Kannada Rajyotsava program on behalf of Sulya Ambedkar Adarsh Seva Samiti
ದಕ್ಷಿಣಕನ್ನಡ ಸುಳ್ಯ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು ಮುಖ್ಯ ಅಥಿತಿಗಳಾಗಿ ಕಳೆದ ವರ್ಷ ಚಿತ್ರದುರ್ಗದಲ್ಲಿ ಮದರ್ ಡ್ರೀಮ್ಸ್ ಸಂಸ್ಥೆಯವರು ನಡೆಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ರಾಜೇಶ್ ಪಣಿಕ್ಕರ್ ಮೇನಾಲ ಮತ್ತು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ ಪಲ್ಲತ್ತಡ್ಕ. ಅಜ್ಜಾವರ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಹರೀಶ್ ಮೇನಾಲ.ಪದಾಧಿಕಾರಿಯಾದ ಮಧು ಸೂಧನ್ ಕಾಟಿಪಳ್ಳ. ಮತ್ತು ಸಮಿತಿಯ ಸರಸ್ಯರುಗಳು ಭಾಗವಹಿಸಿದರು. ಮುಖ್ಯ ಅಥಿತಿ ನೆಲೆಯಿಂದ ಮಾತನಾಡಿದ ರಾಜೇಶ್ ಪಣಿಕ್ಕರ್ ರವರು ಕನ್ನಡ ನಾಡಿನ ನಾಡು ನುಡಿ ಸಂಸ್ಕ್ರತಿ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೇರ ಕರ್ತವ್ಯ. ಹಾಗೂ ಈ ದೇಶದ ಕಾನೂನನ್ನು ಗೌರವಿಸಿ ಪಾಲಿಸಬೇಕಾದದ್ದು ನಮ್ಮ ಹೊಣೆಗಾರಿಕೆ ಎಂದರು.ಇನ್ನೋರ್ವ ಮುಖ್ಯ ಅಥಿತಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಪಲ್ಲತ್ತಡ್ಕ ಮಾತನಾಡಿ ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ನಾವು ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಮಾತನಾಡುವ ಬದಲು ನಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಮತ್ತು ಇವತ್ತಿನ ದಿನಗಳಲ್ಲಿ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಸೇರಿಸುವುದು ನಾವು ಹೆಚ್ಚು ಗಮನಿಸುತ್ತಿದ್ದೇವೆ.ಆದಷ್ಟು ನಾವು ನಮ್ಮ ಮಕ್ಕಗಳನ್ನು ಕನ್ನಡ ಸರ್ಕಾರಿ ಶಾಲೆಯಲ್ಲಿ ಓದುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು. ಹರೀಶ್ ಮೇನಾಲ ಜನತೆ ರಾಜ್ಯೋತ್ಸವದ ಶುಭಾಶಯ ಕೋರಿದರು