Breaking News
ಡಿ.18 ರಿಂದ ರಾಷ್ಟ್ರಮಟ್ಟದ 8ನೇ ಸಮವಸ್ತ್ರ ಮೇಳ

8th National Uniform Fair from December 18

ಶಿಕ್ಷಣ ಸಂಸ್ಥೆಗಳು, ರೈಲ್ವೆ, ಆಸ್ಪತ್ರೆ, ಕಾರ್ಪೋರೆಟ್ ವಲಯಗಳಿಗಾಗಿ ವೈವಿಧ್ಯಮ ಸಮವಸ್ತ್ರಗಳ ಅನಾವರಣ

ಬೆಂಗಳೂರು; ಸೋಲಾಪುರ ಗಾರ್ಮೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನಲ್ಲಿ 8 ನೇ ಸಮವಸ್ತ್ರ ಮೇಳವನ್ನು ಡಿಸೆಂಬರ್ 18 ರಿಂದ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.

ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್ ಗಾರ್ಡನ್ ಪ್ಯಾಲೇಸ್ ಗ್ರೌಂಡ್ ನ 8 ನೇ ಗೇಟ್ನಲ್ಲಿ ಆಯೋಜಿಸಿರುವ ಮೇಳಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಮತ್ತು ಸೊಲ್ಲಾಪುರ ಶಾಸಕ ಸುಭಾಷ್ ದೇಶಮುಖ್ ಚಾಲನೆ ನೀಡಿದ್ದಾರೆ ಎಂದು ಮೇಳದ ಅಧ್ಯಕ್ಷ ಸುನೀಲ್ ಗಂಗ್ಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮವಸ್ತ್ರ ಮೇಳವನ್ನು ಡಿಸೆಂಬರ್ 18, 19, 20 ರಂದು ಬೆಂಗಳೂರಿನ ಆಯೋಜಿಸಲಾಗಿದೆ. ಮೇಳದಲ್ಲಿ 1200 ಕ್ಕೂ ಅಧಿಕ ಬ್ರಾಂಡ್ಗಳು ಮತ್ತು ಹತ್ತು ಸಾವಿರ ಸಮವಸ್ತ್ರ ವಿನ್ಯಾಸಗಳು ಒಂದೇ ಸೂರಿನಡಿ ದೊರೆಯಲಿವೆ. ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ರೈಲ್ವೆ ಮತ್ತು ಕಾರ್ಪೊರೇಟ್ ವಲಯಗಳ ಸಮವಸ್ತ್ರ ವಲಯಕ್ಕೆ ಈ ಮೇಳ ಹಬ್ಬವಾಗಲಿದೆ ಎಂದರು.

ಈ ಮೇಳದ ಮೂಲಕ ಏಕರೂಪ ಗುಣಮಟ್ಟದ ಬಟ್ಟೆಯನ್ನು ತಯಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರಿಗಳಿಗೆ ವೇದಿಕೆ ಒದಗಿಸಲಾಗಿದೆ. ಸೊಲ್ಲಾಪುರ ಜಿಲ್ಲೆ ಸಮವಸ್ತ್ರದ ಬಟ್ಟೆ ಕಾರ್ಖಾನೆಗಳನ್ನು ನಡೆಸುತ್ತಿರುವ ಸಮರ್ಥ ಮತ್ತು ಯಶಸ್ವಿ ಉದ್ಯಮಿಗಳನ್ನು ಹೊಂದಿದೆ. ಈ ಏಕರೂಪದ ಉಡುಪುಗಳನ್ನು ವಿಶೇಷ ಮತ್ತು ಗುಣಮಟ್ಟದ ಯಂತ್ರೋಪಕರಣಗಳು ಮತ್ತು ನುರಿತ ಕುಶಲಕರ್ಮಿಗಳಿಂದ ತಯಾರಿಸಲಾಗುತ್ತದೆ ಎಂದರು.

ಉದ್ಯಮಿ ಸುನೀಲ್ ಮೆಂಗ್ಜಿ ಮಾತನಾಡಿ, ಸೋಲಾಪುರ ಮಾತ್ರವಲ್ಲದೇ ವಿಶ್ವದ ಏಕೈಕ ಏಕರೂಪದ ಸೋರ್ಸಿಂಗ್ ಹಬ್ ಆಗುವತ್ತ ದೃಷ್ಟಿ ನೆಟ್ಟಿದೆ. ಅತ್ಯುತ್ತಮ ವಿನ್ಯಾಸ, ಉತ್ತಮ ಗುಣಮಟ್ಟದ ಬಟ್ಟೆ, ನುರಿತ ಕೆಲಸಗಾರರಿಂದ ಸಮವಸ್ತ್ರಗಳನ್ನು ತಯಾರಿಸಿ ಕನಿಷ್ಠ ದರದಲ್ಲಿ ಲಭ್ಯವಾಗುವಂತೆ ಮಾಡಿರುವುದರಿಂದ ಸಮವಸ್ತ್ರದ ಉಡುಪುಗಳತ್ತ ಜಗತ್ತಿನ ಗಮನ ಸೊಲ್ಲಾಪುರದತ್ತ ನೆಟ್ಟಿದೆ ಎಂದರು.

