ವಕ್ಕ್ ಬೋರ್ಡ್ ತಿದ್ದುಪಡಿ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ತಿಪಟೂರಿನಲ್ಲಿ ಪ್ರತಿಭಟನೆ .
Protest against the central government in Tiptur against the Waqf Board amendment.

ತಿಪಟೂರು:ಕೇಂದ್ರ ಸರ್ಕಾರದ ವಕ್ಪ್ ಬೋರ್ಡ್ ತಿದ್ದುಪಡಿ ವಿರೋಧಿಸಿ,ಹಾಗೂ ವಕ್ಪ್ ಬೋರ್ಡ್ ಕಾನೂನುಗಳನ್ನ ಯಾಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ತಿಪಟೂರು ನಗರದ ಗಾಂಧೀನಗರ ಮದೀನ ಮಸೀದಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.

ಮದೀನ ಮಸೀದಿ ಉಪಾಧ್ಯಕ್ಷ ಸೈಫುಲ್ಲ ಎಂ‌.ಮಾತನಾಡಿ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ಕಾನೂನು ತಿದ್ದುಪಡಿ ಮಾಡಲು ಹೊರಟಿರುವುದು.
ಪೂರ್ವಾಗ್ರಹದಿಂದ ಕೂಡಿದೆ.ವಕ್ಪ್ ಕಾನೂನುಗಳು ಪ್ರವಾದಿ ಮಹಮದ್ ಪೈಗಂಬರ್ ರವರ ಕಾಲದಿಂದಲೂ ಆಚರಣೆಯಲ್ಲಿವೆ.ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ,ದೇವರ ಹೆಸರಿನಲ್ಲಿ ಚರಸ್ಥಿರಾಸ್ತಿ ದಾನವಾಗಿ ನೀಡಿದರೆ, ಆಸ್ವತ್ತು,ವಕ್ಪ್ ಸ್ಪತ್ತಾಗುತ್ತದೆ, ಯಾವುದೇ, ವ್ಯಕ್ತಿ ಅದನ್ನ ಬಳಸಿಕೊಳ್ಳಲು ಅವಕಾಶ ಇರುವುದಿಲ್ಲ,ಈ ಸ್ವತ್ತು ದೇವರ ಸ್ವತ್ತು ಎಂದು ಬಾವಿಸಲಾಗುತ್ತಿದು,ಕೇಂದ್ರ ಸರ್ಕಾರ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ವಕ್ಪ್ ಕಾನೂನಿಗೆ ತಿದ್ದುಪಡಿ ಮಾಡಲು ಹೊರಟಿರುವುದು ಸರಿಯಲ್ಲ,ವಕ್ಪ್ ತಿದ್ದುಪಡಿ ಮೂಲಕ ಮುಸ್ಲೀಂ ಸಮುದಾಯಕ್ಕೆ ತೊಂದರೆ ನೀಡಲು ಹೊರಟಿದೆ.ಭಾರತೀಯ ಮುಸ್ಲೀಂ ವಯುಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಲಾಗುತ್ತಿದ್ದು.ನಮ್ಮ ದೇಶದ ಕಾನೂನು .ಸಂವಿಧಾನ ಹಾಗೂ ಸುಪ್ರಿಂ ಕೋರ್ಟ್ ಮೇಲೆ ನಂಬಿಕೆ ಇದೆ. ಸುಪ್ರಿಂ ಕೋರ್ಟ್ ತೀರ್ಮಾನಕ್ಕೆ ಬದ್ದವಾಗಿರುತ್ತೇವೆ.ಸುಪ್ರಿಂ ಕೋರ್ಟ್ ನಲ್ಲಿ ಅಲ್ಲಾಹ್ ಆಶೀರ್ವಾದದಿಂದ ನಮ್ಮ ಪರವಾಗಿ ನ್ಯಾಯದೊರೆಯಲಿದೆ.ಎಂದು ತಿಳಿಸಿದರು

ಮುತ್ತಾವಲಿ ಮಹಮದ್ ದಸ್ತಗಿರ್ ಮಾತನಾಡಿ ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿಯ ಮೂಲಕ ಮುಸ್ಲೀಂ ಸಮುದಾಯದ ಮೇಲೆ ತೊಂದರೆ ನೀಡುತ್ತಿದೆ.ಹಿಂದಿನಿಂದಲೂ ನಡೆದುಕೊಂಡು ಕಾನೂನುಗಳನ್ನ ಯಥಾವತ್ತಾಗಿ ಮುಂದುವರಿಸಬೇಕು. ಕೇಂದ್ರ ಸರ್ಕಾರದ ಟ್ರಸ್ಟ್ ರಚನೆಗೆ ನಮ್ಮ ವಿರೋಧವಿಲ್ಲ, ಆದರೆ ಮುಸಲ್ಮಾನರ ವಯುಕ್ತಿಕ ಟ್ರಸ್ಟ್ ಗೆ ಅನ್ಯಧರ್ಮಿಯರನ್ನ ಸದಸ್ಯರನ್ನಾಗಿ ನೇಮಕ ಮಾಡಲುವಹೊರಟಿರುವುದು ಸರಿಯಲ್ಲ. ಅನ್ಯಧರ್ಮಿಯರ ನೇಮಕಕ್ಕೆ ಮುಸ್ಲಿಂ ಸಮುದಾಯದ ವಿರೋಧವಿದೆ.ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿ ವಾಪಾಸ್ ಪಡೆದು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಮುಸ್ಲಿಂ ಮುಖಂಡರಾದ ಮುನ್ನಾವರ್ ಪಾಷಾ,
ಮಹಮದ್ .ಪರ್ವೀಜ್. ಮುನ್ನಾವರ್ ಯೂನಿಸ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜು ಗುರುಗದಹಳ್ಳಿ

