Officials dredging the soil of Bridge Cum Barrage of Minor Irrigation Department at Mladaraswagram.
ನೇಗಿನಹಾಳ : ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಪ್ರಮುಖ ರಸ್ತೆಯ ಪಕ್ಕದಲ್ಲೇ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಬ್ರಿಡ್ಜ್ ಕಮ್ ಬ್ಯಾರೇಜ್ ನ ವ್ಯಾಪ್ತಿಯಲ್ಲಿ ಮಣ್ಣಿನ ಹೂಳು ಸೇರಿದಂತೆ ಗಿಡ ಗಂಟೆಗಳು ಸಂಪೂರ್ಣವಾಗಿ ಬೆಳೆದಿದ್ದು ನೀರು ಸರಾಗವಾಗಿ ಹರಿಯುವುದಕ್ಕೆ ಆಗದೇ ಕೇವಲ 3 ಗೇಟ್ ಗಳಲ್ಲಿ ಮಾತ್ರ ಹರಿಯುತ್ತದೆ. ಇನ್ನೂ ನೀರು ಶೇಖರಣೆ ಆಗುವ ಸ್ಥಳದಲ್ಲಿ ಹೆಚ್ಚು ಮಣ್ಣಿನ ಹೂಳು ತುಂಬಿರುವುದರಿಂದ ನೀರು ಶೇಖರಣೆ ಆಗುವುದು ಅಷ್ಟಕ್ಕೇ ಅಷ್ಟೇ …! ಇನ್ನೂ ಈ ಬ್ರಿಡ್ಜ್ ಕಮ್ ಬ್ಯಾರೇಜ್ ಬರುವುದು ಕಿತ್ತೂರು ಕ್ಷೇತ್ರದ ಶಾಸಕರ ಸ್ವಗ್ರಾಮದಲ್ಲೇ ಇದ್ದು, ದಿನ ನಿತ್ಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುವಾಗ ಈ ಸಮಸ್ಯೆ ಕಣ್ಣಿಗೆ ಗೋಚರಿಸಿದ್ರೂ ಕಳೆದ 2 ವರ್ಷಗಳಿಂದ ಕೈ ಕಟ್ಟಿ ಕುಳಿತಿರುವುದು ನೋಡಿದ್ರೆ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇನ್ನೂ ಬಹುತೇಕ ಸಣ್ಣ ನೀರಾವರಿ ಇಲಾಖೆ ಬ್ರಿಡ್ಜ್ ಕಮ್ ಬ್ಯಾರೇಜ್ ಗಳ ಪರಿಸ್ಥಿತಿ ಇದೇ ರೀತಿ ಇದೆ ಎನ್ನುತ್ತಾರೆ ಈ ಭಾಗದ ರೈತಪರ ಹೋರಾಟಗಾರರು. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಈ ಸ್ಥಳಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರರು ಆದ ಕೆ.ಸಿ ಸತೀಶ್ ಅವರಿಗೆ ಕರೆ ಮಾಡಿ ಇದರ ಬಗ್ಗೆ ಗಮನ ತೆಗೆದುಕೊಂಡು ಬಂದು ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಮಾಡಿದ್ದಾರೆ.
ಬಸವರಾಜ. ರಾಜ್ಯ ವಿಶೇಷ ಪ್ರತಿನಿಧಿ.
Kalyanasiri Kannada News Live 24×7 | News Karnataka
