Presentation of two works by Rudramma Hasina
ಗಂಗಾವತಿ, ೨೮:ಹಿರಿಯ ಮಹಿಳಾ ಸಾಹಿತಿ ರುದ್ರಮ್ಮ ಹಾಸಿನಾಳ ಅವರು ಬರೆದಿರುವ ವಚನ ಹೊಳವು ಹಾಗೂ ಬೆಳಗಿನೊಳಗೆ ಮಹಾಬೆಳಗು ಎಂಬ ಎರೆಉ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ (ಜ.೨೮) ನೆರವೇರಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಅಂಗಡಿ ತಿಳಿಸಿದ್ದಾರೆ.
ನಗರದ ಸಿದ್ದಿಕೇರಿ ರಸ್ತೆಯಲ್ಲಿರುವ ಶ್ರೀನಗರದ ರುದ್ರಮ್ಮ ಅಮರೇಶಪ್ಪ ಹಾಸಿನಾಳ ಅವರ ನಿವಾಸದಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಹುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಿರುಗುಪ್ಪಾದ ಹಿರಿಯ ಸಾಹಿತಿ ಸರ್ವಮಂಗಳಾ ವಿರೂಪಾಕ್ಷಗೌಡ ಕೃತಿ ಬಿಡುಗಡೆ ಮಾಡುವರು.
ಸಾಹಿತಿ, ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸುವರು, ಡಾ. ಅಮರೇಶ ಪಾಟೀಲ್, ಡಾ. ಶಿವಕುಮಾರ ಮಾಲಿಪಾಟೀಲ್, ಜಗದೇವಿಕಳಶೆಟ್ಟಿ, ಯಂಕಪ್ಪ ಕಟ್ಟಿಮನಿ ಇತರರು ಭಾಗಿಯಾಗಲಿದ್ದಾರೆ ಎಂದು ಅಂಗಡಿ ತಿಳಿಸಿದ್ದಾರೆ.