ಮಾರ್ಟಳ್ಳಿ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

Universe corruption in Manrega scheme in Martalli Panchayat..!

ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ .

ಗಿಡ ನೆಡುವ ಕಾಮಗಾರಿಯಲ್ಲಿ ವ್ಯಾಪಕ ಗೋಲ್ ಮಾಲ್..!!
ಯುವ ರೈತನ ದೂರಿನಿಂದ ಸಾಕ್ಷಾö್ಯಧಾರ ಸಮೇತ ಸಿಕ್ಕಿಬಿದ್ದ ಪಿಡಿಓ,ತಾಂ.ಸಹಾಯಕ..!!!
ಚಾನರಾಜನಗರ ಜಿಲ್ಲೆಯ
ಹನೂರು ತಾಲ್ಲೊಖಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಡಿ ರೈತರ ಜಮೀನುಗಳಿಗೆ ಗಿಡ ನೆಡುವ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಲಕ್ಷಾಂತರ ರೂ ಗುಳುಂ ಆಗಿರುವುದಕ್ಕೆ ಸ್ಪಷ್ಟ ಪುರಾವೆಯಾಗಿ ಓರ್ವ ವಿದ್ಯಾವಂತ ಯುವ ರೈತನ ದೂರಿನಿಂದ ಒಂದು ಪ್ರಕರಣವಷ್ಟೆ ಬೆಳಕಿಗೆ ಬಂದಿದ್ದು ಗಿಡ ನೆಡುವ ಕಾವiಗಾರಿಗಳ ಇಡೀ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸಿದಲ್ಲಿ ಮತ್ತಷ್ಟು ರೋಚಕ ಸತ್ಯ ಬೆಳಕಿಗೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.
ದಿವ್ಯಾನಂದನ ದೂರಿನ ಪ್ರಕರಣದ ತನಿಖೆ ನಡೆದು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಬಾಲಗಂಗಾಧರ್‌ರಿಂದ ಶೇ ೫೦ ಪಾಲು ಅಂದರೆ ೪೮,೭೪೯ ಹಾಗೂ ಇದೇ ಪಂಚಾಯ್ತಿಯ ತಾಂತ್ರಿಕ ಸಹಾಯಕ ಎಂ.ಪ್ರದೀಪ್ ಕುಮಾರ್‌ರಿಂದ ಶೇ ೫೦ ಪಾಲುರಂತೆ ೪೮,೭೪೯ ರೂಗಳಂತೆ ಒಟ್ಟು ೯೭,೪೯೮ ರೂಗಳನ್ನು ವಸೂಲು ಮಾಡಿ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಸಿಇಓಗೆ ಪ್ರರಕಣದ ತನಿಖೆ ನಡೆಸಿದ ಓಂಬುಡ್ಸ್ ಮನ್ ಎನ್.ಎಸ್ ಮಹಾದೇವಸ್ವಾಮಿ ಆದೇಶ ನೀಡಿರುವುದು ಅಕ್ರಮಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..!
ವಡ್ಡರದೊಡ್ಡಿ ಗ್ರಾಮದ ಯುವ ವಿದ್ಯಾವಂತ ರೈತ ದಿವ್ಯಾನಂದ ಎಂಬುವರ ತಂದೆ ಮದಲೈಸ್ವಾಮಿಯವರ ಬ್ಯಾಂಕ್ ಖಾತೆಗೆ ಅ ೨೨ ರ ೨೦೨೨ ರಂದು ದಿಢೀರನೆ ೨೫ ಸಾವಿರ ರೂ ಬರುತ್ತೆ. ಅವರು ಅವಿದ್ಯಾವತರಾದ್ದರಿಂದ, ಅವರ ಪುತ್ರ ದಿವ್ಯಾನಂದ ಇದಾವುದಪ್ಪ ನಮ್ಮ ಅಪ್ಪನ ಖಾತೆಗೆ ಹಣ ಬಂದಿದೆ ಎಂದು ಮೂಲ ಹುಡುಕಲು ಹೋದಾಗ ಮನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೂಲಿ ಮಾಡಿದ ಹಣ ಎಂದು ತಿಳಿದು ಬರುತ್ತದೆ. ಆದರೆ ವಾಸ್ತವದಲ್ಲಿ ಜಾಬ್ ಕಾರ್ಡ್ ಹೊಂದಿದ್ದರೂ ಸಹ ಯಾವುದೇ ಕೆಲಸಕ್ಕೆ ಹೋಗದಿದ್ದರೂ ಕೂಲಿ ಹೇಗೆ ಬಂತು ಎಂದು ಮೂಲ ಹುಡುಕಿದಾಗ ದೊಡ್ಡ ಹಗರಣವೇ ಬೆಳಕಿಗೆ ಬಂದಿದೆ.
