Breaking News

ಕೊಪ್ಪಳ ಜಿಲ್ಲಾ ಬಚಾವೋ :ಎರಡು ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರ

Koppal District Bachao: Two-day environmental awareness study camp

ಜಾಹೀರಾತು


ತಾವರಗೇರ ಬುದ್ಧ ವಿಹಾರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಯುವ ಪಡೆ) ನೇತೃತ್ವದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಾಲಿನ್ಯಕಾರಿ ಕರ‍್ಖಾನೆ ಬಾಧಿತರ ಎರಡು ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರದ ಉದ್ಘಾಟನೆಯನ್ನು ಬಾಧಿತರ ಮಕ್ಕಳಾದ ಮಹೇಶ ವದನಾಳ ಸಾ: ಹಿರೇಬಗನಾಳ, ಶಿವಪ್ಪ ದೇವರಮನಿ, ಗಣೇಶ ಆಚಾರ, ಕೊಟ್ರಪ್ಪ ಪಲ್ಲೇದ, ಗವಿಸಿದ್ದಪ್ಪ ಪುಟಗಿ, ಶಂಕ್ರಪ್ಪ ರ‍್ಕಿಹಳ್ಳಿ, ತಿರುಪತಿ ಇಂದಿರಾನಗರ ಇವರು ಹೂವಿನ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ವಹಿಸಿದ್ಧರು. ಕೊಜಿಬ ಆಂದೋಲನ ಸಂಚಾಲಕರಾದ ಕೆ.ಬಿ. ಗೋನಾಳ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ತುಂಗಭದ್ರಾ ತಟದಲ್ಲಿ ಬಂಡವಾಳ ಕೇಂದ್ರೀಕರಣದ ಕರ‍್ಖಾನೆಗಳು, ಪರಿಸರ ಮಾಲಿನ್ಯ ಉಂಟು ಮಾಡುವ ಸ್ಪಾಂಜ್ ಐರನ್, ಸಿಮೆಂಟ್, ರಾಸಾಯನಿಕ ಗೊಬ್ಬರ, ಸುಣ್ಣ ತಯಾರಿಸುವ ಬೃಹತ್ ಕರ‍್ಖಾನೆಗಳ ಮೇಲೆ ರ‍್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬೃಹತ್ ಕರ‍್ಖಾನೆಗಳಿಂದ ಜಿಲ್ಲೆಗೆ ನಯಾಪೈಸೆ ಉಪಕಾರವಾಗಿಲ್ಲ. ಆದರೆ ನಮ್ಮದಲ್ಲದ ತಪ್ಪಿನಿಂದ ಗಿಣಿಗೇರಿ, ಹಿರೇಬಗನಾಳ, ಹಳೆಕನಕಾಪುರ, ಬೇವಿನಹಳ್ಳಿ, ಹುಲಿಗಿ, ಹಿರೇಕಾಸನಕಂಡಿ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಲರ‍್ತಿ, ಬೆಳವಿನಾಳ ಮುಂತಾದ ಗ್ರಾಮಗಳಲ್ಲಿ ಕೃಷಿ ಬೆಳೆ ಹಾನಿ, ಜಲಮಾಲಿನ್ಯ, ವಾಯುಮಾಲಿನ್ಯ ಉಂಟಾಗಿ ಜನರು ದರ‍್ಘ ಕಾಲಿನ ರೋಗಗಳಿಗೆ ತುತ್ತಾಗಿದ್ದಾರೆ. ದೂಳು, ಹೊಗೆ ಮಿಶ್ರಿತ ಮೇವು ತಿಂದು ಅತಿಸಾರದಿಂದ ಸಾಯುತ್ತಿವೆ, ತುಂಗಭದ್ರಾ ಜಲಾಶಯ ಈ ಕರ‍್ಖಾನೆಗಳ ತ್ಯಾಜ್ಯದಿಂದ ವಿಷವಾಗಿದೆ. ಅಗ್ಗದ ದರದಲ್ಲಿ ಭೂಮಿಯನ್ನು ಕೆಐಎಡಿಬಿ ಮೂಲಕ ಒತ್ತಡ ಹಾಕಿ ಒತ್ತಾಯದಿಂದ ಕಿತ್ತುಕೊಳ್ಳಲಾಗಿದೆ. ೨೦ ರ‍್ಷಗಳಿಂದ ನಮ್ಮ ಆಹ್ಲಾದಕರ ಪರಿಸರ ನಾಶ ಮಾಡಿದ್ದಲ್ವದೇ ಉತ್ತರ ಭಾರತದ ಚೀಪ್ ಲೇಬರ್ ಗೋಳನ್ನು ಕರೆತಂದು ಅಪಾಯಕಾರಿ ಕೆಲಸದಲ್ಲಿ ನಿಯೋಜಿಸುತ್ತಿದ್ದಾರೆ. ಜಾಗತೀಕರಣ, ಉದಾರೀಕರಣ ನೀತಿಗಳ ಕಾರಣದಿಂದ ನಮ್ಮ ಬದುಕುವ ಹಕ್ಕನ್ನು ಮೊಟಕುಗೊಳಿಸಲಾಗಿದೆ, ಇದರ ವಿರುದ್ಧ ಬಾಧಿತರು ದರ‍್ಘ ಕಾಲಧ ಹೋರಾಟಕ್ಕೆ ಮುಂದಾಗಿ ಕೊಪ್ಪಳ ನಗರಕ್ಕೆ ಭೂತವಾಗಿ ಬಂದು ಕಾಡುತ್ತಿರುವ ಬಲ್ಡೋಟ ಬಿಎಸ್ ಪಿಎಲ್ ಕಂಪನಿಯನ್ನು ಹೊರಗೋಡಿಸುವತನಕ ಮತ್ತು ಈಗಿರುವ ಕರ‍್ಖಾನೆಗಳು ಮುಂದುವರಿದ ತಂತ್ರಜ್ಞಾನ ಬಳಸಿ ಮಾಲಿನ್ಯ ನಿಯಂತ್ರಣ ಮಾಡುವ ತನಕ ಬಾಧಿತ ಗ್ರಾಮಗಳ ಮತ್ತು ಕೊಪ್ಪಳ ನಗರದ ಜನರು ವಿರಮಿಸದೆ ಹೋರಾಟ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧಾರವಾಡ ಸಮಾಜ ಪರಿರ‍್ತನಾ ಸಮುದಾಯದ ಎಸ್.ಆರ್.ಹಿರೇಮಠ ಮಾತನಾಡುತ್ತಾ ಇದೊಂದು ರಾಜಕೀಯ ಮುತ್ಸದ್ದಿತನದ ಕೊರತೆಗಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಎಲ್ಲಕ್ಕೂ ಮಿಗಿಲಾಗಿ ಜನತೆಯ ಹೋರಾಟಗಳು ಬೆಳೆದು ಬಂದಾಗ ಮಾತ್ರ ಜನರ ವಿರೋಧಿಯಾಗಿರುವ ರಾಜಕಾರಣವನ್ನು ಸೋಲಿಸಬಹುದು. ಇಂದು ಭಗತ್ ಸಿಂಗ್ ಹಾಗೂ ಅವರ ಒಡನಾಡಿಗಳು ಹುತಾತ್ಮರಾದ ದಿನ. ಸ್ವಾತಂತ್ರ‍್ಯ ಎನ್ನುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಭಗತ್ ಸಿಂಗ್ ಹೇಳಿರುವುದು ನಾವೆಲ್ಲ ಅದನ್ನು ಇಂದಿನ ಕಂಪನಿಗಳ ವಿರುದ್ಧ ಸಾಧಿಸಬೇಕಾಗಿದೆ. ಮುಂದಿನ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಮನುಷ್ಯನ ಬುದ್ಧಿವಂತಿಕೆ ಮತ್ತು ಸಂಶೋಧನೆಯಿಂದ ಹುಟ್ಟಿದ ಯಾವುದೇ ರಾಸಾಯನ ಪೂರೈಕೆಯೂ ಆಗಬಲ್ಲದು, ನಿಯಂತ್ರಣ ತಪ್ಪಿದರೆ ದೊಡ್ಡ ಪ್ರಮಾಣದಲ್ಲಿ ಮಾರಾಕವೂ ಆಗಬಹುದು. ಎರಡನೇ ಮಹಾಯುದ್ಧದಲ್ಲಿ ಬಳಸಲಾದ ಪರಮಾಣುವಿನಿಂದ ಮನುಷ್ಯ ಬುದ್ಧಿ ಕಲಿಯಬೇಕು. ಅಂಬೇಡ್ಕರ್ ಅವರು ೧೯೫೦ ಜನೇವರಿ ೨೬ರಂದು ಒಬ್ಬ ವ್ಯಕ್ತಿಗೆ ಒಂದೇ ಮತ ಎಂದು ಹೇಳಿದ್ದು, ಅದು ಈ ದೇಶದಲ್ಲಿ ಜಾರಿಗೆ ಬಂದದ್ದು ಬಹುದೊಡ್ಡ ಬದಲಾವಣೆಯಾಗಿದೆ. ಗ್ರಾಮೀಣ ಜನರ ಆರೋಗ್ಯ ಕೆಡಿಸಲು ಯಾರಿಗೂ ಅವಕಾಶವಿಲ್ಲ. ಆದರೂ ಅವರು ಆಡಳಿತವನ್ನು ದುರುಪಯೋಗಪಡಿಸಿಕೊಂಡು ರ‍್ವಾಧಿಕಾರಿಗಳಾಗಿ ನಡೆದುಕೊಂಡು ಈ ವ್ಯವಸ್ಥೆ ಅಸ್ಥಿರಗೊಳಿಸಿದ್ದಾರೆ. ನ್ಯಾಯ ಪಡೆಯಲು ತಾಳ್ಮೆ ಇರಬೇಕಾಗುತ್ತದೆ. ಅಧಿಕಾರದಲ್ಲಿ ಉದ್ಧಟತನದಿಂದ ಯಾರೇ ನಡೆದುಕೊಂಡಾಗ ಅದನ್ನು ಪ್ರಶ್ನಿಸಲು ಸಂಘಟನೆಗಳು ಬೇಕಾಗುತ್ತವೆ, ಸರ‍್ವಜನಿಕ ವಿಚಾರಣೆ ಕರೆಯದೆ ಯಾವುದೇ ಕರ‍್ಖಾನೆಗಳನ್ನು ಹಾಕುವಂತಿಲ್ಲ ಎಂದು ಕಾನೂನು ಹೇಳುತ್ತವೆ. ಆದರೂ ಇದನ್ನು ಉಲ್ಲಂಘನೆ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಅಲ್ಲಿನ ರಸ್ತೆಗಳಲ್ಲಿ ಸುರಕ್ಷಿತ ಪ್ರಯಾಣ ಮಾಡಲು ಸಾಧ್ಯವಿಲ್ಲ, ನಿಮ್ಮ ಸಂಘಟನೆಯಲ್ಲಿ ವೈಚಾರಿಕ ಬದ್ಧತೆ ಇಟ್ಟುಕೊಂಡು ಹೋರಾಟ ಮಾಡಬೇಕು ಎಂದರು.
