Breaking News

12 ನೇ ಶತಮಾನದಲ್ಲಿ ಸತ್ಯ ಮತ್ತು ನಿತ್ಯ ಕಾಯಕ ಮಾಡುತಿದ್ದ ಶಿವ ಶರಣ ಹೂಗಾರ ಮಾದಯ್ಯ

12th century Shiv Sharan flower gardener Madaiah who practiced Satya and Nitya Kayaka


ಯಲಬುರ್ಗಾ ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ 84ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮ ಹಾಗು ಕಾಯಕ ಯೋಗಿ ಶರಣ ” ಹೂಗಾರ ಮಾದಯ್ಯ ಶರಣರ ಜಯಂತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ ಶರಣ ಬಸವರಾಜ ಹೂಗಾರ, ಇಂದಿನ ದಿನಮಾನದಲ್ಲಿ ಯುವ ಪೀಳಿಗೆಗಳು ಸರಿಯಾದ ರೀತಿಯ ಸಂಸ್ಕೃತಿ ಸಂಸ್ಕಾರ ಇಲ್ಲದೆ ಹಲವಾರು ದುಶ್ಚಟಗಳಿಗೆ ಗುರಿಯಾಗಿ, ಸುಂದರವಾದ ಬದುಕನ್ನ ಕಟ್ಟಿಕೊಳ್ಳದೆ, ಅಲೆದಾಡುವ ಪರಸ್ಥಿತಿಗೆ ಬಂದು ನಿಂತಿದೆ. ನಮ್ಮ ಜೀವನದ ಬವಣೆಯಿಂದ ದೂರಾಗಬೇಕಾದರೆ, ಶರಣರ ಸಂದರ ದಾರ್ಶನಿಕರ ತತ್ವಾದರ್ಶಗಳೆ, ಬವಣೆಗಳಿಗೆ ಔಷದಿ.
ಈ ಔಷದಿ ದೊರೆಯಬೇಕಾದರೆ ಶರಣರ ಸಂಘದ ಒಡನಾಟದಿಂದ. ಅದಕ್ಕಾಗಿ ಗುರು ಬಸವಣ್ಣನವರು ” ಸಾರಸಜ್ಜನರ ಸಂಘ ಲೇಸು ಕಂಡಯ್ಯ, ದೂರ ದುರ್ಜನರ ಸಂಗ ಭಂಗವಯ್ಯ ” ಎಂದು ಹೇಳಿದ್ದಾರೆ. ದುರ್ಜನರ ಸಂಘದಿಂದೊಂಡಗೂಡದೆ, ಸಜ್ಜನರ ಸಂಘದೊಂದಿಗೆ ಬದುಕಬೇಕು. ಅದೇರೀತಿಯಾಗಿ, 12ನೇ ಶತಮಾನದಲ್ಲಿ ಒಂದು ಲಕ್ಷದ ತೊಂಭತ್ತಾರು ಜನ ಫಾಲೋವರ್ಸ ಮತ್ತು 770 ಅಮರ ಗಣಂಗಳಲ್ಲೊಬ್ಬರಾದ ಶಿವ ಶರಣ ಹೂಗಾರ ಮಾದಯ್ಯನವರು, ಕಲ್ಯಾಣ ರಾಜ್ಯದ ಶರಣ ಸಂಕುಲಗಳಲ್ಲಿ ದಂಪತಿಗಳು ಸಮೇತ ತೊಡಗಿಕೊಂಡು, ಗುರು ಬಸವಣ್ಣನವರು ಕೊಟ್ಟಂತ ಕಾಯಕದ ಪರಿಕಲ್ಪನೆಯಂತೆ, ಕಲ್ಯಾಣ ಪಟ್ಟಣದಲ್ಲಿ ಇರುವ ಎಲ್ಲಾ ಶರಣರಿಗೆ ಮುಂಜಾವದಲ್ಲೆದ್ದು, ಶರಣರ ಇಷ್ಟಲಿಂಗ ಪೂಜೆಗೆ ಹೂ ಪತ್ರೆ ಗಳನ್ನು ಕೊಡುತ್ತಾ, ಧಾರ್ಮಿಕ ಪೂಜೆ ಮತ್ತು ಮದುವೆ ಸಮಾರಂಭದಲ್ಲಿ ಬಾಸಿಂಗ ಹಂಚುವುದರ ಜೊತೆಗೆ ತಾನು ಕೂಡ ಅಂಗದ ಮೇಲೆ ಇಷ್ಟಲಿಂಗ ಧರಿಸಿ, ಲಿಂಗಾಂಗ ಸಾಮರಸದಿಂದ ಶರಣರಾದರು. ಹೂ ಪತ್ರೆ ಮಾಲೆಗಳನ್ನ ಕೊಡುವ ಕಾಯಕವನ್ನೇ ಜೀವನದ ಬದುಕಿನ ಕಸುಬನ್ನಾಗಿ ಮಾಡಿಕೊಂಡು, ಕಲ್ಯಾಣ ಪಟ್ಟಣದಲ್ಲಿ ಬಿಜ್ಜಳನ ಅರಸೊತ್ತಿಗೆಯ ಭೂಮಿ, ತ್ರಿಪೂರಾಂತ ಕೆರೆಯ ದಂಡೆಯ ಮೇಲೆ ಹೂ ಪತ್ರೆಯ ಕೈ ತೋಟ ಮಾಡಿಕೊಂಡು, ನಿಷ್ಕಲ್ಮಶವಾಗಿ ನಿಷ್ಠೆಯ ಕಾಯಕವ ಮಾಡುತ್ತ, ಅನುಭವ ಮಂಟಪದಲ್ಲಿ ವಚನ ರಚಿಸುವ ಚಿಂತನೆಯಲ್ಲಿ ತೊಡಗಿಕೊಳ್ಳುತಿದ್ದರು. ಹೂಗಾರ ಮಾದಯ್ಯ ಜೀವನ ಕುರಿತಾಗಿ ” ಭೈರವೇಶ್ವರ ಕಥಾಮಣಿಸೂತ್ರ” ದಲ್ಲಿ ಹರಿಹರನ ರಗಳೆಗಳಲ್ಲಿ ಮತ್ತು ಡಾ।। ಬಿ.ಎಸ್ ಗದ್ದಿಗೀಮಠ ಅವರು ಪ್ರಕಟಿಸಿದ ‘ ಕನ್ನಡ ಜಾನಪದ ಗೀತೆಗಳು’ ಎಂಬ ಗ್ರಂಥದಲ್ಲಿ ಸುಮಾರು ಎಪ್ಪತ್ತಕ್ಕೂ ಮಿಕ್ಕಿ ತ್ರಿಪದಿಗಳಲ್ಲಿ ಕಂಡುಬರುತ್ತಿವೆ. ಕಲ್ಯಾಣದ ಕಾಯಕ ಜೀವಿ ರೈತಾಪಿ ಶಿವಶರಣರಿಗೆ ಮುದ್ದು ಮಾದಯ್ಯನಾಗಿ, ಯಾವ ಶರಣರಿಂದಲು ಏನನ್ನು ಬಯಸದೆ, ನಿತ್ಯ ಮತ್ತು ಸತ್ಯ ಕಾಯಕವ ಮೆಚ್ಚಿ ಗುರು ಬಸವಣ್ಣನವರು, ಬಿಜ್ಜಳನ ಭಂಡಾರದಲ್ಲಿ ಪ್ರತಿ ಮಾಸಕ್ಕೊಮ್ಮೆ 25 ಪೈಸೆ ಆತನ ಜೀವನದ ನಿರ್ವಹಣೆಗಾಗಿ ಕೊಡುತಿದ್ದ ಎಂಬುದು ಹರಿಹರನ ರಗಳೆಯಲ್ಲಿ ತಿಳಿದು ಬಂದಿದೆ. 12 ನೇ ಶತಮಾನದಿಂದ ಇಂದಿನ ವರೆಗು, ಗ್ರಾಮ ಗ್ರಾಮಗಳಲ್ಲಿ, ಜಾತಿ ಭೇದ, ವರ್ಗಭೇದ, ವರ್ಣಭೇದ ಮರೆತು, ಎಲ್ಲಾ ಸಮುದಾಯಗಳಿಗೆ, ಹೂ, ಪತ್ರೆ, ಮದುವೆಗೆ ಬೇಕಾದ ಬಾಸಿಂಗ, ಕೊಡುವ ಪರಂಪರೆ ಸಾಗಿಬಂದಿದೆ. ಇದುವೆ 12 ನೇ ಶತಮಾನದ ಶಿವ ಶರಣ ಮಾದಯ್ಯನವರು ಪರಂಪರೆ ಎಂದು ತಿಳಿಸಿದರು. ನಂತರ ಮಾತನಾಡಿದ ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ ಇವರು ಮಾತನಾಡಿ, ಕಾಯಕವ ಕಲಿಸೋಕೆ ನಾಯಕನು ಬಸವಣ್ಣ ಎಂಬ ಜಾನಪದ ಕವಿತೆಗಳಂತೆ, 12 ನೇ ಶತಮಾನದಲ್ಲಿ ಗುರು ಬಸವಣ್ಣನವರು ಎಲ್ಲಾ ಶರಣ ಸಂಕುಲಗಳಿಗೆ, ಒಂದೊಂದು ಕಾಯಕದ ಗುರುತನ್ನು ಕೊಟ್ಟು, ಕಾಯಕದಲ್ಲೇ ಕೈಲಾಸ ಕಾಣುವ ಶಕ್ತಿ ಇದೆ ಎಂಬುದನ್ನು ತಮ್ಮ ವಚನಗಳ ಮೂಲಕ ತಿಳಿದುಕೊಳ್ಳಬಹುದು. ಗುರು ಬಸವಣ್ಣನವರ ನುಡಿಗಡಣವನ್ನ, ಶರಣದಂತಿಗಳಾದ ಶಿವ ಶರಣೆ ಮಹಾದೇವಿ ಮಾದಯ್ಯ ದಂಪತಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಕಲ್ಯಾಣದಲ್ಲೇ ಹುಟ್ಟಿ, ಸತ್ಯ ಶುದ್ಧ ಕಾಯಕ ಮಾಡುತ್ತಾ ಬಾಳಿ ಬದುಕಿದ್ದಾರೆ. ಇಂತಹ ಮಹಾತ್ಮರ ಚಿಂತನೆಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ಶರಣ ನಾಗನಗೌಡ ಜಾಲಿಹಾಳ ಸಾ।। ಮಾಟಲದಿನ್ನಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖರಾಗಿ ಶರಣ ಅಮರೇಶಪ್ಪ ಗಡಿಹಳ್ಳಿ ಸಾ. ಸೋಮಸಾಗರ, ದೇವಪ್ಪ ಕೋಳೂರು ವನಜಭಾವಿ ಇವರು ವೇದಿಕೆ ಹಂಚಿಕೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶರಣ ರೇಣುಕಪ್ಪ ಮಂತ್ರಿ, ರಾಷ್ಟ್ರೀಯ ಬಸವ ದಳದ ಶರಣಗ್ರಾಮ ಗುಳೆ, ಗಿರಿಗೌಡ ಪಾಟೀಲ್ ಮಾಟಲದಿನ್ನಿ, ಪಂಪಾಪತಿ ಹೊಸಳ್ಳಿ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ಜಗದೀಶಪ್ಪ ಮೇಟಿ, ಶಾಂತಕುಮಾರ ಹೊಸಳ್ಳಿ, ದೇವೇಂದ್ರಪ್ಪ ಆವಾರಿ, ಬಸವಣ್ಣ ಹೊಸಳ್ಳಿ, ಬಸವರಾಜ ಕೋಳೂರು, ನಿಜಲಿಂಗಪ್ಪ, ಮಲ್ಲಿಕಾರ್ಜುನ ಮಂತ್ರಿ, ನಿಂಗಪ್ಪ, ಚನ್ನಬಸವಣ್ಣ ಮಂತ್ರಿ, ರಾಷ್ಟ್ರಪತಿ, ಹನಮೇಶ್ ಹೊಸಳ್ಳಿ, ಹಾಗು ಅಕ್ಕ ನಾಗಲಾಂಬಿಕೆ ಬಳಗದ ಶರಣೆ ಯಮನಮ್ಮ ಗೌಡ್ರ ವನಜಭಾವಿ, ಶರಣಮ್ಮ ಚಿದಾನಂದಪ್ಪ ಹೊಸಳ್ಳಿ, ನಾಗಮ್ಮ ಜಾಲಿಹಾಳ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ನಿಂಗಮ್ಮ ಕೋಳೂರು, ಚನ್ನಮ್ಮ ಮಂತ್ರಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಬಸವಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
✍️ ಬಸವರಾಜ ಎಸ್ ಹೂಗರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ .

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.