Mohammad Saab Dalpati requested KPCC president to give MLC seat to Iqbal Ansari
ಗಂಗಾವತಿ: ಅಭಿವೃದ್ಧಿ ಹರಿಕಾರ ಬಡವರ ಬಂಧು ದೀನ ದಲಿತರ ನಾಯಕ ಗಂಗಾವತಿ ವಿಧಾನಸಭಾ ಕ್ಷೇತ್ರವನ್ನು ಬದಲಾವಣೆ ಮಾಡಿದಂತಹ ಅಖಂಡ ಚಕ್ರವರ್ತಿಯಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ಮತ್ತೊಮ್ಮೆ ಅಭಿವೃದ್ಧಿ ಪರ್ವ ಆರಂಭಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಜಿ ಅವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ ಅವರಿಗೆ ಹಾಗೂ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ಮತ್ತು ಪಕ್ಷದ ಹಿರಿಯ ವರಿಷ್ಠರಿಗೆ. ಇಕ್ಬಾಲ್ ಅನ್ಸಾರಿ ಅವರಿಗೆ ಎಂ. ಎಲ್. ಸಿ .ಸ್ಥಾನ ನೀಡಬೇಕೆಂದು ಈ ಪತ್ರಿಕೆ ಪ್ರಕಟಣೆ ಮೂಲಕ ಮಹಮ್ಮದ್ ಸಾಬ ದಳಪತಿ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದರು.
ನಂತರ ಪತ್ರಿಕ ಪ್ರಕಟಣೆ ಉದ್ದೇಶಿಸಿ ಮಾತನಾಡಿ. ಇಕ್ಬಾಲ್ ಅನ್ಸಾರಿ ಅವರು ಕೇವಲ ಗಂಗಾವತಿ ಕ್ಷೇತ್ರಕ್ಕೆ ಸೀಮಿತ ಅಲ್ಲದೆ ಇಡೀ ಕೊಪ್ಪಳ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು ಹೊಂದಿರುವಂತಹ ನಾಯಕ ಮತ್ತು ಅವರು ಅಭಿವೃದ್ಧಿಯಲ್ಲಿ ಎಲ್ಲಾ ಶಾಸಕರು ಒಳಗೊಂಡಂತೆ ಅವರು ಶಾಸಕರಿದ್ದಾಗ ಅಭಿವೃದ್ಧಿಗಾಗಿ ಮಾಡಿದಂತಹ ಕೆಲಸ ಕಾರ್ಯಗಳು ಈಗಲೂ ಕೂಡ ನಮ್ಮ ಕಣ್ಣ ಮುಂದೆ ಇವೆ. ಮತ್ತು ಅವರ ಮಾಡಿದಂತ ಕೆಲಸ ಕಾರ್ಯಗಳು ಸಾರ್ವಜನಿಕರಲ್ಲಿ ಮನೆಮತಾಗಿವೆ. ಮತ್ತು ಎಲ್ಲಾ ಜಾತಿಯ ಸರ್ವ ಜನಾಂಗವನ್ನು ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಮತ್ತು ಎಲ್ಲಾ ಜಾತಿ ಜನಾಂಗದ ಜನರೊಂದಿಗೆ ಸರಳತೆ ಸಹಬಾಳ್ವೆಯಿಂದ ಹೊಂದಿಕೊಂಡು ಹೋಗುವಂತಹ ಉತ್ತಮ ಮನಸ್ಸು ಉಳ್ಳ ನಾಯಕ ಅಂದರೆ ಅದು ನಮ್ಮ ಇಕ್ಬಾಲ್ ಅನ್ಸಾರಿ ಅವರೇ ಮತ್ತು ಇದಲ್ಲದೆ ಶೋಷಿತ, ಹಿಂದುಳಿದ, ದಲಿತರು ಅಲ್ಪಸಂಖ್ಯಾತರ ಮತ್ತು ಬಡವರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದ ನಾಯಕ ಇಕ್ಬಾಲ್ ಅನ್ಸಾರಿ ಅವರು ಮತ್ತು ಎಲ್ಲರೊಂದಿಗೆ ಸಾಬಾಳ್ವೆಯಿಂದ ನಡೆದುಕೊಂಡು ಎಲ್ಲರನ್ನೂ
ಒಟ್ಟುಗೂಡಿಸಿಕೊಂಡು ಹೋಗುತ್ತಿರುವ ನಮ್ಮ ನಾಯಕ ಅನ್ಸಾರಿಯವರು ಕಳೆದ ಚುನಾವಣೆಯಲ್ಲಿ ಅನ್ಸಾರಿಯವರು ಗೆದ್ದು ಸೋತಿದ್ದಾರೆ, ಹಾಗಾಗಿ ಅವರು ಸರ್ವ ಜನಾಂಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರು ಆದ್ದರಿಂದ ನಮ್ಮ ಇಕ್ಬಾಲ್ ಅನ್ಸಾರಿ ಅವರಿಗೆ ಎಂ. ಎಲ್.ಸಿ. ಸ್ಥಾನ ನೀಡಬೇಕೆಂದು ವರಿಷ್ಠರಲ್ಲಿ ಈ ಪತ್ರಿಕೆ ಮೂಲಕ ಮತ್ತೊಮ್ಮೆ ಮಗದೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹಮ್ಮದ್ ಸಾಬ್ ದಳಪತಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಮನವಿ ಮಾಡಿಕೊಂಡರು