Breaking News

ಕ.ವಿ.ಪ್ರ.ನಿ.ನಿ ಮತ್ತುಜೆಸ್ಕಾಂ ಗಂಗಾವತಿ ವಿಭಾಗದ ಡೆಲಿಗೆಟ್ ಪ್ರತಿನಿಧಿಗಳ ಆಯ್ಕೆ

ಗಂಗಾವತಿ: ತಾಲೂಕ ಕ.ವಿ. ಪ್ರ.ನಿಗಮದ 22ನೇ ತ್ರೈವಾರ್ಷಿಕ ಮಹಾಧಿವೇಶನಕ್ಕೆ ಪ್ರಾಥಮಿಕ ಪ್ರತಿನಿಧಿ ಆಯ್ಕೆ ನಿಮಿತ್ಯ ಚುನಾವಣೆ ಜರುಗಿತು.

ಜಾಹೀರಾತು

ಮೂರು ಸ್ಥಾನಕ್ಕೆ ನಡೆದ ಚುನಾವಣೆಗೆ ಎಂಟು ಜನರು ನಾಮಪತ್ರ ಸಲ್ಲಿಸಿದ್ದರು ಅದರಂತೆ ಚುನಾವಣೆ ಪಲಿತಾಂಶ ಪ್ರಕಟಗೊಂಡು ಆದೇಶ ಅಬ್ದುಲ್ ರಫೀಕ 94 ಮತಗಳನ್ನು ಪಡೆದು ಜಯಶಾಲಿಯಾದರು ಬಸವರಾಜ 104,ನಂದಕಿಶೋರ 100 ಮತಗಳನ್ನು ಪಡೆದು ಜಯಶಾಲಿಯಾದರು ಮತಗಳನ್ನು ಪಡೆದು ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ನ್ಯಾಯವಾದಿ ರಾಮು ಯಾದವ್ ಯವರು ಘೋಷಣೆ ಮಾಡಿದರು.

ಈ ಕುರಿತು ಮಾತನಾಡಿದ ಅಬ್ದುಲ್ ರಫೀಕ್ ಅವರು ನಮ್ಮ ಇಲಾಖೆಯ ಡೆಲಿಗೇಟ್ ಚುನಾವಣೆಯಲ್ಲಿ ನಾವು ಮೂರುಜನ ಜಯಗಳಿಸಿದ್ದು ಸಂತೋಷವನ್ನುಂಟು ಮಾಡಿದೆ ಹಾಗೂ ನಮ್ಮ ಸಂಘದ ಸಂಘಟನೆ ನೌಕರರ ಹಿತಕಾಯುವ ಕೆಲಸವನ್ನು ನಿಷ್ಠೆಯಿಂದ ಮಾಡಲಾಗುವದು ಹಾಗೂ ಸಮಗ್ರತೆ ಹಾಗೂ ಐಕ್ಯತೆಗೆ ಮಹತ್ವ ನೀಡಲಾಗುವದು ಸಮಸ್ತ ನೌಕರರ ಕಲ್ಯಾಣಕ್ಕೆ ನಮ್ಮನ್ನು ನಾವು ತೋಡಗಿಸಿಕೊಂಡು ಹೋಗಲಾಗುವದು ನಮ್ಮ ಮೂವರೂ ಮೇಲೆ ನಂಬಿಕೆ ಇಟ್ಟು ನಮ್ಮನ್ನ ಆಯ್ಕೆ ಮಾಡಿದ ಎಲ್ಲಾ ನೌಕರ ಸಹದ್ಯೋಗಿಗಳಿಗೆ ನಾವು ಚಿರರುಣಿಯಾಗಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶರಣಪ್ಪ ದಡಗೋಳ,ಕಲ್ಲಪ್ಪ,,ಶೇಖರಯ್ಯ ಹಿರೇಮಠ, ಶರಣಬಸಪ್ಪ ,ಸಂತೋಷ, ನಾಗರಾಜ, ಗುರುಸಂಗಪ್ಪ, ಮಾಬುಸಾಬ ಡಾಲಾಯತ್ ನೌಕರರು ಸೇರಿದಂತೆ ಅನೇಕ ನೌಕರರು ಹಾಜರಿದ್ದರು.

About Mallikarjun

Check Also

ಬೆಂಗಳೂರಿನಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತಕ್ಕೆ ೧೧ ಜನ ಬಲಿ ವಿಷಾದ: ಭಾರಧ್ವಾಜ್

11 killed in stampede near Chinnaswamy Stadium in Bengaluru: Bhardwaj ಗಂಗಾವತಿ: ಜೂನ್-೦೪ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ …

Leave a Reply

Your email address will not be published. Required fields are marked *