Breaking News

ಗ್ಯಾರೆಂಟಿ ಯೋಜನೆ ಜಿಲ್ಲಾಧ್ಯಕ್ಷರಿಂದ ಸಚಿವ ಶಿವರಾಜ್ ತಂಗಡಿಗಿಗೆ ಸನ್ಮಾನ

Minister Shivraj Thandagi was felicitated by the District President of Guarantee Scheme

ಜಾಹೀರಾತು
Screenshot 2024 04 01 16 54 49 64 6012fa4d4ddec268fc5c7112cbb265e7 300x130

ಕಾರಟಗಿ :- ಐದು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಇದೀಗ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚಿಸಿದ್ದು, ಸಮಿತಿಗೆ ಜಿಲ್ಲಾ ಅಧ್ಯಕ್ಷರನ್ನಾಗಿ ರೆಡ್ಡಿ ಶ್ರೀನಿವಾಸ್ ಇವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇಂದು ಸಚಿವ ಶಿವರಾಜ್ ತಂಗಡಗಿ ಅವರ ನಿವಾಸದಲ್ಲಿ ಗ್ಯಾರೆಂಟಿ ಯೋಜನೆಗಳ ಪದಾಧಿಕಾರಿಗಳಿಂದ ಸನ್ಮಾನ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಈ ವೇಳೆ ರೆಡ್ಡಿ ಶ್ರೀನಿವಾಸ್ ಮಾತನಾಡಿ ನನ್ನನ್ನು ಆಯ್ಕೆ ಮಾಡಿರುವ ಸಚಿವರಿಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳು, ನನಗೆ ನೀಡಿರುವ ಈ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿ ಕೊಳ್ಳುತ್ತೇನೆ, 24×7 ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ, ಯಾವುದೇ ಪಲಾನುಭವಿಗಳಿಗೆ ವಂಚಿತರಾಗದಂತೆ ಪ್ರತಿಯೊಬ್ಬರಿಗೂ ಈ ಗ್ಯಾರೆಂಟಿ ಯೋಜನೆಗಳು ಸುಲಭವಾಗಿ ತಲುಪುವ ಹಾಗೆ ಕೆಲಸ ಮಾಡುತ್ತೇನೆ ಈಗಾಗಲೇ ಜಿಲ್ಲಾಧ್ಯಂತ ಗ್ಯಾರಂಟಿ ಯೋಜನೆಯ ಸಮಿತಿಗಳ ಸಭೆ ನಡೆಸಲಾಗಿದೆ, ಜಿಲ್ಲೆಯ ಸದಸ್ಯರಿಗೆ ತಾಲೂಕು ವರು ಜವಾಬ್ದಾರಿ ನೀಡಲಾಗಿದೆ, ತಾಲೂಕು ಸದಸ್ಯರಿಗೆ ಗ್ರಾಮ ವರು ಜವಾಬ್ದಾರಿ ನೀಡಲಾಗಿದೆ, ಈಗಾಗಲೇ ತಾಲೂಕು ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಗ್ಯಾರೆಂಟಿ ಯೋಜನೆಗಳು ದೊರೆಯುತ್ತಿದ್ದವು ಇಲ್ಲವೋ ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ, ನಾನು ಮತ್ತು ನಮ್ಮ ಯೋಜನೆಯ ಸದಸ್ಯರು ಇವಂದು ಕಾರ್ಯಕ್ಕೆ ಹಗಲಿರಳು ಶ್ರಮಿಸುತ್ತೇವೆ ಎಂದರು.

ನಂತರ ಸಚಿವ ಶಿವರಾಜ್ ತಂಗಡಗಿ ಮಾತನಾಡಿ ಈ ಹುದ್ದೆಗೆ ರೆಡ್ಡಿ ಶ್ರೀನಿವಾಸ್ ಅವರು ಆಯ್ಕೆ ಆಗಿರುವುದು ನನಗೆ ಹೆಮ್ಮೆಯ ವಿಷಯ
ಅಚ್ಚುಕಟ್ಟಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಉತ್ತಮ ರೀತಿಯಲ್ಲಿ ಮತ್ತು ಫಲಾನುಭವಿಗಳಿಗೆ ಯೋಚನೆಗಳು ಮುಟ್ಟಿಸುವಲ್ಲಿ ಸಂಪೂರ್ಣ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.

ನಂತರ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಿಂದ ಸಚಿವ ಶಿವರಾಜ್ ತಂಗಡಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶರಣೆ ಗೌಡ ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ದೇವರಾಜ್ ತಾಲೂಕು ಅಧ್ಯಕ್ಷರು ಗ್ಯಾರಂಟಿ ಯೋಜನೆ, ನಾಗರಾಜ್ ಅರಳಿ ಗ್ಯಾರೆಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷರು, ಸೋಮನಾಥ್ ಗ್ಯಾರಂಟಿ ಯೋಜನೆ ಜಿಲ್ಲಾ ಸದಸ್ಯರು, ಜನಘಂಡಪ್ಪ ಸಿದ್ದಾಪುರ ಎಪಿಎಂಸಿ ಮಾಜಿ ನಿರ್ದೇಶಕರು, ಶರಣಪ್ಪ ಪರಕಿ, ಕಾಂಗ್ರೆಸ್ ಹಿರಿಯ ಮುಖಂಡರು ಮೊನ್ನೆ ಕೃಷ್ಣಮೂರ್ತಿ, ರೆಡ್ಡಿ ವೀರರಾಜ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರು ಮಹಮ್ಮದ್ ರಫಿ, ಶರಣಬಸವರಾಜ್ ರೆಡ್ಡಿ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಕರ್ಟೂರಿ ಲಕ್ಷ್ಮಿ, ನಾಗಮ್ಮ ಗಂಗಾವತಿ ಗ್ಯಾರಂಟಿ ಯೋಜನೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.