ದಿವ್ಯಾನಂದನ ಕುಟುಂಬದರ‍್ಯಾರು ಮಾರ್ಟಳ್ಳಿ ಪಂಚಾಯ್ತಿಗೆ ಮನರೇಗಾ ಯೋಜನೆಯಡಿ ಅನುಕೂಲ ಕಲ್ಪಿಸಿಕೊಡುವಂತೆ ಕೋರದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಲ್ಲಿ ಪಂಚಾಯ್ತಿಯವರು ದಾಖಲೆಯಲ್ಲಿ ನಮೂದಿಸಿರುವಂತೆ ಯಾವ ಗಿಡಗಳು ಇವರ ಜಮೀನಿನಲ್ಲಿ ಇಲ್ಲದಿದ್ದರೂ ರಕ್ತ ಚಂದನ ಹಾಗೂ ಶ್ರೀಗಂಧದ ಗಿಡಗಳನ್ನು ೨೦೨೨-೨೩ ನೇ ಸಾಲಿನಲ್ಲಿ ಮನರೇಗಾ ಯೋಜನೆಯಡಿ ನೆಟ್ಟಿರುವುದಾಗಿಯೂ ಅದರ ಅಂದಾಜು ಮೊತ್ತ ೨.೫ ಲಕ್ಷ ಎಂತಲೂ ನಾಮಫಲಕ ಅಳವಡಿಸಿ ೭ ಎಂಎನ್‌ಆರ್‌ಗಳನ್ನು ತೆಗೆದು ೯೭,೪೮೯ ರೂಗಳನ್ನು ಕೂಲಿ ಪಾವತಿಸಿರುವುದಾಗಿ ದಾಖಲೆ ಸೃಷ್ಟಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದರಿಂದ ಕೆಂಡಾಮAಡಲರಾದ ಯುವ ರೈತ ದಿವ್ಯಾನಂದ ಪಿಡಿಓ ಬಾಲಗಂಗಾಧರ್‌ರವರನ್ನು ಭೇಟಿ ಮಾಡಿ ನಮ್ಮ ಕುಟುಂಬದವರು ಯಾವುದೇ ಕೂಲಿ ಕೆಲಸಕ್ಕೆ ಬಂದಿಲ್ಲ. ಹಾಗಿದ್ದರೂ ಕೂಲಿ ಹಣ ಅಂತಾ ಹೇಗೆ ಹಾಕಿದ್ದೀರಿ. ಎಂದು ವಿಚಾರಿಸಿದಾಗ, ಈ ಯೋಜನೆಯಿಂದ ನಿಮಗೆ ಹೆಚ್ಚಿನ ಹಣ ಬರುತ್ತದೆ ಯಾವುದನ್ನು ಪ್ರಶ್ನೆ ಮಾಡದೆ ತೆಪ್ಪಗಿರಿ ಎಂದು ಧಮಕಿ ಹಾಕಿದ್ದಲ್ಲದೆ ಕೆಲ ಪಂಚಾಯ್ತಿ ಸದಸ್ಯರು ಮತ್ತಿತರರ ಕಡೆಯಿಂದ ಹಲ್ಲೆಗೂ ಮುಂದಾಗಿ ಪ್ರಾಣ ಬೆದರಿಕೆ ಪ್ರಕರಣವೂ ನಡೆದು ಈ ಬಗ್ಗೆ ದಿವ್ಯಾನಂದ ಆರಂಭದಲ್ಲೇ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಜಮೀನಿನಲ್ಲಿ ಯಾವುದೇ ಗಿಡಗಳನ್ನು ನೆಡದಿದ್ದರೂ ನೆಟ್ಟಂತೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ ಪ್ರಶ್ನಿಸಲು ಹೋದ ತಮ್ಮ ಮೇಲೆಯೆ ಹಲ್ಲೆ ಪ್ರಣ ಬೆದರಿಕೆಗೆ ಮುಂದಾಗಿದ್ದಾರೆ ಎಂದು ಪಿಡಿಓ ಬಾಲಗಾಂಗಾಧರ್ ಮತ್ತಿತರೆ ಕೆಲ ಸದಸ್ಯರ ವಿರುದ್ದ ರಾಮಾಪುರ ಠಾಣೆಗೆ ದೂರು ನೀಡಿದರೂ ಅವರು ಎಫ್‌ಐಆರ್ ದಾಖಲಿಸಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನಂತರದಲ್ಲಿ ತಾ.ಪಂ.ಇಓ. ಜಿ.ಪಂ.ಸಿಇಓ, ಜಿಲ್ಲಾಧಿಕಾರಿಗಳಿಗೂ ದಾಖಲೆ ಸಮೇತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಛಲಬಿಡದ ವಿಕ್ರಮನಂತೆ ಅಂತಿಮ ಹಂತವಾಗಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದ ಪರಿಣಾಮವೇ ಈ ಪ್ರಕರಣ ಬೆಳಕಿಗೆ ಬಂದಿರುವುದು. ಪಂಚಾಯತ್ ರಾಜ್ ಇಲಾಖೆಯಿಂದ ಚಾಮರಾಜನಗರದ ಓಂಬುಡ್ಸ್ ಮನ್‌ರವರಿಗೆ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದ ನಂತರ ಓಂಬುಡ್ಸ್ ಮನ್ ರವರ ವಿಚಾರಣೆಯಿಂದ ಅಸಲಿ ಸತ್ಯ ಸಂಗತಿ ಬೆಳಕಿಗೆ ಬಂದಿದೆ.
ಓAಬುಡ್ಸ್ ಮನ್ ರವರ ಭೇಟಿಯ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿAದ ಯಾವುದೇ ಗಿಡ ನೆಡುವ ಕಾಮಗಾರಿ ಕೈಗೊಳ್ಳದಿರುವುದು ಕಂಡುಬAದಿದೆ. ಕೊನೆ ಪಕ್ಷ ಗುಂಡಿ ಕೂಡ ತೆಗೆದಿರುವುದಿಲ್ಲ. ತಾ.ಪಂ.ನ ಸಹಾಯಕ ನಿರ್ದೇಶಕ(ಗ್ರಾ.ಉ) ಮತ್ತು ತಾಂತ್ರಿಕ ಸಂಯೋಜಕರು ಕಾಮಗಾರಿಯ ಉಸ್ತುವಾರಿ/ಮೇಲ್ವಿಚಾರಣೆ ಮಾಡರದಿರುವುದು ಬೆಳಕಿಗೆ ಬಂದಿದೆ. ೨೦೨೨-೨೩ ನೇ ಸಾಲಿನಲ್ಲಿ ಗ್ರಾ.ಪಂ.ನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗಿದ್ದು ೨.೫೦ ಲಕ್ಷ ಮೊತ್ತಕ್ಕೆ ಜಿ.ಪಂ.ನಿAದ ಅನುಮೋದಿಸಲ್ಪಟ್ಟಿದೆ. ಕೆಲಸಕ್ಕಾಗಿ ಅರ್ಜಿ ಕರೆದಂತೆ, ಹಂಚಿಕೆ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ.
ಫಲಾನುಭವಿಯಿಂದ ಯಾವುದೇ ಮನವಿ ಅರ್ಜಿ ಸಲ್ಲಿಕೆಯಾಗಿಲ್ಲದಿರುವುದು. ೭ ಎಂಎನ್‌ಆರ್‌ಗಳನ್ನು ತೆಗೆದು ೯೭,೪೯೮ ರೂಗಳನ್ನು ಕೂಲಿ ಹಣಕ್ಕೆ ಪಾವತಿಸಿರುವುದಾಗಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಡೆಯದ ಗಿಡ ನೆಡುವ ಕಾಮಗಾರಿಗೆ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್, ಕಾಮಗಾರಿಯ ಮೇಲ್ವಿಚಾರಣೆ ನಡೆಸಿದಂತೆಯೂ ಅಳತೆ ಪುಸ್ತಕದಲ್ಲಿಯೂ ನಮೂದಿಸಿ ಪವಾಡ ಮೆರೆದಿರುವುದು ಬೆಳಕಿಗೆ ಬಂದಿದೆ. ಪಂಚಾಯ್ತಿ ದಾಖಲೆಯಲ್ಲಿ ಕಾಮಗಾರಿಯೊಂದಿಗೆ ಲಗತ್ತಿಸಿರುವ ಪೊಟೋಗಳಿಗೂ ಜಮೀನಿಗೂ ಯಾವುದೇ ತಾಳೆಯಿಲ್ಲದಿರುವುದು ಅದು ಬೇರೆ ಯಾವುದೋ ಅನ್ಯ ಬೇನಾಮಿ ಜಮೀನಿನದೆಂಬುದು ಗೊತ್ತಾಗಿದೆ. ಕಾಮಗಾರಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಆಗಿರುವುದಿಲ್ಲ.
ಈ ಎಲ್ಲಾ ಅಕ್ರಮಗಳ ಹಿನ್ನೆಲೆಯಲ್ಲಿ ಪಂಚಾಯತಿ ಪಿಡಿಓ ಬಾಲಗಂಗಾಧರ್ ಹಾಗೂ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್ ಸಾಮೀಲಾಗಿ ನಡೆಯದ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಗೋಲ್ ಮಾಲ್ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರಿಂದ ವಸೂಲಿಗೆ ಆದೇಶಿಸಲಾಗಿದೆ.
