Breaking News

ಗಂಗಾವತಿ ರಾಷ್ಟ್ರೀಯ ಬಸವ ದಳಕ್ಕೆ ಅತ್ಯುತ್ತಮ ಕ್ರಿಯಾಶೀಲ ಸೇವಾ ರತ್ನ ಪ್ರಶಸ್ತಿ

Best Active Seva Ratna Award to Gangavathi Rashtriya Basava Dal

ಜಾಹೀರಾತು

ಗಂಗಾವತಿ,19:ಕೂಡಲಸಂಗಮ ದಲ್ಲಿ ೧೨,೧೩,೧೪ ಜರುಗಿದ ಸ್ವಾಭಿಮಾನಿ ಶರಣಮೇಳದಲ್ಲಿ ಗಂಗಾವತಿ ರಾಷ್ಟ್ರೀಯ ಬಸವ ದಳಕ್ಕೆ ಅತ್ಯುತ್ತಮ ಕ್ರಿಯಾಶೀಲ ಸೇವಾ ರತ್ನ ಪ್ರಶಸ್ತಿ ಕೊಡಮಾಡಲಾಯಿತು.ಪ್ರಶಸ್ತಿಗೆ ಮೂಲ ಕರ್ತರಾದ,ಮತ್ತು ಸ್ವಾಭಿಮಾನಿ ಶರಣಮೇಳ ಯಶಸ್ವಿಯಾಗಿ ಕಾರಣ ಕರ್ತರಾದ ಇವರಿಗೆ ಇಂದು ರವಿವಾರ ದಿ,೧೯-೧-೨೦೨೫ ರಂದು ನಗರದ ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ಪ್ರತಿ ವಾರದ ಸಾಮೂಹಿಕ ಪ್ರಾರ್ಥನೆ, ಮತ್ತು ಬಸವ ಯೋಗಿ ಗುರುಸಿದ್ದರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಶರಣ ಮೇಳಕ್ಕೆ ಸೇವೆ ಸಲ್ಲಿಸಿದ ಶರಣ ವಿನಯ್ ಕುಮಾರ್ ಅಂಗಡಿ, ಕವಿತಾ ರಗಡಪ್ಪ ಹಾಗೂ ವೀರೇಶ್ ಅಸರಡ್ಡಿಯವರಿಗೆ ಗೌರವ ಸಲ್ಲಿಸಲಾಯಿತು.

ವಿಶೇಷವಾಗಿ ಈ ಬಾರಿ ಗಂಗಾವತಿ ರಾಷ್ಟ್ರೀಯ ಬಸವ ದಳಕ್ಕೆ ಅತ್ಯುತ್ತಮ ಕ್ರಿಯಾಶೀಲ ಸೇವಾ ರತ್ನ ಪ್ರಶಸ್ತಿ ಬಂದಿದೆ, ಆಯ್ಕೆ ಮಾಡಿದ ಸ್ವಾಭಿಮಾನಿ ಶರಣ ಮೇಳ ಸಮಿತಿಯವರಿಗೆ ರಾಷ್ಟ್ರೀಯ ಬಸವದಳ. ಸರ್ವ ಸದಸ್ಯರು ತುಂಬ ಹೃದಯದ ಧನ್ಯವಾದಗಳನ್ನು ಅರ್ಪಿಸುಲಾಯಿತು.

ಈ ಸಂರ್ದಭದಲ್ಲಿ ರಾಷ್ಟ್ರೀಯ ಬಸವದಳದ ಅದ್ಯಕ್ಷ. ಲೀಪ್ ಕುಮಾರ್ ವಂದಾಲ, ಉಪಾದ್ಯಕ್ಷ ಕೆ ವೀರೇಶ್ವಪ್ಪ, , ಚನ್ನಬಸಮ್ಮ ಕಂಪ್ಲಿ , ಬಸವ ಜ್ಯೋತಿ ಬಿ ಲಿಂಗಾಯತ, ವಿನಯ ಕುಮಾರ್ ಅಂಗಡಿ,

ಮಲ್ಲಿಕಾರ್ಜುನ ಅರಳಹಳ್ಳಿ ದಂಪತಿಗಳು, ಗೌರವ ಅದ್ಯಕ್ಷ. ಹೆಚ್ ಮಲ್ಲಿಕಾರ್ಜುನ ಹೊಸಕೇರಾ ಮತ್ತು ರಾಷ್ಟ್ರೀಯ ಬಸವ ದಳದ ಶರಣರು ಇದ್ದರು.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *