Breaking News

ಕ್ರಸ್ಟ್ ಗೇಟ್ ದುರಸ್ಥಿ ಸ್ಥಳಕ್ಕೆ ಲಲಿತಾರಾಣಿ ನೇತೃತ್ವದಲ್ಲಿ ರೈತ ಮುಖಂಡ ಭೇಟಿ, ನೀರು ಹರಿಸುವಂತೆ ಆಗ್ರಹ

A farmer leader led by Lalitharani visited the crust gate repair site and demanded to drain water


ಗಂಗಾವತಿ: ತುಂಗಭದ್ರಾ ಡ್ಯಾಂ ಭರ್ತಿಯಾಗಲು ಇನ್ನು ಕೆಲವು ಟಿಎಂಸಿ ನೀರು ಬಾಕಿ ಇದ್ದು ಈಗಾಗಲೇ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು ಎಡದಂಡೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಹರ್ಲಾಪೂರ ಕ್ರಸ್ಟ್ ಗೇಟ್ ದುರಸ್ಥಿ ಕಾಮಗಾರಿ ಕೈಗೆತ್ತಿಕೊಂಡು ನೀರು ಹರಿಸಲು ವಿಳಂಭ ಮಾಡುತ್ತಿರುವುದು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಜಲಸಂಪನ್ಮೂಲ ಇಲಾಖೆಯವರು ಕೂಡಲೇ ಕಾಲುವೆ ನೀರು ಹರಿಸುವಂತೆ ಕಾಂಗ್ರೆಸ್ ಧುರಿಣೇ ಆನೆಗೊಂದಿ ರಾಜಮನೆತನದ ಲಲಿತಾರಾಣಿ ಶ್ರೀರಂಗದೇವರಾಯಲು ಒತ್ತಾಯಿಸಿದ್ದಾರೆ.
ಅವರು ಎಡದಂಡೆ ಕಾಲುವೆ ಮೈಲ್ ೧೦ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿ ಕಾಮಗಾರಿ ಸ್ಥಳಕ್ಕೆ ರೈತರ ಮುಖಂಡರ ಜತೆ ತೆರಳಿ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಏಪ್ರೀಲ್ ೧೦ ರಂದು ಕಾಲುವೆ ಕ್ಲೋಜರ್ ಆಗಿದ್ದು ಅಲ್ಲಿಂದ ಇಲ್ಲಿಯ ವರೆಗೆ ಕಾಲುವೆ ಹಾಗೂ ಕೆಟ್ಟಿರುವ ಕ್ರಸ್ಟ್ ಗೇಟ್ ಹಾಗೂ ಚೈನ್ ೧೦ ರ ಗೇಟ್ ದುರಸ್ಥಿ ಮಾಡದೇ ಡ್ಯಾಂನಲ್ಲಿ ೫೦ ಟಿಎಂಸಿ ನೀರು ಸಂಗ್ರಹ ಸಂದರ್ಭದಲ್ಲಿ ದುರಸ್ಥಿ ಕಾರ್ಯದ ಟೆಂಡರ್ ಕರೆದು ಕಾಮಗಾರಿ ಆರಂಭಿಸಿರುವುದು ಅಧಿಕಾರಿಗಳು ಮತ್ತು ಸಂಬAಧಪಟ್ಟವರ ನಿರ್ಲಕ್ಷö್ಯಕ್ಕೆ ಕೈ ಗನ್ನಡಿಯಾಗಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಎಡದಂಡೆ ಕಾಲುವೆ ನೀರನ್ನು ನಂಬಿಕೊAಡು ಸಾವಿರಾರು ರೈತರು ಈಗಾಗಲೇ ಭತ್ತದ ಸಸಿ ಮಡಿ ಹಾಕಿಕೊಂಡು ಭತ್ತ ನಾಟಿ ಮಾಡಲು ಸಿದ್ಧತೆ ನಡೆಸಿರುವಾಗ ಇನ್ನೂ ಕಾಲುವೆಗಳಿಗೆ ನೀರು ಹರಿಸದೇ ನಿರ್ಲಕ್ಷö್ಯ ಮಾಡುವುದು ರೈತರ ತಾಳ್ಮೆ ಪರೀಕ್ಷೆ ಮಾಡಿದಂತಾಗಿದೆ. ಕಾಮಗಾರಿಯನ್ನು ಒಂದೆರಡು ದಿನದಲ್ಲಿ ಮುಗಿಸಿ ಕೂಡಲೇ ಕಾಲುವೆಗೆ ನೀರು ಬಿಡಬೇಕು. ಈಗಾಗಲೇ ಮೈಲ್ ೧೦ ರ ಹತ್ತಿರ ಶೇ.೬೦ ತಷ್ಟು ಕಾಮಗಾರಿ ಮುಗಿದಿದ್ದೂ ಕಾಲುವೆ ನೀರು ಹರಿಸಲು ಆರಂಭಿಸಿದರೆ ಕಾಲುವೆ ನೀರು ಕೆರೆ ಕಟ್ಟೆ ತುಂಬಿ ರಾಯಚೂರು ತಲುಪುವ ವೇಳೆಗೆ ಕಾಮಗಾರಿ ಮುಗಿಸಿ ೪ ಸಾವಿರ ಕ್ಯೂಸೆಕ್ಸ್ ಗೇಜ್ ಹೆಚ್ಚಿಸಿದರೆ ರೈತರಿಗೆ ಭತ್ತ ನಾಟಿ ಮಾಡಲು ಗದ್ದೆಯನ್ನು ಸಿದ್ಧ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಸ್ಥಳದಲ್ಲಿದ್ದ ಎಇಇ ಅಮರೇಶ ಕಂಪ್ಲಿ ಅವರ ಜತೆ ಮಾತನಾಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು.

About Mallikarjun

Check Also

ಮಾರ್ಟಳ್ಳಿ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

Universe corruption in Manrega scheme in Martalli Panchayat..! ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.