ಇದೊಂದು ಬೆಳಕಿಗೆ ಬಂದ ಪ್ರಕರಣವಷ್ಟೆ ಆಗಿದ್ದು ೨೦೨೧ ರಿಂದ ಇಲ್ಲಿಯ ತನಕ ಇಂತಹ ನೂರಾರು ಪ್ರಕರಣಗಳು ನಡೆದಿದ್ದು ಹಲವರ ಹೆಸರಿನಲ್ಲಿ ಇದೇ ರೀತಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು ಲಕ್ಷಾಂತರ ರೂಪಾಯಿ ದುರ್ಬಳಕೆ ಆಗಿದ್ದು ಅವುಗಳ ಬಗ್ಗೆಯೂ ಉನ್ನತ ಮಟ್ಟದಿಂದ ಸಮಗ್ರ ತನಿಖೆ ನಡೆಸಿದಲ್ಲಿ ಇನ್ನೂ ಹೆಚ್ಚಿನ ಅಕ್ರಮಗಳು ಬೆಳಕಿಗೆ ಬರುವುದಾಗಿ ದೂರುದಾರ ದಿವ್ಯಾನಂದ ಆಗ್ರಹಿಸಿದ್ದಾರೆ.
ಈ ಅಕ್ರಮದಲ್ಲಿ ಸ್ಥಳೀಯ ಒಬ್ಬ ಸಸಿಗಳ ಮಾರಾಟಗಾರ ಆಗೂ ಪಂಚಾಯ್ತಿ ಸದಸ್ಯನೊಬ್ಬನ ಪಾಲುದಾರಿಕೆಯಿದ್ದು, ರೈತರನ್ನು ಪುಸಲಾಯಿಸಿ ಅವರಿಂದ ಮೊದಲಿಗೆ ೨೦ ಸಾವಿರ ರೂಪಾಯಿ ಹಾಗೂ ಜಮೀನಿನ ದಾಖಲೆಗಳನ್ನು ಪಡೆದುಕೊಂಡು ಯಂತ್ರದಿಂದ ರಕ್ತಚಂದನ ಹಾಗೂ ಶ್ರೀಗಂಧದ ಸಸಿಗಳನ್ನು ನಾಟಿ ಮಾಡಿ ನಂತರದಲ್ಲಿ ಎಂಎನ್‌ಆರ್‌ನಂತೆ ಕೂಲಿ ನಿರ್ವಹಿಸಿರುವುದಾಗಿ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅವರ ಬ್ಯಾಂಕ್ ಖಾತೆಗೆ ಅವರಿಂದ ಪಡೆದುಕೊಂಡಿದ್ದ ಹಣವನ್ನೆ ಮರು ಪಾವತಿ ಮಾಡಲಾಗುತ್ತದೆ. ಈ ಕಾಮಗಾರಿಗೆ ೫೦ ಸಾವಿರದಷ್ಟು ವೆಚ್ಚವಾಗಿದ್ದರೆ, ೨.೫೦ ಲಕ್ಷ ಹಾಗೂ ಮೆಟೀರಿಯಲ್ ಬಿಲ್ ಸೇರಿದಂತೆ ಬಂದ ಲಕ್ಷಾಂತರ ಹಣವನ್ನು ಪಿಡಿಓ, ತಾಂತ್ರಿಕ ಸಹಾಯಕ ಹಾಗೂ ಕೆಲ ಸದಸ್ಯರು ಹಂಚಿಕೊಳ್ಳುತ್ತಿದ್ದು ಇದೇ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಬಿಟ್ಟಿಯಾಗಿ ಗಿಡಗಳನ್ನು ನೆಡಿಸಿಕೊಂಡ ಖಷಿಯಲ್ಲಿ ರೈತರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಗುಮ್ಮಾಗುಳಿಯುವುದೇ ಇವರ ಅಕ್ರಮಕ್ಕೆ ರಹದಾರಿ ನೀಡಿದಂತಾಗಿದೆ.
ಮನರೇಗಾ ಯೋಜನೆಯಲ್ಲಿ ಈ ಪಂಚಾಯ್ತಿಯಲ್ಲಿ ೮೦ ರಿಂದ ೧೦೦ ಕೋಟಿಯಷ್ಟು ಕಾಮಗಾರಿ ನಡೆದಿದ್ದು ಸ್ಥಳೀಯ ಜನ ಸಾಮಾನ್ಯರು ಮಾತನಾಡಿಕೊಳ್ಳುವಂತೆ ಎಲ್ಲದರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಜಗಜ್ಜಾಹೀರಾಗಿದ್ದು ಮನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಈ ಸಂಬಂಧದ ಕಡತಗಳನ್ನು ಸಮಗ್ರ ತನಿಖೆ ಮಾಡಿದಲ್ಲಿ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರುವುದರಲ್ಲಿ ಸಂಶಯವೇ ಇಲ್ಲ. ಜಿಲ್ಲಾಡಳಿತ ಈ ಬಗ್ಗೆ ಪರಿಣಾಮಕಾರೀ ಕ್ರಮಕ್ಕೆ ಮುಂದಾಗುವುದೇ ಕಾದು ನೋಡೋಣ..

ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಪಿತೂರಿ ಕೆಲಸ ನಡೆಯುತ್ತಿದೆ: ಡಿ ಕೆ ಶಿವಕುಮಾರ್‌
Conspiracy to topple government in Singapore is at work: DK Shivakumar

ಬೆಂಗಳೂರು, ಜುಲೈ24: ನಮ್ಮ ಸರಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. ಸರಕಾರ ಉರುಳಿಸಲು ಕೆಲವರು ಸಿಂಗಾಪುರದಲ್ಲಿ ಪಿತೂರಿ ಯೋಜಿಸಿದ್ದಾರಂತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಆ ಬಗ್ಗೆ ನನಗೂ ನಮ್ಮದೇ ಆದ ಮೂಲಗಳಿಂದ ಮಾಹಿತಿ ಇದೆ. ಅವರು ಬೆಂಗಳೂರಲ್ಲಿ ಮಾಡದೇ ಅಲ್ಲಿಗೆ ಹೋಗಿ ಮಾಡುವುದು ಅವರ ತಂತ್ರ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಇನ್ನೂ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಹನಿಟ್ರ್ಯಾಪ್ ಮಾಡುತ್ತಾರೆ ಎಂಬ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ವೇಲು ನಾಯ್ಕರ್ ಏನೇನು‌ ಮಾತನಾಡಿದ್ದಾರೋ‌ ಗೊತ್ತಿಲ್ಲ. ಅವರಿಗೆ ಯಾವ ಮಾಹಿತಿ ಇದೆಯೋ, ನಾನು ಸಭೆಗೆ ತಡವಾಗಿ‌ ಹೋಗಿದ್ದೆ ಎಂದು ಹೇಳಿದರು.
ಫೆರಿಫೆರಲ್ ರಿಂಗ್ ರಸ್ತೆ ಭೂ ಸ್ವಾಧೀನ ವಿಚಾರವಾಗಿ ಆ ಭಾಗದ ಕೆಲ ರೈತರು ಇಂದು ನನ್ನನ್ನು ಭೇಟಿ ಮಾಡಿದ್ದಾರೆ. ಇದೇ ತಿಂಗಳು 31 ರಂದು ಆ ರೈತರ ಜೊತೆ ಸಭೆ ಮಾಡುವುದಾಗಿ ತಿಳಿಸಿದ್ದೇನೆ ಎಂದರು.

ಅಂತಾರಾಷ್ಟ್ರೀಯ ವ್ಯಾಪಾರ ವೆದಿಕೆ ನವಟೈಟಿಸ್ ಸಂಸ್ಥೆ
International trade forum Novatis Institute.


ಮಂಗಳೂರು:ನೂತನ ವಿದೇಶಿ ವ್ಯಾಪಾರಿ ನೀತಿಯನ್ನು ವ್ಯಾಪಾರಸ್ತರಿಗೆ ಪರಿಚಯಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ವ್ಯಾಪಾರ ವೇದಿಕೆಯಾಗಿರುವ ಬೆಂಗಳೂರು ಮೂಲದ ನವಟೈಸ್ ಸಂಸ್ಥೆ (NavaTies) ಯು ಭಾರತದಲ್ಲಿ ನೀವು ರಫ್ತು ಮಾಡಲು ಸಿದ್ಧರಿದ್ದೀರಾ?’ (Are You Export Ready?) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊಸ ವ್ಯವಹಾರಗಳ ರಫ್ತು ಸಿದ್ಧತೆಯನ್ನು ನಿರ್ಣಯಿಸಲು ಸಮಗ್ರ ಮೌಲ್ಯಮಾಪನ ಸಾಧನವನ್ನು ಒಳಗೊಂಡಿರುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಸಂಪೂರ್ಣ ಉಚಿತ ಮೌಲ್ಯಮಾಪನದ ಮೂಲಕ ದೇಶದ ೧ ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳನ್ನು ರಫ್ತುದಾರರನ್ನಾಗಿ ಮಾಡುವುದು ನವಟೈಸ್ ಸಂಸ್ಥೆಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (Kanara Chamber of Commerce and Industry) ಕಚೇರಿಯಲ್ಲಿ ಮಂಗಳೂರು ಮತ್ತು ದಕ್ಷಿಣ ಕನ್ನಡ ರಫ್ತುದಾರರನ್ನು ಬೆಂಬಲಿಸಲು ರಫ್ತು ಅಭಿಯಾನವನ್ನು ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆನರಾ ಸಂಸ್ಥೆಯ ಖಜಾಂಚಿಯಾದ ಶ್ರೀ ಅಬ್ದುರ್ ರಹ್ಮಾನ್ ಮುಸ್ಟಾ ಮತ್ತು ನಿರ್ದೇಶಕ ಹಾಗು ಅಂತರರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ಜೀತನ್ ಅಲೆನ್ ಸಿಕ್ವೆರಾ ಮತ್ತು ಇತರರು ಪಾಲ್ಗೊಂಡಿದ್ದರು
ನೀವು ರಸ್ತೆಗೆ ಸಿದ್ಧರಿದ್ದೀರಾ? ಅಭಿಯಾನವು ಭಾರತೀಯ ವ್ಯವಹಾರಗಳಿಗೆ ತಮ್ಮ ರಫ್ತು ಸಿದ್ಧತೆಯನ್ನು ೩೬- ಅಂಶಗಳಲ್ಲಿ ಮೌಲ್ಯಮಾಪನ ಮಾಡಲು ಅವಕಾಶವನ್ನು ನೀಡುತ್ತದೆ. ಮುಖ್ಯವಾಗಿ ನಿಯಂತ್ರಕ ಅನುಸರಣೆ, ದಸ್ತಾವೇಜು, ಪ್ರಮಾಣೀಕರಣ, ಸಾಮರ್ಥ್ಯ ನಿರ್ಮಾಣ, ಲಾಜಿಸ್ಟಿಕ್ಸ್, ಹಣಕಾಸಿನ ಲಭ್ಯತೆ, ಮಾರುಕಟ್ಟೆ, ಮತ್ತು ಇತರ ಸಂಪನ್ಮೂಲಗಳನ್ನು ಸೇರಿದಂತೆ ರಫ್ತು ಮಾಡುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
ರಫ್ತು ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಲು, ಅವುಗಳನ್ನು ರಸ್ತೆಗೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸರಕಾರಿ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ರೈತ ಉತ್ಪನ್ನ ಸಂಸ್ಥೆಗಳು ಇತ್ಯಾದಿಗಳೊಂದಿಗೆ ನವಟೈಸ್ (www.navaties.com) ಕೆಲಸ ಮಾಡುತ್ತದೆ.
ಆಸಕ್ತರು ೦೭೯-೪೧೦೫-೦೭೨೭ಕ್ಕೆ (079-4105-0727) ಮಿಸ್ ಕಾಲ್ ನೀಡಿದರೆ ಸಂಸ್ಥೆಯವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಮೌಲ್ಯಮಾಪನ ಸಾಧನವು ವ್ಯಾಪಾರಿಗಳಿಗೆ ತಮ್ಮ ರಫ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ರಫ್ತು ಸಿದ್ಧತೆಯ ಮಾರ್ಗಸೂಚಿಯನ್ನು ಒದಗಿಸುತ್ತದೆ.
ಹೊಸ ರಫ್ತುದಾರರು, ಉತ್ಪಾದಕರು, ವ್ಯಾಪಾರಿಗಳು, ಸೇವಾ ಪೂರೈಕೆದಾರರು, ಎಫ್‌ ಪಿಒಗಳು, ರೈತರು ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ಅನ್ವೇಷಿಸಲು ಬಯಸುವ ಇತರ ಆಸಕ್ತರು ೦೭೯-೪೧೦೫-೦೨೭ಗೆ (079-4105-0727) ಮಿಸ್ಟ್ ಕಾಲ್ ನೀಡುವ ಮೂಲಕ ಈ ಅಭಿಯಾನಕ್ಕೆ ನೋಂದಾಯಿಸಿಕೊಳ್ಳಬಹುದು.
ಈ ಕುರಿತು ಮಾತನಾಡಿದ ನವಟೈಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಓ ಸತೀಶ್ ಕೋಟ ‘೨೦೨೨-೨೩ರಲ್ಲಿ ದಕ್ಷಿಣ ಕನ್ನಡ ಸುಮಾರು ೬೯,೪೦೦ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದೆ. ಪ್ರಾಥಮಿಕ ಸರಕು ರಾಫ್ತುಗಳು ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ ಗುಳಿಗೆ, ಗೋಡಂಬಿ, ಮಸಾಲೆಗಳು, ಕಾಫಿ, ಮೀನುಗಾರಿಕೆ ಇತ್ಯಾದಿಗಳು. ಆದರೆ ಜಿಲ್ಲೆಯಲ್ಲಿ ರಫ್ತು ಹೆಚ್ಚಿಸಲು ಹಲಸು, ಪ್ಲಾಸ್ಟಿಕ್, ಯಂತ್ರೋಪಕರಣಗಳು, ಇತ್ಯಾದಿಗಳಿಗೆ ಅವಕಾಶಗಳಿವೆ.’ ಎಂದರು.
ಅವರು ‘ರಫ್ತು ಭಾರತದ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ ಮತ್ತು ಹೊಸ ವಿದೇಶಿ ವ್ಯಾಪಾರ ನೀತಿ ೨೦೨೩ ರಫ್ತುದಾರರಿಗೆ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಅನೇಕ ಹೊಸ ಮಾರ್ಗಗಳನ್ನು ನೀಡುತ್ತದೆ. ದೇಶದಲ್ಲಿರುವ ೬೩ ಕೋಟಿ ಸಣ್ಣ ಕೈಗಾರಿಕೆಗಳಲ್ಲಿ ಶೇ. ೧ರಷ್ಟು ಮಾತ್ರ ರಫ್ತುದಾರರಾಗಿದ್ದಾರೆ. ಆದ್ದರಿಂದ ದೇಶದ ರಫ್ತು ಉದ್ಯಮಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನಾವು ಸ್ಥಳೀಯ ವ್ಯಾಪಾರಿಗಳು ತಮ್ಮ ದೇಶೀಯ ಮಾರುಕಟ್ಟೆಯನ್ನು ಮೀರಿ ವ್ಯಾಪ್ತಿ ವಿಸ್ತರಣೆಯಲ್ಲಿ ತೊಡಗಿಕೊಳ್ಳುವುದನ್ನು ಬೆಂಬಲಿಸಲು ಬಯಸುತ್ತೇವೆ. ೧ಲಕ್ಷ ವ್ಯವಹಾರಗಳಿಗೆ ರಫ್ತು ವಿಚಾರದಲ್ಲಿ ಸುಧಾರಣೆಗಳನ್ನು ಗುರುತಿಸಲು, ಅವರಿಗೆ ಅಗತ್ಯವಿರುವ ಪರಿಕರ, ಸಂಪನ್ಮೂಲಗಳನ್ನು ಒದಗಿಸಲು ಮತ್ತು ಯಶಸ್ವಿ ರಫ್ತುದಾರರಾಗಲು ತಜ್ಞರನ್ನು ಸಂಪರ್ಕಿಸಲು ಸಹಾಯ ಮಾಡುವ ಉದ್ದೇಶದೊಂದಿಗೆ ನೀವು ರಫ್ತು ಮಾಡಲು ಸಿದ್ಧರಿದ್ದೀರಾ? ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ’ ಎಂದರು.

