Breaking News

ಆರೋನ್ ಮೀರಜಕರ್ ಆಂಗ್ಲ ಮಾದ್ಯಮ ಶಾಲೆಯಲ್ಲಿಗಾಂಧಿಜಿಯವರ ೧೫೫ನೇ ಜಯಂತಿ ಹಾಗೂ ಲಾಲ್‌ಬಾಹದ್ದೂರ ಶಾಸ್ತಿçಯವರ ೧೨೦ನೇ ಜಯಂತಿ ಆಚರಣೆ.

Aaron Meerzakar in English Medium School 155th birth anniversary of Gandhiji and 120th birth anniversary of Lal Bahadur Shastiç

ಜಾಹೀರಾತು

ಗಂಗಾವತಿ: ಅಕ್ಟೋಬರ್-೨ ಬುಧವಾರದಂದು ನಗರದ ಆರೋನ್ ಮಿರಜಕಕರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ “ಮಹಾತ್ಮ ಗಾಂಧೀಜಿಯವರ ೧೫೫ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿçÃಯವರ ೧೨೦ನೇ ಜನ್ಮ ದಿನಾಚರಣೆಯನ್ನು” ವಿಶೇಷವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರುಬೀನ್ ಮಿರಜಕರ್, ಖಜಾಂಚಿ ಶ್ರೀಮತಿ ಸುನಿತಾ ಮಿರಜಕರ್, ಆಡಳಿತಾಧಿಕಾರಿಗಳಾದ ಶ್ರೀ ಚಂದ್ರಕಾAತ್. ಜಿ. ಶಾಲೆಯ ವ್ಯವಸ್ಥಾಪಕರಾದ ಶ್ರೀ ಮಂಜುನಾಥ, ಮುಖ್ಯ ಶಿಕ್ಷಕರಾದ ಶ್ರೀಮತಿ ಡಾ. ಮಾನಸ ಪಾಟೀಲ್, ಶ್ರೀಮತಿ ರೇಖಾ ಠಾಕೂರ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ಮಹಾತ್ಮ ಗಾಂಧೀಜಿ ಮತ್ತು ಶಾಸ್ತಿçÃಯವರ ಸರಳ ಜೀವನ ಎಲ್ಲರಿಗೂ ಸ್ಪೂರ್ತಿಯಾಗಬೇಕು. ಇದೇ ವರ್ಷ ಬೆಳಗಾವಿ ಅಧಿವೇಶನ ಶತಮಾನೋತ್ಸವ ಪೂರೈಸುತ್ತಿರುವ ಸಂದರ್ಭದಲ್ಲಿ ಅಂದು ನಡೆದಂತಹ ಘಟನಾವಳಿಗಳನ್ನು’ ಕಾರ್ಯದರ್ಶಿಗಳಾದ ರುಬೀನ್ ಮಿರಜಕರ್ ಅವರು ವಿವರಿಸಿದರು.
‘ಶಾಸ್ತಿçಯವರ ಬದುಕು ತುಂಬಾ ಸರಳವಾಗಿತ್ತು. ಅವರು ದೇಶಕ್ಕೆ ನೀಡಿರುವ ಹೇಳಿಕೆ “ಜೈ ಜವಾನ್ ಜೈ ಕಿಸಾನ್” ಇದರ ಮಹತ್ವವನ್ನು ಆಡಳಿತಾಧಿಕಾರಿಗಳಾದ ಚಂದ್ರಕಾAತ್ ಜಿ ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ಭಜನಾ ಕಾರ್ಯ ನೆರವೇರಿತು. ನಂತರದಲ್ಲಿ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ಶ್ರಮಧಾನವನ್ನು ಮಾಡಲಾಯಿತು. ಈ ವೇಳೆ ಗಾಂಧೀಜಿ ಮತ್ತು ಶಾಸ್ತಿçಯವರ ಘೋಷಣೆಗಳನ್ನು ಹೇಳುವುದರ ಮೂಲಕ ಕಾರ್ಯಕ್ರಮ ಸಮಾಪ್ತಿಯಾಯಿತು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.