Breaking News

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಜನ್ಮ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮಕ್ಕೆಕೊಪ್ಪಳದಿಂದ 100 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ

More than 100 people from Koppal will participate in the closing ceremony of the founder of SUCI Communist Party's birth centenary.

ಕೊಪ್ಪಳ:ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರು ಹಾಗೂ ಕಾರ್ಮಿಕ ವರ್ಗದ ಮಹಾನ್ ನಾಯಕ್ ಕಾಮ್ರೆಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮ.”

ಜಾಹೀರಾತು

ಇದೇ ಆಗಸ್ಟ್ 05 ರಂದು ಕೋಲ್ಕತ್ತದಲ್ಲಿ ನಡೆಯುತ್ತಿರುವ ಸ್ವಾತಂತ್ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿ, ಕಾರ್ಮಿಕ ವರ್ಗದ ಮಹಾನ್ ನಾಯಕರು ಹಾಗೂ ಈ ಯುಗದ ಓರ್ವ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೆಡ್ ಶಿವದಾಸ್ ಘೋಷ್

ರವರ ಜನ್ಮ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮವು ಕೊಲ್ಕತ್ತಾದ ಬಿಗ್ರೇಡ್ ಮೈದಾನದಲ್ಲಿ ನಡೆಯಲಿದ್ದು ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು, ಯುವಜನ ಮಹಿಳೆಯರು, ರೈತ ಕಾರ್ಮಿಕ ಜನನಂಭಾಗವಹಿಸುತ್ತಿದ್ದಾರೆ, ಕರ್ನಾಟಕ ರಾಜ್ಯ ದಿಂದಲೂ ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ, ಅದೇ ರೀತಿ ಕೊಪ್ಪಳದಿಂದಲೂ 100 ಕ್ಕೂ ಹೆಚ್ಚು ಜನರು ಭಾಗವಹಿಸಲು ಇಂದು ಕೊಪ್ಪಳದ ರೈಲು ನಿಲ್ದಾಣದಲ್ಲಿ ಸೇರಿದ್ದರು.

ಈ ಸಂಧರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ನಾಯಕರು, ಕಾರ್ಯಕರ್ತರು, ಸದಸ್ಯರು ಶಿವದಾಸ್ ಘೋಷ್ ರವರ ವಿಚಾರಗಳು ಎಲ್ಲೆಲ್ಲೂ ಹರಡಲಿ, ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವ ಯಶಸ್ವಿಯಾಗಲಿ ಎಂದು ಘೋಷಣೆಗಳನ್ನು ಕೂಗುತ್ತಾ ರೈಲನ್ನು ಹತ್ತಿದರು.

About Mallikarjun

Check Also

ಸುರಕ್ಷಾತೆಗಾಗಿ ಸಂಚಾರ ನಿಯಮ ಪಾಲಿಸಿ… ಉಪನಿರಿಕ್ಷಕ ಇಸ್ಮಾಯಿಲ್ ಸಾಬ್ ಮನವಿ.

Follow traffic rules for safety… Sub-Inspector Ismail Saab appeals. ಗಂಗಾವತಿ -6–ಸುರಕ್ಷಿತೆಯ ಹಿತದ್ರಷ್ಟಿಯಿಂದ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು …

Leave a Reply

Your email address will not be published. Required fields are marked *