Electric poles that suddenly fell: No danger.

ಕಲ್ಯಾಣ ಸಿರಿ, ಕುಷ್ಟಗಿ: ತಾಲೂಕಿನ ತಾವರಗೇರಾ ಹೋಬಳಿ ಜುಮಲಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಗ್ರಾಮದಲ್ಲಿ ಏಕಾಏಕಿ ಮೂರು ಕಂಬಗಳು ಧರೆಗುರುಳಿದ ಘಟನೆ ನಡೆದಿದೆ.
ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಗ್ರಾಮದ ಕಲ್ಯಾಣ ಕುಮಾರ್ ಮಾಲಗಿತ್ತಿ ಮನೆಯಿಂದ ಚಿನ್ನಪ್ಪ ನಂದಿಹಾಳ ಮನೆಯವರೆಗೆ ಮೂರು ಕಂಬಗಳು ಧಿಡೀರನೆ ಭೂಮಿಗೆ ಅಪ್ಪಳಿಸಿದ ಕಂಬಗಳು ಬೀಳುತ್ತಿರುವ ದೃಶ್ಯವನ್ನು ಪ್ರತ್ಯಕ್ಷವಾಗಿ ನೋಡಿದ ಕಲ್ಯಾಣ್ ಕುಮಾರ್ ಮಾಲಗಿತ್ತಿ ಕಂಬದ ಹತ್ತಿರ ಬಟ್ಟೆ ತೊಳೆಯಲು ಕುಳಿತಿದ್ದ ತಮ್ಮ ಶ್ರೀಮತಿ ಹಾಗೂ ತಮ್ಮ ಸಹೋದರನ ಪತ್ನಿಯನ್ನು ಅಪಾಯದ ಅಂಚಿನಲ್ಲಿದ್ದವರನ್ನು ಕಾಪಾಡಿದ್ದಾರೆ.
ಹಳೆ ಕಂಬಗಳ ತೆರವಿಗೆ ಆಗ್ರಹ: ಇಂದು ಬಿದ್ದಿರುವ ಕಂಬಗಳಲ್ಲಿ ಒಂದು ಕಂಬ ಅತ್ಯಂತ ಹಳೆಯದಾದ ಕಾರಣ ಹಾಗೂ ಕಂಬಗಳಿಗೆ ಯಾವುದೇ ರೀತಿಯ ರಕ್ಷಾ ಕವಚ ಗಳು ಇಲ್ಲದ ಕಾರಣ ಈ ಘಟನೆ ನಡೆದಿದೆ, ಮುಂದೆ ಮಳೆಗಾಲದ ಸಂದರ್ಭದಲ್ಲಿ ಯಾವುದಾದರೂ ದುರ್ಘಟನೆ ಸಂಭವಿಸುವ ಮುಂಚೆ, ಹಳೆ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕೋಟ್:
” ಸಂಬಂಧ ಪಟ್ಟ ಅಧಿಕಾರಿಗಳಿಗೆ ತತ್ತಕ್ಷಣ ಸೂಚನೆ ನೀಡಿ ತುರ್ತಾಗಿ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ”
( ದೊಡ್ಡನಗೌಡ ಹೆಚ್ ಪಾಟೀಲ್ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು ಕುಷ್ಟಗಿ ವಿಧಾನಸಭಾ ಕ್ಷೇತ್ರ)
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಭೀಮನಗೌಡ ಪಾಟೀಲ್, ಕಲ್ಯಾಣ ಕುಮಾರ್ ಮಾಲಗಿತ್ತಿ, ಅಮರೇಶ ಮಾಲಗಿತ್ತಿ, ದುರುಗಪ್ಪ ಹರಿಜನ,ಮರಿಯಪ್ಪ ಸಿಂಗ್ರಿ, ದೊಡ್ಡಪ್ಪ ನಂದಿಹಾಳ, ಬಸವರಾಜ ಮ್ಯಾದರಡೊಕ್ಕಿ, ಹನುಮೇಶ ಮರಟಗೇರಿ, ಗಣೇಶ ನಂದಿಹಾಳ, ಲೈನ್ ಮ್ಯಾನ್ ಮುದುಕಪ್ಪ ಉರಾಳ ಸೇರಿದಂತೆ ಗ್ರಾಮಸ್ಥರು ಇದ್ದರು.
ಫೋಟೋ: ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ಜುಮಲಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಗ್ರಾಮದಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು.