Breaking News

ದಮ್ಮೂರಿನಲ್ಲಿ ೩೬೯ ನೇ ಶಿವಾನುಭವ ಗೋಷ್ಠಿ

369th Shivanubhava Concert at Dammur

ಜಾಹೀರಾತು




ಯಲಬುರ್ಗಾ : ಸಜ್ಜನರ ಸಂಗದಿಂದ ಹೆಜ್ಜೆನು ಸವಿಯಬಹುದು ,ಒಳ್ಳೆಯ ಆಚಾರ, ವಿಚಾರ ನಡೆ ನುಡಿಯಿಂದ ಪ್ರೀತಿ ಪ್ರೇಮದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ ಎಂದು ಸ.ಪ್ರೌ.ಶಾಲೇಯ ಮು.ಗುರು ಎಫ್.ಎಂ.ಕಳ್ಳಿ ಅವರು ಮಾತನಾಡಿ ಸಜ್ಜನರ ಸಂಗದೋಡನೆ ಬೆರೆತಾಗ ಸಂಸ್ಕಾರ ಸಂಸ್ಕೃತಿಯನ್ನು ಪಡೆಯುವದಕ್ಕೆ ಸಾಧ್ಯವಾಗುತ್ತದೆ ಎಂದರು. ಮನುಷ್ಯ ಸಂಗಜೀವಿ ಅದರಂತೆ ಎಲ್ಲಾ ಪ್ರಾಣಿಗಳು ಸಹಿತ ಸಂಗ ಜೀವಿಗಳೆ, ಅದರಲ್ಲಿ ಮನುಷ್ಯ ಬುದ್ದಿಜೀವಿ ಈ ಮನುಷ್ಯ ಸಂಗ ಪರಿಹಾರವನ್ನು ಬಿಟ್ಟು ಸಮಾಜದಲ್ಲಿ ಬದುಕಲಾರ ಸುಖ ದುಃಖಗಳನ್ನು ಹಂಚಿಕೊಳ್ಳುವದಕ್ಕೆ ವ್ಯಕ್ತಿಗಳು ಬೇಕು ,ಸ್ನೇಹ ಪ್ರೀತಿಗಾಗಿ ಉತ್ತಮ ಸಂಗ ಬೇಕು ,ಉತ್ತಮರ ಸಂಗ ಹಾಲು ಜೇನು ಇದ್ದಂತೆ , ವ್ಯಕ್ತಿಗಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಅವರು ಸಂಸ್ಕಾರ ಸಂಸ್ಕೃತಿಯನ್ನು ಜಿವನದಲ್ಲಿ ಅಳವಡಿಸಿಕೊಂಡು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಸಹಕಾರ ನಿಡುವ ದಯ ಗುಣಗಳನ್ನು ಪಡೆದುಕೊಂಡು ಪರೋಪಕಾರಿ ಕಾರ್ಯಗಳನ್ನು ಮಾಡುವದಕ್ಕೆ ಸಾದ್ಯ ಎಂದುಮರಕಟ್ಟಿಯ ಶರಣ ಅಂಬರೇಷಪ್ಪ ಬಳ್ಳಾರಿ ಅವರು ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಚತುರ್ದಶಿ ಅಂಗವಾಗಿ ಹಮ್ಮಿಕೊಂಡಿರುವ ೩೬೯ ನೇ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು. ಚಿಂತನ ಗೋಷ್ಠಿಯಲ್ಲಿ , ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಸಜ್ಜನರ ಸಂಗದಿಂದ ಬದುಕು ಬಾಳು ಬಂಗಾರವಾಗುತ್ತದೆ ಹೂವಿನ ಜೋತೆ ದಾರ ಸಂಗ ಮಾಡಿದಾಗ ದೇವರ ಪೂಜೆಗೆ, ಗುರುವಿನ ಪಾದಕ್ಕೆ ಅರ್ಪಿತವಾಗುತ್ತದೆ ಇದರಿಂದ ಉತ್ತಮರಾಗಲು ಸಾದ್ಯ ಎಂದರು. ಧರ್ಮರಮಠದ ಹನುಮಂತಪ್ಪಜ್ಜ ಹಾಗೂ ಶರಣಯ್ಯ ಹಿರೇಮಠ , ಸಾನಿಧ್ಯ ವಹಿಸಿದ್ದರು. ಈ ವೇಳೆ ಸ.ಮಾ.ಹಿ.ಪ್ರಾ.ಶಾಲೆಯ ಮು.ಗುರು ಕನಕಪ್ಪ ಕಂಬಳಿ, ಕಲಾವಿದರ ಒಕ್ಕೂಟ ಸಂಘದ ಅಧ್ಯಕ್ಷ ಕಳಕಪ್ಪ ತೊಂಡಿಹಾಳ,ವಕೀಲರಾದ ಪ್ರಕಾಶ ಉಪ್ಪಾರ,ಮಲ್ಲನಗೌಡ ಪಾಟಲ, ಮುಖಂಡರಾದ ಹನುಮಗೌಡ್ರ ಬಳ್ಳಾರಿ ,ಹನುಮಂತಪ್ಪ ಹುಣಶ್ಯಾಳ,ಮಲ್ಲನಗೌಡ ನಿಡಗುಂದಿ,ಯಮನೂರಪ್ಪ ಚಿಕ್ಕಗೌಡ್ರ,ಭೀಮಣ್ಣ ಹವಳಿ,ಶೇಖರಗೌಡ ದ್ಯಾಮನಗೌಡ್ರ,ದುರಗೇಶ ಹರಿಜನ ,ಡಾ.ಪ್ರಕಾಶ ರಾವಣಕಿ, ನೀಲಕಂಠಪ್ಪ ರೋಡ್ಡರ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಸಂಗೀತ ಸೇವೆ ನಿಡಿದರು. ಮರಕಟ್ಟ ಹಾಗು ದಮ್ಮೂರ ಸೇರಿದಂತೆ ಇತರ ಭಕ್ತರು ಇದ್ದರು.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *