Suicide due to debt: Three arrested

ಕೊಟ್ಟೂರು : ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಡ್ಡಿ ಸಾಲ ಕೊಟ್ಟು ಜನರಿಗೆ ಕಿರುಕುಳ ನೀಡಿರುವುದು ಹೆಚ್ಚಾಗಿದ್ದು
ಹೆಚ್ಚಿನ ಬಡ್ಡಿಗೆ ಹಣ ನೀಡಿ ಜನರ ಜೀವದ ಜೋತೆ ಚೆಲ್ಲಾಟ ಅಡುತ್ತಿದ್ದಾರೆ.ಬಡಪಾಯಿ ಕುಟುಂಬಗಳು ಬಿಂದಿಗೆ ಬಿದ್ದಿರುವ ಘಟನೆ ನಡೆದಿದೆ.
ಕೊಟ್ಟೂರು ತಾಲೂಕಿನ ಗೊಲ್ಲರ ಹಳ್ಳಿ ನಿವಾಸಿ ಚಂದ್ರಯ್ಯ (43), ಸೌಮ್ಯ(35), ಭವಾನಿ (12) ಮತ್ತು ಶಿವಕುಮಾರ್ (8) ಎಂಬವರು ವಿಜಯನಗರ ಜಿಲ್ಲಾ ಹಂಪಿಯಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ಚಂದ್ರಯ್ಯ ಮೃತಪಟ್ಟಿದ್ದು, ಮೂವರು ಹೊಸಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡರು.
ಚಂದ್ರಯ್ಯ ಗೆ ನಾಲ್ವರು ಸಾಲ ನೀಡಿದ್ದು, ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಎಫ್ ಐ ಆರ್ ದಾಖಲಾಗಿದೆ. ಇನ್ನು ಎಸ್ ಬಿ ಐ ಸೇವಾ ಕೇಂದ್ರದ ಸೂಪರ್ ವೈಸರ್ ಆಗಿದ್ದ ಬಸವರಾಜ, ಅಕೌಂಟ್ ಬ್ಲಾಕ್ ಮಾಡಿ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು, ಈತನ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ.
ಸಾಲ ಬಾಧೆಯಿಂದಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿಯ ಚಂದ್ರಯ್ಯ (43) ಹಂಪಿಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಟ್ಟೂರು ಮೂಲದ ಶ್ರೀಕಾಂತ್ ಶೆಟ್ಟಿ, ಜಗದೀಶ್ ಹಾಗೂ ಬಸವರಾಜ ಬಂಧಿತರು. ಹುಣಸಿ ಕಟ್ಟಿ ಗುರು, ವಾಮಯ್ಯ ಎಂಬುವವರನ್ನು ಪೊಲೀಸರು ಮೂವರನ್ನು ಗುರುವಾರ ಬಂಧಿಸಿದ್ದಾರೆ. ಪತ್ರಿಕೆಗೆ ತಿಳಿಸಲಾಯಿತು