ಇದೇ ಸಂರ‍್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಅಲ್ಲಮಪ್ರಭು ಬೆಟ್ಟದೂರು ಅವರು ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲರ ಹೇಳಿಕೆಯನ್ನು ಖಂಡಿಸುತ್ತಾ, ಕೊಪ್ಪಳದಲ್ಲಿ ಕೇಂದ್ರೀಕೃತವಾಗಿರುವ ಕರ‍್ಖಾನೆ ಕೇಂದ್ರೀಕರಣ ನೀತಿಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅಲ್ಲೊಂದು ಇಲ್ಲೊಂದು ಜನ ವಸತಿ ಪ್ರದೇಶದಿಂದ ದೂರದಲ್ಲಿ ಉದ್ಯಮಗಳಿರಬೇಕಲ್ಲದೆ ಕೊಪ್ಪಳ ಜಿಲ್ಲೆಯ ಗಿಣಿಗೇರಿ, ಅಲ್ಲಾನಗರ, ಹಳೆಕನಕಾಪುರ, ಬೇವಿನಹಳ್ಳಿ, ಹಿರೇಬಗನಾಳ, ಹಿರೇಕಾಸನಕಂಡಿ, ಹಾಲರ‍್ತಿ, ಚಿಕ್ಕಬಗನಾಳ, ಕುಣಿಕೇರಿ, ಲಾಚನಕೇರಿ, ಕುಣಿಕೇರಿ ತಾಂಡಾ ಮುಂತಾದ ೨೦ಕ್ಕಿಂತ ಹೆಚ್ಚು ಹಳ್ಳಿಗಳು ಕರ‍್ಖಾನೆಗಳ ಹೊಗೆ, ದೂಳಿನಿಂದ ಬಾಧಿತವಾಗಿ ಜನಜೀವನ ಸಂಕಷ್ಟದಲ್ಲಿದೆ. ರೈತರ ಕೃಷಿಬೆಳೆ ಹಾಳಾಗಿವೆ. ಬೂದಿ ಹೊಗೆ ತಾಗಿದ ಮೇವು ತಿಂದು ದನಗಳು ಅತಿಸಾರದಿಂದ ಸಾಯುತ್ತಿವೆ. ಜನ ಕೆಮ್ಮು, ದಮ್ಮು, ಅಸ್ತಮಾ, ಟಿಬಿ, ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಸಿಗುವಂತೆ ಮಾಡಿ ಕರ‍್ಖಾನೆಗಳಿಂದ ಪರಿಹಾರ ಕೊಡಿಸಬೇಕು. ಬೆಳೆ ಹಾಳು ಆಗಿದ್ದಕ್ಕೆ.ಜಾನುವಾರುಗಳ ಸಾವಿಗೂ ಪರಿಹಾರ ಸಿಗಬೇಕು. ಈಗಾಗಲೇ ಸರಕಾರ ನೇಮಿಸಿದ ತಾಂತ್ರಿಕ ಸಮಿತಿ ವರದಿ ಒಂದು ತಾಸು ಓದಿದರೆ ಸಾಕು. ಮತ್ತೆ ಅಧ್ಯಯನ ಮಾಡಲಾಗುವುದು ಎನ್ನುವುದು ಕಾಲಹರಣ ಆಗುತ್ತದೆ. ಬಾಧಿತ ಪ್ರದೇಶದಲ್ಲಿ ಕೈಗಾರಿಕಾ ಮಂತ್ರಿಗಳು ಸಂಚರಿಸಿ ನೋಡಿದರೆ ಮೇಲ್ನೋಟಕ್ಕೆ ಪರಿಸರ ಮಾಲಿನ್ಯ ಇರುವುದು ಗೊತ್ತಾಗಲಿದೆ. ಕೊಪ್ಪಳದ ಜಿಲ್ಲಾ ಕಚೇರಿ, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು, ಗವಿಮಠ, ಗವಿಶ್ರೀ ನಗರ, ಕಾಳಿದಾಸನಗರ, ಬೇಲ್ದಾರ್ ಕಾಲೋನಿ, ಸಿದ್ದರ‍್ಥ ನಗರ ಮುಂತಾದ ಪ್ರದೇಶಗಳು ಈಗಾಗಲೇ ಬಾಧಿತವಾಗಿದ್ದು ಬಲ್ದೋಟ ಬಿ.ಎಸ್.ಪಿ.ಎಲ್ ವಿಸ್ತರಣೆಯಿಂದ ಕೊಪ್ಪಳ ನಗರ ಮತ್ತು ಇಪ್ಪತ್ತು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಕೊಪ್ಪಳ ಜಿಲ್ಲೆಯ ಪರಿಸರ ಉಳಿಯಬೇಕಾದರೆ ಈಗಿರುವ ಕರ‍್ಖಾನೆಗಳು ಹೊಸ ತಂತ್ರಜ್ಞಾನ ಬಳಸಿ ಹೊಗೆ, ಬೂದಿ ಜನರನ್ನು ಬಾಧಿಸದಂತೆ ಮಾಡಬೇಕು. ಕೊಪ್ಪಳ ಇರಬೇಕು! ಇಲ್ಲವೇ ಬಿ.ಎಸ್.ಪಿ.ಎಲ್ ಇರಬೇಕು. ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬುದನ್ನು ಸಚಿವರು ಮನಗಾಣಬೇಕು ಎಂದರೂ. ಜನ ಸಂಗ್ರಾಮ ಪರಿಷತ್ ನ ರಾಘವೇಂದ್ರ ಕುಷ್ಟಗಿ ಇವರು ಮಾತನಾಡಿ ತುಂಗಭದ್ರಾ ರಕ್ಷಣೆಗೆ ನಾವೆಲ್ಲ ಮುಂದಾಗಬೇಕೆಂದು, ಈಗ ಕೋಪ್ಪಳ ಮಾತ್ರವಲ್ಲ ರಾಯಚೂರು ಸೇರಿ ಆರ್.ಟಿ.ಪಿ.ಎಸ್. ಮೃತ್ಯು ಚಿನ್ನದ ಗಣಿಗಾರಿಕೆಯಿಂದ ಸಿಲಿಕೋಸಿಸ್ ಬಾಧಿಸುತ್ತಿದೆ ಇದಕ್ಕೆ ಚಿಕಿತ್ಸೆ ಕೊಡಲು ಮಧ್ಯಪ್ರದೇಶದಲ್ಲಿ ಮಾತ್ರ ಇದೆ. ಇನ್ನೊಂದು ಎಐಐಎಂಎಸ್ ನಲ್ಲಿ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ವೇದಿಕೆ ಮೇಲೆ ಮುದುಕಪ್ಪ ಎಂ. ಹೊಸಮನಿ, ಮಹಾಂತೇಶ ಕೊತಬಾಳ, ಶುಕರಾಜ ತಾಳಕೇರಿ, ಮದ್ದಾನಯ್ಯ ಹಿರೇಮಠ, ಮಾನವ ಬಂಧುತ್ವ ವೇದಿಕೆ ಮಹಿಳಾ ಸಂಚಾಲಕಿ ಆದ ಶಶಿಕಲಾ ಮಾತನಾಡಿದರು. ವೇದಿಕೆ ಮೇಲೆ ಕೊಜಿಬ ಆಂದೋಲನ ಸಂಚಾಲಕರಾದ ಡಿ.ಎಚ್. ಪೂಜಾರ, ಟಿ ರತ್ನಾಕರ ಶರಣು ಗಡ್ಡಿ, ನಜೀರಸಾಸಾಬ್ ಮೂಲಿಮನಿ, ಎಸ್.ಎ. ಗಫಾರ್, ಶರಣು ಶೆಟ್ಟರ್, ಎಂ.ಕೆ.ಸಾಹೇಬ, ಶರಣು ಪಾಟೀಲ ಇದ್ದರು.

About Mallikarjun

Check Also

ಮಂತ್ರಾಲಯದಿಂದ ವಾಪಸ್ ಬರುವಾಗ ಆಂಧ್ರದ ಕರ್ನೂಲ್ ಬಳಿ ಭೀಕರ ಅಪಘಾತ ಮೂವರ ದುರ್ಮರಣ.

Three people died in a horrific accident near Kurnool, Andhra Pradesh, while returning from Mantralaya. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.