Breaking News

“ರೈತಕವಿ”ಶಂಕರಪ್ಪಬಳ್ಳೇಕಟ್ಟೆಗೆ ಪುಟ್ಟರಾಜ ಗವಾಯಿ ಸದ್ಬಾವನ ಪ್ರಶಸ್ತಿ ಪ್ರದಾನ

Puttaraja Gavai Sadbhavan award to “Ritakavi” Shankarappaballekatta

ತಿಪಟೂರು : ಪಂಡಿತ್ ಡಾ. ಪುಟ್ಟರಾಜ ಗವಾಯಿಗಳವರ 110ನೇ ಜಯಂತೋತ್ಸವವನ್ನು ಶ್ರೀ ವೀರೇಶ್ವರ ಪುಣ್ಯಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ ಕಲ್ಲಯ್ಯಜ್ಜ ನವರ ನೇತೃತ್ವದಲ್ಲಿ ಡಾ ವಿ ಬಿ ಹಿರೇಮಠ್ ಮೆಮೋರಿಯಲ್ ಪ್ರತಿಷ್ಠಾನ ಮತ್ತು ಅಶ್ವಿನಿ ಪ್ರಕಾಶನದ ಸಹಯೋಗದೊಂದಿಗೆ ನೇತ್ರದಾನ ಶಿಬಿರ ಆರೋಗ್ಯ ಶಿಬಿರ ಹಾಗೂ ಕವಿ ಕಾವ್ಯ ಗೋಷ್ಠಿ ಮತ್ತುರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ವಿಮಲೇಶ್ವರ ನಗರದ ಬಂಜಾರ ಸಮುದಾಯ ಭವನದಲ್ಲಿ ಹಮ್ಮಿಕೊಂಡು ತಿಪಟೂರಿನ ರೈತಕವಿ ಡಾ. ಪಿ ಶಂಕರಪ್ಪಬಳೆಕಟ್ಟೆರವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸದ್ಗುರು ಡಾ.ಪುಟ್ಟರಾಜ ಗವಾಯಿ ಅವರ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರ ಶೀಲವಂತ ಹಿರೇಮಠದ ಧರ್ಮರತ್ನ ಡಾ. ಕೈಲಾಸನಾಥ ಮಹಾಸ್ವಾಮಿಜಿಯವರು ಸಾನಿಧ್ಯ ವಹಿಸಿದ್ದರು ಸಮಾರಂಭದ ಉದ್ಘಾಟನೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ನೆರವೇರಿಸಿದರು ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮತಿ ಡಾ. ವ್ಹಿ ವ್ಹಿ ಹಿರೇಮಠ ವಹಿಸಿದ್ದರು ,ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಅನಂತ್ ಕಾರ್ಕಳ,ಆಂನದಯ್ಯ ದಾನಯ್ಯ ವಿರಕ್ತಮಠ , ರೂಪದರ್ಶಿ ಡಾ. ಹೇಮಾಕ್ಷಿ ಕಿಸೇಸೂರ, ಭೀಮ್ ಸಿಂಗ್ ರಾಥೋಡ್ ಶ್ರೀಮತಿ ಅನ್ನಪೂರ್ಣ ಬಸವರಾಜ್ ಸೌಭಾಗ್ಯ ಅಶೋಕ ಕೊಪ್ಪ, ಹಾಗು ನಾಡಿನಾದ್ಯಂತ ಆಗಮಿಸಿದ್ದ ವಿವಿಧ ಕ್ಷೇತ್ರದ ಗಣ್ಯರು, ಮತ್ತು ಗವಾಯಿಗಳ ಭಕ್ತ ಸಮೂಹ ಜಯಂತ್ಯೋತ್ಸವದಲ್ಲಿ ಸಿಹಿ ಸವಿ ಸಾಹಿತ್ಯ ಪ್ರಸಾದವನುಂಡು ವಿಜ್ರಂಭಿಸಿದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.