Breaking News

ಪ್ರತಿ ಅಮವಾಸೆ ಕಿಷ್ಕಿಂದಿಯಅಂಜನಾದ್ರಿ ಸನ್ನಿಧಿಯಲ್ಲಿ ಭೋಜನ ಪ್ರಸಾದ ವ್ಯವಸ್ಥೆ,,, ಜಿ ರಾಮಕೃಷ್ಣ,

Arrangement of Bhoja Prasad in Kishkindiya Anjanadri Sannidhi every new moon,,, G Ramakrishna,

ಗಂಗಾವತಿ, 17 ಸಮಾಜ ಸೇವೆ ಜೊತೆಗೆ ಧಾರ್ಮಿಕ ಮನೋಭಾವನೆ ಹೊಂದಿರುವ ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಜಿ ರಾಮಕೃಷ್ಣ ಅವರು ಸೋಮವಾರದಂದು ಭೀಮನ ಹಾಗೂ ನಾಗರ ಅಮಾವಾಸ್ಯೆ ಪ್ರಯುಕ್ತ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಭೋಜನ ಹಾಗೂ ಪ್ರಸಾದ ವ್ಯವಸ್ಥೆಯನ್ನು ಮಾಡಿದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ ವಂಶಸ್ಥರಾದ ಶ್ರೀಮತಿ ಲಲಿತಾರಾಡಿ ರಾಯಲು, ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಶ್ರೀರಾಮನಗರದ ಜಿ ರಾಮಕೃಷ್ಣ ಅವರು ಅತ್ಯಂತ ಕ್ರಿಯಾಶೀಲರಾಗಿದ್ದು ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಮನೋಭಾವನೆಯ ಜೊತೆಗೆ ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ, ಅವರು ಪ್ರತಿ ಅಮಾವಾಸ್ಯೆ ಕಿಷ್ಕಿಂದೆಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪುರಸ್ಕಾರದ ಜೊತೆಗೆ ಅನ್ನದಾಸೋಹ ಪ್ರಸಾದ ವ್ಯವಸ್ಥೆಯನ್ನು ನಡೆಸುವ ಸಂಕಲ್ಪವನ್ನು ಹೊಂದಿದ್ದು ಇದರಿಂದ ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿ ಅವರ ಕಾರ್ಯವನ್ನು ಪ್ರಶಂಶಿಸಿದರು, ಪ್ರಸ್ತುತ ಇಂದಿನ ಪ್ರಸಾದ ಹಾಗೂ ಬೋಧನಾ ವ್ಯವಸ್ಥೆಯನ್ನು ಅವರ ಶ್ರೀಮತಿಯಾದ ಶ್ರೀಮತಿ ದುರ್ಗಾರಾಣಿ ಜಿ ರಾಮಕೃಷ್ಣ ಅವರು ನೆರವೇರಿಸಿದ್ದು ಈ ಹಿನ್ನೆಲೆಯಲ್ಲಿ, ಶ್ರೀಮತಿ ದುರ್ಗಾ ರಾಣಿ ಹಾಗೂ ಲಲಿತಾ ರಾಣಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಭಕ್ತರು ಗೌರವಿಸಿದರು,,, ಆಯೋಜಕ ಜಿ ರಾಮಕೃಷ್ಣ ಮಾತನಾಡಿ, ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ಹಾಗೂ ಭೋಜನೆಯ ಮೂಲಕ ಕಿಷ್ಕಿಂದದಆಂಜನೇಯ ಸ್ವಾಮಿ ವಿಶ್ವದ್ಯಂತ ಪಸರಿಸಲಿ ಆತನ ಅನುಗ್ರಹ ಆಶೀರ್ವಾದ ಸದಾ ಕಾಲ ವಿಶ್ವದ ಜನತೆಗೆ ದೊರೆಯಲಿ ಎಂದು ತಿಳಿಸಿದರು, ಇದಕ್ಕೂ ಮುಂಚೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಅಷ್ಟೋತ್ತರ ಶತರಾಮಾವಳಿ ಪಾರಾಯಣ ಪೂಜಾ ಕಾರ್ಯಕ್ರಮಗಳನ್ನು ಶ್ರೀ ರಾಮಕೃಷ್ಣ ದಂಪತಿಗಳು ನೆರವೇರಿಸಿದರು,, ಅಮಾವಾಸ್ಯೆ ಪ್ರಯುಕ್ತ ಆಗಮಿಸಿದ ನೂರಾರು ಸಂಖ್ಯೆ ಭಕ್ತಾದಿಗಳು ಶುಚಿ ರುಚಿಯಾದ ಪ್ರಸಾದ ಭೋಜನವನ್ನು ಸವಿದು ರಾಮಕೃಷ್ಣ ದಂಪತಿಗಳಿಗೆ ಶುಭ ಹಾರೈಸಿದರು,,,

About Mallikarjun

Check Also

ಮಾರ್ಟಳ್ಳಿ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

Universe corruption in Manrega scheme in Martalli Panchayat..! ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.