Breaking News

ರೋಗಿಗಳಿಗೆ ಸ್ವತಃ ತಂದೆ ತಾಯಿ ಗಳಂತೆ ನೋಡಿಕೊಳ್ಳಬೇಕು ಡಾ.ವಿಜಯಕುಮಾರ್ ಕರೆ 

Dr. Vijayakumar calls for patients to be treated like parents

  ಗಂಗಾವತಿ.25: ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕಾಲೇಜ್ ಆಫ್‌ ನರ್ಸಿಂಗ್ ಮತ್ತು ಇನ್ಸಿಟಿಟ್ಯೂಟ್ ಆಫ್ ನರ್ಸಿಗ್ ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್, ಇದು ನಮ್ಮ ಹಬ್ಬ ಪ್ರತಿಜ್ಞಾವಿಧಿ ಮತ್ತು ದೀಪ ಬೆಳಗಿಸುವ ಕಾರ್ಯಕ್ರಮವನ್ನು ಉದ್ಘಾಟಸಿ‌ ಮಾತನಾಡಿದ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಬೋರ್ಡ್ ಅಧಿಕಾರಿಗಳಾದ ಡಾ.ವಿಜಯಕುಮಾರ ಕೆ.ಆರ್,ವಿದ್ಯಾರ್ಥಿಗಳು ಈ ಒಂದು ಸಂಸ್ಥೆಯನ್ನು ಆಯ್ಕೆ ಮಾಡಿ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ  ನರ್ಸಿಂಗ್ ಹಾಗೂ ಡಾ.ಇಬ್ಬರು ರೋಗಿಗಳು ನೋಡುದು ಆದ್ರೇ ನಾನು ವಿಕ್ಟೋರಿಯಾ ಆಸ್ಪತ್ರೆ ನಾನು ರೋಗಿಗಳನ್ನು ನಮ್ಮ ಸ್ವಾತ ತಂದೆ ತಾಯಿ ತರಹ ಚಿಕಿತ್ಸೆ ಕೊಡುತ್ತೇ ಬೀಕ್ಷರಿಗೂ ಹಾಗೂ ವಿಐಪಿ ಇರಲಿ ಒಂದೇ ರೀತಿಯಲ್ಲಿ ಚಿಕಿತ್ಸೆ ಕೊಡುತ್ತೇನೆ ಆದರಿಂದ ನೀವು ಮುಂದಿನ ದಿನಗಳಲ್ಲಿ ಡಾ.ಯಾಗಿ ಯಾವುದೇ ಹಳ್ಳಿಯಲ್ಲಿ ಹಾಗೂ ಪಟ್ಟಕ್ಕೆ ನೀವು ನೌಕರಿ ಸಿಕ್ಕರೆ ಯಾವುದೇ ಭೇದಭಾವ ಮಾಡದೆ ರೋಗಿಗಳ ಜೊತೆಗೆ ಚನ್ನಾಗಿ ವರ್ತನೆಯಿಂದ  ಇದ್ರೇ ರೋಗಿಗೆ ಬೇಗ ಗುಣಮುಖವಾಗುತ್ತಾನೆ,ಡಾ.ಸವಡಿ  ಅವರು ತುಂಬಾ ಶ್ರಮಜೀವಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಮೂರುಬಾರಿ ಕಾಯಕಲ್ಪ ಪ್ರಶಸ್ತಿ ಸಿಗಬೇಕಾದ್ರೇ ಸುಲಭದ ಕೆಲಸವಲ್ಲ  ತಮ್ಮ ವೃತಿಯಲ್ಲಿ ಪ್ರಮಾಣಿಕವಾಗಿ  ಸೇವೆಯನ್ನು ಮಾಡುವ ಮೂಲಕ ಗಂಗಾವತಿ ಸರ್ಕಾರಿ ಆಸ್ಪತ್ರೆ ಅದ್ರೇ ಈ ರಾಜ್ಯದಲ್ಲಿ ಹೆಸರುವಾಸಿಯಾಗಿದೆ, ಇದಕ್ಕೆ ಕಾರಣ ಡಾ.ಈಶ್ವರ ಸವಡಿ ಹಾಗೂ ಸಿಬ್ಬಂದಿ  ವರ್ಗದವರು,

ಗಂಗಾವತಿ ತಾಲೂಕಿನಲ್ಲಿರುವ ಈ ಒಂದು ಸಂಸ್ಥೆ  ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಬೇಕು, ಈ ಸಂಸ್ಥೆಯಲ್ಲಿ ಕಲಿಯಲು ನಿಮ್ಮ ಪುಣ್ಯ ವಿಧ್ಯಾರ್ಥಿಗಳು ನೀವು ಚನ್ನಾಗಿ ಅಭ್ಯಾಸ ಮಾಡಿ ನಿಮ್ಮ ವೈದ್ಯಕೀಯ ವೃತಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ರೇ ದೇವರು ನೀವು ಅನೊಕೊಂಡಿದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡುತ್ತಾನೆ ಎಂದು ವಿಧ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು,

ಈ ಕಾರ್ಯಕ್ರಮದಲ್ಲಿ  ಎಲ್ಲಾ ವಿಧ್ಯಾರ್ಥಿಗಳು ಬೆಣದಬತ್ತಿ ಹಿಡಿದು ಪ್ರತಿಜ್ಞಾವಿಧಿ ದೀಪ ಬೆಳಗಿಸುವ ಮೂಲಕ ಪ್ರತಿಜ್ಞಾ ಮಾಡಿದರು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಡಾ.ಆನಂದ ಕಿರಿಶ್ಯಾಳ,ಸ್ಪೂರ್ತಿ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ಸ್ ಅಧ್ಯಕ್ಷರಾದ ನಿರ್ಮಲ ಡಾ.ಈಶ್ವರ ಸವಡಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ಟಿ,ಪ್ರಾಚಾರ್ಯರಾದ ಡಾ.ಉಮೇಶ ವಿ.ಪುರದ,ಹೆಚ್.ಪಿ.ಆರ್.ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್‌ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಎಸ್.ಸವಡಿ,ತಾಲೂಕು ಆರೋಗ್ಯ ಅಧಿಕಾರಿ ಡಾ.ಗೌರಿಶಂಕರ್,ಸರ್ಕಾರಿ ವೈದ್ಯಾಧಿಕಾರಿಗಳು ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರು ಉಪವಿಭಾಗ ಆಸ್ಪತ್ರೆ ಗಂಗಾವತಿ ಮುಖ್ಯ ವೈದ್ಯಾಧಿಕಾರಿಗಳು ಡಾ.ಈಶ್ವರ ಶಿ.ಸವಡಿ,ವಾಣಿಜ್ಯೋದ್ಯಮಿ ವಿರೂಪಾಕ್ಷಪ್ಪ ಮುಷ್ಟಿ,ಡಾ.ಸತೀಶ್ ರಾಯ್ಕರ್, ಜಂಗಮರ ಕಲ್ಗುಡಿ ಗ್ರಾ.ಪಂ.ಅಧ್ಯಕ್ಷ ಶ್ರುತಿ ಧನುಂಜಯ್,ಎಸ್.ಕೆ.ಎನ್.ಜಿ.ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕರು ಡಾ.ಮಮತಾಜ್ ಬೇಗಂ,ಸೇರಿದಂತೆ ಇತರರು ಇದ್ದರು

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.