Breaking News

ಮೈಸೂರು ಮಾರಮ್ಮನ ದೇವಾಲಯದಲ್ಲಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ.

Chamundeshwari Amman Vardhanti Mahotsav at Mysore Maramma Temple.


ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆಯಿತು .
ಹನೂರು ಪಟ್ಟಣದ ಆದಿಪರಶಕ್ತಿ ಮೈಸೂರು ಮಾರಮ್ಮ ದೇವಾಲಯದಲ್ಲಿ ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಪ್ರಯುಕ್ತ ಹಿರಿಯ ಅರ್ಚಕ ಗೋಪಾಲ್ ರಾವ್ ಪವರ್ ಅರುಣ್ ರಾವ್ ಪವರ್ ಅವರಿಂದ ಸಮಯ ಬೆಳಿಗ್ಗೆ 3:00 ಘಂಟೆ ಯಿಂದ ತಾಯಿಗೆ ಹಾಲು ಮೊಸರು ಜೇನುತುಪ್ಪ ಬೆಣ್ಣೆ ಸೇರಿದಂತೆ ಎಳನೀರು ಅಭಿಷೇಕ ಹಾಗೂ ಅರಿಶಿನ ಕುಂಕುಮದ ಅಭಿಷೇಕ ಆಲಾಭಿಷೇಕ ಪಂಚಾಮೃತ ಅಭಿಷೇಕ ದೂಪದ ಆರತಿ ಹಾಗೂ ವಿವಿಧ ಹೂಗಳಿಂದ ಸಿಂಗರಿಸಿ ಬೆಳ್ಳಿ ಕಿರೀಟ ಧರಿಸಿ ವಿಶೇಷ ಅಲಂಕಾರ ಮಾಡುವ ಮೂಲಕ ಮಹಾ ಮಂಗಳಾರತಿಯೊಂದಿಗೆ ಚಾಮುಂಡೇಶ್ವರಿ ವರ್ದಂತಿ ಪೂಜಾ ಕಾರ್ಯಕ್ರಮಗಳನ್ನು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಜರುಗಿಸಲಾಯಿತು ,ಇದನ್ನು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾದರು .
ಭಕ್ತರಿಗೆ
ಅನ್ನಸಾರ್ಪಣೆ : ಇದೇ ಸಮಯದಲ್ಲಿ ಇಂದು ನೆರವೆರಿಸಿದ ವಿಶೇಷ ಚಾಮುಂಡೇಶ್ವರಿ ದೇವಿಯ ಆರಾಧನೆ ಹಾಗೂ ವರ್ಧಂತಿ ಅಂಗವಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಪೂಜೆ ಸಲ್ಲಿಸಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು .

About Mallikarjun

Check Also

ಬಸಾಪಟ್ಟಣಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮೇಣದಬತ್ತಿಬೆಳಗಿಸುವ ಮತದಾನ ಜಾಗೃತಿ ಕಾರ್ಯಕ್ರಮ

ಗಂಗಾವತಿ : ತಾಲೂಕಿನ ಬಸಾಪಟ್ಟಣ ಗ್ರಾ.ಪಂ. ಕಾರ್ಯಾಲಯದ ಮುಂದೆ ಲೋಕಸಭಾ ಚುನಾವಣೆ ಅಂಗವಾಗಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾ.ಪಂ. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.