Breaking News

ನಗರಸಭೆ ನಿರ್ಲಕ್ಷ ಇಂದಿರಾನಗರ ನಿವಾಸಿಗಳಿಗೆ ಘನ ತ್ಯಾಜ್ಯ ವಸ್ತುವಿನ ಬೆಂಕಿಯ ವಾಸನೆಯಿಂದ ರೋಗ ರುಜೀನುಗಳಿಗೆ


ಗಂಗಾವತಿ :ನಗರಸಭೆಯ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಇಂದಿರಾನಗರ ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಇಡೀ ಒಎಸ್ ಬಿ ರಸ್ತೆಯ ಕಸವನ್ನು ಗೂಡಿಸಿ ಕಸ ಹಾಗೂ ಘನತ್ಯಾಜ್ಯವನ್ನು ಇಂದಿರಾನಗರದ ಹಳೆಯ ಮಲ್ಲಿಕಾರ್ಜುನ ಟಾಕೀಸ್ ಬಯಲಿನಲ್ಲಿ ಹಾಕಿ ನಗರಸಭೆಯವರು ಪ್ರತಿನಿತ್ಯ ಬೆಂಕಿ ಹಚ್ಚುವುದರಿಂದ ಇದರ ಹೊಗೆ ಮತ್ತು ವಿಷಯುಕ್ತ ಗಾಳಿ ಸೇವನೆಯನ್ನು ಇಡೀ ಇಂದಿರಾನಗರದ ನಿವಾಸಿಗಳು ಮತ್ತು ಇಲ್ಲಿಯ ವ್ಯಾಪಾರಸ್ಥರು ಸೇವನೆ ಮಾಡುವುದು ಸಾಮಾನ್ಯವಾಗಿದೆ. ಕಸವನ್ನು ಇಲ್ಲಿ ಹಾಕದಂತೆ ಮತ್ತು ಈ ಜಾಗಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಬೀಗ ಹಾಕುವಂತೆ ಸ್ಥಳೀಯರು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಮಲ್ಲಿಕಾರ್ಜುನ ಟಾಕೀಸ್ ಜಾಗವನ್ನು ಕೆಲವು ವ್ಯಾಪಾರಿಗಳು ಖರೀದಿ ಮಾಡಿದ್ದು ಬಯಲು ಜಾಗವನ್ನು ಹಾಗೇ ಬಿಟ್ಟಿರುವುದರಿಂದ ಇಲ್ಲಿ ಸಾರ್ವಜನಿಕರು ಹಾಗೂ ನಗರಸಭೆಯವರು ಕಸ ಹಾಗೂ ತ್ಯಾಜ್ಯ ಹಾಕುತ್ತಿದ್ದಾರೆ. ಕೂಡಲೇ ನಿಲ್ಲಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಇಲ್ಲಿ ಹಾಕಿದ ಕಸ ಹಾಗೂ ತ್ಯಾಜ್ಯವನ್ನು ನಗರಸಭೆ ಮುಂದೆ ಸುರಿದು ಬೆಂಕಿ ಹಚ್ಚಲಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.