Zero farmer leader Sidde Gowda accused in Hanur town panchayat rusted vehicle development.
ವರದಿ :ಬಂಗಾರಪ್ಪ ಸಿ ಹನೂರು .
ಹನೂರು : ಸರ್ಕಾರವು ಸಾರ್ವಜನಿಕರಿಗೋಸ್ಕರ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಿ ಶುಚಿತ್ವದ ಕಾರ್ಯದ ಕಾರ್ಯಕ್ಕಾಗಿ ವಾಹನಗಳನ್ನು ಖರೀದಿಸಿ ಪಟ್ಟಣ ಪಂಚಾಯತಿ ಗೆ ನೀಡಿರುತ್ತದೆ ಆದರೆ ಆ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಅಧಿಕಾರಿಗಳು ಬೇಜಾವಬ್ದಾರಿ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗಾತಿ ಎಂದು ಹನೂರು ಪಟ್ಟಣದ ರೈತ ಮುಖಂಡ ಸಿದ್ದೇಗೌಡ ತಿಳಿಸಿದರು .
ಹನೂರು ಪಟ್ಟಣದಲ್ಲಿ ಮಾತನಾಡಿದ ಅವರು ಹಲವಾರು ವಾರ್ಡುಗಳಲ್ಲಿ ಕಸದ ಸಮಸ್ಯೆಗಳನ್ನು ಪರಿಹರಿಸಲು ಸಾದ್ಯವಿಲ್ಲದ ಅಧಿಕಾರಿಗಳು ವಾಹಗಳ ಖರೀದಿ ಹೆಸರಿನಲ್ಲಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟಮಾಡಿರುವುದು ಸಾರ್ವಜನಿಕವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಈಗಾಗಲೇ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊರತು ಪಡಿಸಿದರೆ ಇನ್ನೂಳಿದ ಪ್ರದೇಶಗಳಲ್ಲಿ ಕಸದ ಹಾಗೂನೀರಿನ ಮತ್ತು ಚರಂಡಿ ಸಮಸ್ಯೆಗಳ ಸರಮಾಲೆಯೆ ಎದ್ದು ಕೂತಿದೆ ಇತ್ತ ನೋಡಿದರೆ ಸರ್ಕಾರವು ತಿಂಗಳಿಗೊಬ್ಬರಂತೆ ಅಧಿಕಾರಿಗಳನ್ನು ಬದಲಾಯಿಸಿ ಅಭಿವೃದ್ಧಿಯಲ್ಲಿ ಶೂನ್ಯವಾಗಿ ಮಾಡುತ್ತಿದೆ ಎಂದು ತಿಳಿಸಿದರು .