Breaking News

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಗೆಲುವು ಸ್ವಾಗತ: ಭಾರಧ್ವಾಜ್

Congress welcome victory in Telangana: Bhardwaj

ಜಾಹೀರಾತು
Screenshot 2023 12 03 19 06 25 02 E307a3f9df9f380ebaf106e1dc980bb6 225x300


ಗಂಗಾವತಿ: ತೆಲಂಗಾಣ ರಾಜ್ಯದಲ್ಲಿ ಟಿ.ಆರ್.ಎಸ್ ಹಾಗೂ ಬಿಜೆಪಿ ಗಳನ್ನು ಹಿಂದೆ ಹಾಕಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ದಕ್ಷಿಣ ಭಾರತದ ದ್ರಾವಿಡ ಜನಾಂಗದ ಗೆಲುವು ಆಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಖುಷಿ ಹಂಚಿಕೊAಡಿದ್ದಾರೆ.
ಕಳೆದ ಐದು ವರ್ಷಗಳಿಂದ ತೆಲಂಗಾಣದಲ್ಲಿ ಟಿ.ಆರ್.ಎಸ್ ಹಾಗೂ ಬಿಜೆಪಿ ಮಧ್ಯೆ ಪೈಪೋಟಿ ಇದ್ದು, ಕಾಂಗ್ರೆಸ್ ೩ನೇ ಸ್ಥಾನದಲ್ಲಿತ್ತು. ಕರ್ನಾಟಕದಲ್ಲಿ ಬಿಜೆಪಿ ಯನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ತೆಲಂಗಾಣದಲ್ಲಿ ಸ್ಪೂರ್ತಿಯಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ.
ದಕ್ಷಿಣ ಭಾರತ (ದ್ರಾವಿಡ ರಾಜ್ಯ) ದಲ್ಲಿ ಬಿಜೆಪಿ ಯಾವುದೇ ರಾಜ್ಯಗಳಲ್ಲಿಯೂ ಅಧಿಕಾರಕ್ಕೆ ಬರದಂತೆ ದ್ರಾವಿಡರು ನೋಡಿಕೊಳ್ಳುತ್ತಿದ್ದಾರೆ. ಐದು ರಾಜ್ಯಗಳ ಚುನಾವಣೆಯಲ್ಲಿ ಛತ್ತಿಸಗಡ್ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರಗಳಿದ್ದು, ಜನರು ಕಾಂಗ್ರೆಸ್‌ನ್ನು ತಿರಸ್ಕರಿಸಿ ಬಿಜೆಪಿ ಪಟ್ಟ ಕಟ್ಟಿದ್ದಾರೆ. ಕಾಂಗ್ರೆಸ್ ಈಗಲಾದರೂ ಜನರ ಬಗ್ಗೆ ಗಮನಿಸಿ ಕಾರ್ಪೋರೇಟ್ ಹಾಗೂ ದುಡಿಯುವ ವರ್ಗಗಳ ಸಂಘರ್ಷದಲ್ಲಿ ದುಡಿಯುವ ವರ್ಗಗಳ ಪರ ನಿಲ್ಲಬೇಕು. ಅದರಿಂದಾಗಿ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಯಾವುದೇ ಅಧಿಕಾರ ಸಿಗುವುದಿಲ್ಲ. ದಕ್ಷಿಣ ಭಾರತದ ದ್ರಾವಿಡರು ಒಂದಾಗಿ ಸನಾತನ ಆರ್ಯರನ್ನು ಈ ಭಾಗದಲ್ಲಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕೆಂದು ಕ್ರಾಂತಿ ಚಕ್ರ ಬಳಗ ಕರೆನೀಡಿದೆ.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.