ಕನಿಷ್ಠ ವೆಚ್ಚದಲ್ಲಿ ಗುಣಮಟ್ಟದ ಬಟ್ಟೆಗಳನ್ನು ಬಳಸಿ ಇಲ್ಲಿ ಸಮವಸ್ತ್ರ ತಯಾರಿಸುವುದರಿಂದ ಈ ಸಮವಸ್ತ್ರ ಪ್ರದರ್ಶನಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಕೀನ್ಯಾ, ಜೋರ್ಡಾನ್, ಶ್ರೀಲಂಕಾ, ಥಾಯ್ಲೆಂಡ್ ಮುಂತಾದ ದೇಶಗಳ ಉದ್ಯಮಿಗಳು ಈ ಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ಪತ್ರಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ಧ ಪತ್ರಕರ್ತರ ಪ್ರತಿಭಟನೆ

Journalists protest against Nelamangala BJP President Jagdish Chaudhary who insulted and threatened journalists.

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಪತ್ರಕರ್ತರನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿರುವ ವಿಚಾರವಾಗಿ ನೆಲಮಂಗಲ ತಾಲ್ಲೂಕು ಸ್ವಾಭಿಮಾನಿ ಪತ್ರಕರ್ತರುಗಳು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ನೆಲಮಂಗಲ ತಾಲ್ಲೂಕು ಕಚೇರಿ ಎದುರು ಜಗದೀಶ್ ಚೌದ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ರೌಡಿ ಶೀಟರ್ ಜಗದೀಶ್ ಚೌದ್ರಿರವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ನೆಲಮಂಗಲ ಪತ್ರಕರ್ತರ ಪ್ರತಿಭಟನೆಗೆ ವಕೀಲ್ ಸಾಬ್ ಎಂದೇ ಖ್ಯಾತಿಗಳಿಸಿರುವ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ರವರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಪತ್ರಕರ್ತರ ಜೊತೆ ನಿಂತು ರೌಡಿ ಶೀಟರ್ ಜಗದೀಶ್ ಚೌದ್ರಿ ಹೆದರಿಕೆ, ಬೆದರಿಕೆಗೆ ಪತ್ರಕರ್ತರು ಹೆದರಬಾರದು. ರೌಡಿ ಶೀಟರ್ ನನ್ನು ಪೊಲೀಸರು ಮೊದಲು ಮಟ್ಟಹಾಕಿ ಪತ್ರಕರ್ತರನ್ನು ರಕ್ಷಣೆ ಮಾಡಬೇಕು. ನಾನು ಕೂಡ ನಿಮ್ಮ ಜೊತೆ ಇದ್ದೇನೆ ಪೊಲೀಸರು ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು. ನೆಲಮಂಗಲ ತಾಲ್ಲೂಕು ಪತ್ರಕರ್ತರಿಗೆ ಜಗದೀಶ್ ಚೌದ್ರಿ ಕೆಲ ವರ್ಷಗಳ ಹಿಂದೆ ಜಾಹಿರಾತು ನೀಡಿದ್ದು ಆ ಹಣವನ್ನು ಫೋನ್ ಪೇ ಮೂಲಕ ನೀಡಿ ಇನ್ನುಳಿದ ಹಣವನ್ನು ನೀಡದೆ ಪತ್ರಕರ್ತರು ಹಣ ಕೇಳಿದ್ರೆ ಬೆದರಿಕೆ ಹಾಕಿ ಪತ್ರಕರ್ತರು ಬ್ಲಾಕ್ ಮೇಲರ್ ಎಂಬಂತೆ ಬಿಂಬಿಸಿದ್ದಾರೆ. 3 ದಿನದ ಹಿಂದೆ ಜಗದೀಶ್ ಚೌದ್ರಿ ವಿರುದ್ಧ ಟಿ.ಬೇಗೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಭ್ರಷ್ಟ ಅಧಿಕಾರಿಗಳಿಗೆ ಜಗದೀಶ್ ಚೌದ್ರಿ ಬೆಂಬಲ ನೀಡಬಾರದು ಎಂದು ತಿಳಿಸಿದ್ದು ಈ ಬಗ್ಗೆ ಸುದ್ದಿ ಮಾಡಿದ ಪತ್ರಕರ್ತರುಗಳಿಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಸುದ್ದಿ ಮಾಡಿದ ಪತ್ರಕರ್ತರನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದು ಪತ್ರಕರ್ತರು ರೋಲ್ ಕಾಲ್ ಎಂದು ಜಗದೀಶ್ ಚೌದ್ರಿ ಸಾರ್ವಜನಿಕವಾಗಿ ಪತ್ರಕರ್ತರನ್ನು ನಿಂದಿಸಿದ್ದು ಪ್ರಶ್ನೆ ಮಾಡಿದ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಹಚರರ ಮೂಲಕ ತೇಜೋವಧೆ ಮಾಡಲು ಮುಂದಾಗಿ ಪತ್ರಕರ್ತರ ಕುಟುಂಬದ ಸಣ್ಣ ಮಗು ಸಹಿತ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ಹರಿಬಿಟ್ಟು ಹೆದರಿಕೆ ಹಾಕಿದ್ರು ಈ ಬಗ್ಗೆ ಆಕ್ರೋಶಗೊಂಡ ಪತ್ರಕರ್ತರು ರೌಡಿ ಶೀಟರ್ ಜಗದೀಶ್ ಚೌದ್ರಿ ಗಡಿ ಪಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಜಗದೀಶ್ ಹಾಗೂ ತಹಸೀಲ್ದಾರ್ ಅಮೃತ್ ಅತ್ರೆಶ್ ರವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲ ಸಾಬ್ ಜಗದೀಶ್,ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್, ಪ್ರದಾನ ಕಾರ್ಯದರ್ಶಿ ಆಶಾ ಸೀನಪ್ಪ, ರಾಜ್ಯ ಕಾರ್ಯದರ್ಶಿ ಕೊಟ್ರೇಶ್,ಜಿಲ್ಲಾಧ್ಯಕ್ಷ ಮಂಜುನಾಥ್, ತುಮಕೂರು ಜಿಲ್ಲಾ ಗೌರವ ಅಧ್ಯಕ್ಷ ಸುಧೀಂದ್ರ, ಬೆಂಗಳೂರು ನಗರ ಅಧ್ಯಕ್ಷ ಭಾನುಪ್ರಕಾಶ್, ನೆಲಮಂಗಲ ತಾಲ್ಲೂಕು ಅಧ್ಯಕ್ಷ ಗಂಗಾಧರ್, ಪ್ರದಾನ ಕಾರ್ಯದರ್ಶಿ ವಿಜಯ್ ಹೊಸಪಾಳ್ಯ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬೂದಿಹಾಳ್ ಕಿಟ್ಟಿ, ಉಪಾಧ್ಯಕ್ಷ ರುದ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಹರೀಶ್, ಮಿಲ್ಟ್ರಿಮಾಮ,ರಾಜಶೇಖರ್,ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸಂಘಟನಾ ಕಾರ್ಯದರ್ಶಿ ವೇಣು, ಪತ್ರಕರ್ತರುಗಳಾದ ಗುರು ಪ್ರಸಾದ್, ದಾಬಸ್ಪೇಟೆ ರಾಜೇಶ್, ಪ್ರದೀಪ್, ಶ್ರೀಧರ್, ಮಾರುತಿ, ರಾಮ್ ಪ್ರಸಾದ್, ರಾಮಚಂದ್ರ ಬಾಬು, ಹೊಸದಿಗಂತ ಬಾಬು, ಕಿಶೋರ್, ಅಲೀಮ್, ನಾಗೇಶ್, ಅಬ್ದುಲ್ ಆಫೀಜ್, ಲಕ್ಷ್ಮಣ್, ಸಿದ್ದರಾಜು, ಪವನ್ ಕುಮಾರ್, ವಂದನಾ, ವರ್ಷ, ಕವಿತಾ, ಉಮೇಶ್ ಪೂಜಾರ್, ಅರುಣ್ ಕುಮಾರ್, ಮಾರುತಿ, ಮೋಹನ್, ಸಂಚಾರಿ ಸತ್ಯ ಸಂಪಾದಕ ಶಂಕರ್, ಟೈಮ್ 9 ಜಯರಾಮ್ ಮತ್ತಿತರರು ಸ್ವಾಭಿಮಾನಿ ಪತ್ರಕರ್ತರು ಉಪಸ್ಥಿತರಿದ್ದರು.