Breaking News

ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿಬಸವರಾಜ ತೊಂಡಿಹಾಳ ಅವರಿಗೆ ಸ್ವಾಗತ ಸಮಾರಂಭ.

Welcome ceremony for Basavaraja Tondihala in the high school department of Hiresindogi Karnataka Public School.

ಕೊಪ್ಪಳ : ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕರಾದ ಬಸವರಾಜ ತೊಂಡಿಹಾಳ ಅವರಿಗೆ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಅವರು ಮುಸಲಾಪುರ ಸರಕಾರಿ ಪ್ರೌಢಶಾಲೆಯಿಂದ ವರ್ಗಾವಣೆಗೊಂಡು ಹಿರೇಸಿಂದೋಗಿಗೆ ಬಂದು ಸೇರಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಬಸವರಾಜ ತೊಂಡಿಹಾಳ ಅವರಿಗೆ ಪುಸ್ತಕ ಮತ್ತು ಪುಷ್ಪಗಳನ್ನು ನೀಡುವುದರ ಮೂಲಕ ಸ್ವಾಗತಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸೋಮಶೇಖರ ಹರ್ತಿ, ರಾಜ್ಯ ಪರಿಷತ್ ಸದಸ್ಯರಾದ ಸೋಮರೆಡ್ಡಿ ಡಂಬರಹಳ್ಳಿ, ಹಿರಿಯರಾದ ಶರಣಪ್ಪ ತೊಂಡಿಹಾಳ ,ಉಪ ಪ್ರಾಚಾರ್ಯರಾದ ನಾಗರಾಜ ಸುನಗ, ಮುಸಲಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜ ಪೊಲೀಸ ಪಾಟೀಲ , ಶಿಕ್ಷಕರಾದ ಶೋಭಾ ವೇದಪಾಠಕ, ಕಸ್ತೂರಿ ಕಡೇಮನಿ ,ಪವಿತ್ರ ವೈದ್ಯ, ಚಾರುಲತಾ ಹೊನಕಳಸೆ, ರೇಣುಕಾ ಮಣ್ಣೂರು, ಭಾಗೀರಥಿ ಯಲ್ಲನಗೌಡರ, ಸುನಿತಾ ಚಕ್ಕಡಿ, ಶಿಲ್ಪಾ ಚಿತ್ರಗಾರ, ಚೆನ್ನಮ್ಮ ಹಲವಾಗಲಿ, ಮರಿಸ್ವಾಮಿ ಪೂಜಾರ, ಯಲ್ಲಮ್ಮ ಮಳಗಿ, ನಿಸರ್ಗ ಎಂ. ಲಿಂಗಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಫೋಟೋ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗಕ್ಕೆ ವರ್ಗಾವಣೆಗೊಂಡು ಬಂದು ಸೇವೆಗೆ ಸೇರಿರುವ ಬಸವರಾಜ ತೊಂಡಿಹಾಳ ಅವರಿಗೆ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಪುಸ್ತಕ ಮತ್ತು ಪುಷ್ಪಗಳನ್ನು ನೀಡುವುದರ ಮೂಲಕ ಸ್ವಾಗತಿಸಿದರು.

ಜಾಹೀರಾತು

About Mallikarjun

Check Also

” ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಅವರಿಂದ ಕಲ್ಲೇಶ್ ಅವರಿಗೆ ಮುಂಬಡ್ತಿ ನೀಡಿ ಸನ್ಮಾನ”

Hagaribommanahalli CPI Vikas Lamani felicitates Kallesh with promotion” ” ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಅವರಿಂದ ಕಲ್ಲೇಶ್ …

Leave a Reply

Your email address will not be published. Required fields are marked *