Breaking News

ದೀಕ್ಷಾಭೂಮಿ ಯಾತ್ರೆಗೆ ಹೊರಟವರಿಗೆ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ

MLA M.R. Manjunath drives those who have left for Dikshabhumi Yatra.


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ರಾಜ್ಯ ಸರ್ಕಾರದ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ.  ಡಾ.ಬಿ.ಆರ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕಾರ ಮಾಡಿದ ಸ್ಥಳವಾದ ಮಹಾರಾಷ್ಟ್ರದ ನಾಗಪುರಕ್ಕೆ ‘ದೀಕ್ಷಾ ಭೂಮಿ ಯಾತ್ರೆಗೆ’ ತೆರಳುವವರಿಗೆ ಶಾಸಕರಾದ ಎಂ ಆರ್ ಮಂಜುನಾಥ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು .
ನಂತರ ಮಾತನಾಡಿದ ಅವರು ಡಾ.ಅಂಬೇಡ್ಕರ್ ಅವರು 1956ರ ಅಶೋಕ ವಿಜಯದಶಮಿಯ ದಿನ ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಸ್ಮರಣೆಯ ನಿಮಿತ್ತ ದೀಕ್ಷಾಭೂಮಿ ಯಾತ್ರೆ ಜರುಗುತ್ತದೆ.
ಅದ್ದರಿಂದ
ದೀಕ್ಷಾಭೂಮಿಯು ಭಾರತದ ಮಹಾರಾಷ್ಟ್ರ ರಾಜ್ಯದ ನಾಗಪುರ ನಗರದಲ್ಲಿ ನೆಲೆಗೊಂಡಿರುವ ನವಯಾನ ಬೌದ್ಧಧರ್ಮದ ಪವಿತ್ರ ಸ್ಮಾರಕವಾಗಿದೆ.
ಇಲ್ಲಿಗೆ ತೆರಳುವ ಯಾತ್ರಾತ್ರಿಗಳಿಗೆ ಸರ್ಕಾರದಿಂದ ಅನುದಾನ ನೀಡಿ ಕಳಿಸಕೂಡಲಾಗುತ್ತಿದ್ದು ಮುಂದಿನ ದಿನದ  ಕ್ಷೇತ್ರದ ಹೆಚ್ಚಿನ ಜನತೆ ಸದುಪಯೋಗಪಡಿಸಿಕೂಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ‌ ಡಿ ಎಸ್ ಎಸ್ ಸಂಚಾಲಕ ದೂಡ್ಡಿಂದುವಾಡಿ ಸಿದ್ದರಾಜು. ಚಲವಾಧಿ ಮಹಾಸಭಾ ಅದ್ಯಕ್ಷ ಬಸವರಾಜು. ಸಿದ್ದರಾಜು. ಪ್ರಕಾಶ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.