Breaking News

ರಾಷ್ಟ್ರೀಯ ಸೀನಿಯರ್ ಲಗೋರಿಚಾಂಪಿಯನ್‌ಶಿಪ್‌ನಲ್ಲಿಭಾಗವಹಿಸಲಿರುವ ರಾಜ್ಯ ತಂಡಕ್ಕೆ ಶುಭ ಹಾರೈಕೆ.

Best wishes to the state team who will participate in the National Senior Lagori Championship

ಗಂಗಾವತಿ: ಇದೇ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಯುವ ಕ್ರೀಡಾಪಟುಗಳು ದಿನಾಂಕ ೦೮.೦೯.೨೦೨೩ ರಿಂದ ೧೦.೦೯.೨೦೨೩ ರವರೆಗೆ ಹರಿಯಾಣ ರಾಜ್ಯದ ರೆವರಿ ನಗರದಲ್ಲಿ ನಡೆಯಲಿರುವ ೧೦ನೇ ರಾಷ್ಟಿçÃಯ ಸೀನಿಯರ್ ಲಗೋರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ದಿನಾಂಕ ೦೬.೦೯.೨೦೨೩ ಬುಧವಾರದಂದು ನಗರದ ವಿವೇಕ ಭಾರತಿ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಲಗೊರಿ ಸಂಸ್ಥೆಯ ಪದಾಧಿಕಾರಿಗಳು ರಾಜ್ಯ ತಂಡಕ್ಕೆ ಶುಭಹಾರೈಸಿ ಬಿಳ್ಕೊಟ್ಟರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟೇಲರ್ ಹಾಗೂ ಕಾರ್ಯಾಧ್ಯಕ್ಷರಾದ ರಾಘವೇಂದ್ರ ಸಿರಿಗೇರಿಯವರು ಕ್ರೀಡಾಪಟುಗಳಿಗೆ ಸಿಹಿ ತಿನ್ನಿಸುವ ಮೂಲಕ ಶುಭಾಷಯ ವಿನಿಮಯ ಮಾಡಿದರು.
ರಾಜ್ಯ ಸಂಸ್ಥೆಯ ಕಾರ್ಯದರ್ಶಿ ಎನ್. ಭಾನುಪ್ರಸಾದ್, ಮುಖ್ಯ ತರಬೇತಿದಾರ ಮಹಮ್ಮದ್ ಅಜರುದ್ದೀನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ತಂಡದ ಮಾರ್ಗದರ್ಶಕರಾದ ಶ್ರೀನಿವಾಸ ದೂಳರವರು ಮಾತನಾಡಿ ನಮ್ಮ ಕ್ರೀಡಾಪಟುಗಳು ರಾಷ್ಟಿçÃಯ ಸೀನಿಯರ್ ಲಗೋರಿ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದು ಮುಂಬರುವ ೩೭ನೇ ನ್ಯಾಶನಲ್ ಗೇಮ್ಸ್ಗೆ ಆಯ್ಕೆ ಯಾಗಲಿ ಎಂದು ಹಾರೈಸಿದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.