀಣ ಬಾಗದ ವಿದ್ಯಾರ್ಥಿಗಳು ಆಯ್ಕೆಯಾಗುವುದು ಬಹಳ ಸಂತೋಷದ ಸಂಗತಿಯಾಗಿದೆ . ,ಕಳೆದ ಸಾಲಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಆಯ್ಕೆಯಾದವರನ್ನು ಉನ್ನತ ಮಟ್ಟಕ್ಕೆರಲು ಸಹಕಾರ ಮಾಡಬೇಕು ಅಲ್ಲದೆ ಪ್ರತಿಯೋಬ್ಬರು ಮತ್ತೋಬ್ಬರ ಆಯ್ಕೆ ಮನೋಭಾವ ಇರಬೇಕು ,ಇದೇ ರೀತಿಯಲ್ಲಿ ಮುಂದಿನ ಕ್ರೀಡಾ ಕೂಟವು ವಿವೇಕಾನಂದ ಕಾಲೇಜಿನಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಫಾದರ್ ರೋಷನ್ ವ್ಯವಸ್ಥಾಪಕ ಕ್ರಿಸ್ತರಾಜ ವಿದ್ಯಾ ಸಂಸ್ಥೆ ಹನೂರು, ಫಾದರ್ ಟೆನ್ನಿ ಕುರಿಯನ್ ವ್ಯವಸ್ಥಾಪಕ ಸೆಂಟ್ ಮೇರಿಸ್ ವಿದ್ಯಾ ಸಂಸ್ಥೆ ಮಾಟಳ್ಳಿ, ಮಂಜುನಾಥ್ ಪ್ರಸನ್ನ ಉಪನಿರ್ದೇಶಕ ಪ. ಪೂರ್ವ ಶಿಕ್ಷಣ ಇಲಾಖೆ ಚಾ ನಗರ, ಆರ್ ಪಿ ನರೇಂದ್ರನಾಥ್ ಅಧ್ಯಕ್ಷರು ಜಿಲ್ಲಾ ಪ್ರಾಂಶುಪಾಲ ಸಂಘ ಚಾ ನಗರ ಜಿಲ್ಲೆ, ದೈಹಿಕ ಶಿಕ್ಷಕರಾದ ಕೆಂಪರಾಜು, ಜೋಸೆಫ್, ಎಲ್ಲಾ ಪ. ಪೂರ್ವ ಕಾಲೇಜಿನ ಪ್ರಾಂಶುಪಾಲರುಗಳು ,ವಿನೋದ್ .ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *