Breaking News

ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿಗೆ ಜಿಲ್ಲಾಧ್ಯಕ್ಷರಾಗಿ ರಂಗನಾಥ ನೇಮಕ

Ranganath appointed as district president of Akhil Bharat Vachana Sahitya and Sanskat Parishad


ಕೊಪ್ಪಳ : ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕಕ್ಕೆ ಇಲ್ಲಿನ ಶಿಕ್ಷಕ ಹಾಗೂ ಯುವ ಸಾಹಿತಿ ರಂಗನಾಥ ಅಕ್ಕಸಾಲಿಗರನ್ನು ನೇಮಕಗೊಳಿಸಿದ್ದಾರೆ.
ಕೇಂದ್ರ ಕಛೇರಿ ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕçತಿಕ ಪರಿಷತ್‌ನ ರಾಜ್ಯಾಧ್ಯಕ್ಷ ಎನ್‌ತಿಮ್ಮಪ್ಪ ಇವರು ಕೊಪ್ಪಳ ಜಿಲ್ಲಾಧ್ಯಕ್ಷರ ಆಯ್ಕೆಯ ಆದೇಶವನ್ನು ಹೊರಡಿಸಿದ್ದು, ಸದರಿ ಆದೇಶದಲ್ಲಿ ಕೂಡಲೇ ಸದರಿಯವರು ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಕೇಂದ್ರ ಕಛೇರಿಯಿಂದ ಅನುಮೋದನೆ ಪಡೆದುಕೊಂಡು, ಸರ್ವಾನುಮತದಿಂದ ಅಂಗೀಕರಿಸಬೇಕು.

ಅಲ್ಲದೇ ನಾಡಿನಾದ್ಯಂತ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್‌ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶರಣರ ತತ್ವಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಿ ಪ್ರತಿಯೊಬ್ಬರ ಮನೆಮನಗಳನ್ನು ಮುಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ನೂತನವಾಗಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್‌ಗೆ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಯುವ ಸಾಹಿತಿ ರಂಗನಾಥ ಅಕ್ಕಸಾಲಿಗರ ಮೂಲತಃ ಶಿಕ್ಷಕ ವೃತ್ತಿಯಿಂದ ಈ ಭಾಗದಲ್ಲಿ ಚಿರಪರಿಚಿತರು. ಇಲ್ಲಿನ ನ್ಯಾಷನಲ್ ಹೈಸ್ಕೂಲ್ ಭಾಗ್ಯನಗರದಲ್ಲಿ ಕನ್ನಡ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯದ ಅಭಿರುಚಿಗಾಗಿ ಜಿಲ್ಲಾಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಎನ್.ತಿಮ್ಮಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

img 20251114 wa04592.jpg

ಸ್ಫುರಣ ಕಿರಣ: ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes

ಸ್ಫುರಣ ಕಿರಣ:ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes Sparkling Ray: Trains an Maths/Dharmapeeths Sparkling …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.