ಮಹಿಳಾಸಬಲೀಕರಣಕ್ಕಾಗಿ ” ಆರೋಗ್ಯ ಕೇಂದ್ರ, ಹಾಗು ಯುವ ಜನತೆಯ ಆರ್ಥಿಕ ಸದೃಢತೆಗಾಗಿಯುವಜನ ಸ್ಪಂದನ, ಕೌಶಲ್ಯ ತರಬೇತಿ
Health Centre" for women empowerment, and youth outreach for economic empowerment of youth, skill training

ತಿಪಟೂರು: ಆರೋಗ್ಯ ಕೇಂದ್ರ ಹಾಗು ಯುವಜನ ಕೌಶಲ್ಯ ತರಬೇತಿ ಕೇಂದ್ರದ ವಿನೂತನ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ

ಸಾಮಾಜಿಕ ಸ್ವಾಸ್ಥ್ಯಕ್ಕೆ ಶಿಕ್ಷಣ, ಆರೋಗ್ಯ, ಉದ್ಯೋಗ ಈ ಎಲ್ಲವೂ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದು, ಸಮಾನತೆ ದೃಷ್ಟಿಯಿಂದ ಮಹಿಳಾ ಸಬಲೀಕರಣಕ್ಕಾಗಿ “ನಮ್ಮ ಆರೋಗ್ಯ ಕೇಂದ್ರ” ಹಾಗು ಯುವ ಜನತೆಯ ಆರ್ಥಿಕ ಸದೃಢತೆಗಾಗಿ “ಯುವಜನ ಸ್ಪಂದನ” ಕೌಶಲ್ಯ ತರಬೇತಿ ಕೇಂದ್ರದಂತಹ ವಿನೂತನ ಯೋಜನೆಗಳ ಮಹದಾಶಯದೊಂದಿಗೆ ಟೂಡಾ ಶಶಿಧರ್ ರವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಸುತ್ತಿದೆ ಕಲ್ಪತರು ನಾಡು ತಿಪಟೂರಿನ ಜನನಸ್ಪಂದನ ಟ್ರಸ್ಟ್.

ನಮ್ಮ ಯೋಜನೆಗಳ ಯಶಸ್ವಿ ನಿರ್ವಹಣೆಯ ಉದ್ದೇಶದಿಂದ ಜನಸ್ಪಂದನ ಟ್ರಸ್ಟ್, MJSPR ಸಂಸ್ಥೆಯ ಸಂಸ್ಥೆಯ ಖ್ಯಾತ ಪೊಲಿಟಿಕಲ್ ಸ್ಟ್ರ್ಯಾಟಜಿಸ್ಟ್ MJ ಶ್ರೀಕಾಂತ್ ರವರು ಹಾಗು ಖ್ಯಾತ ಪ್ರಸೂತಿ ತಜ್ಞರಾದ ಡಾ.ಹೇಮಾ ದಿವಾಕರ್ ಅವರ ಸಹಯೋಗದ ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಗಳನ್ನು ರೂಪಿಸಿದೆ.

ಮುಂದಿನ‌ ದಿನಗಳಲ್ಲಿ ಈ ಯೋಜನೆಯ ರೂಪುರೇಷೆ ಆಶಯ ಹಾಗು ಸದುದ್ದೇಶಗಳನ್ನು ಸರ್ಕಾರದ ಗಮನಕ್ಕೆ ತರುವ ಚಿಂತನೆಗಳು ನಡೆದಿವೆ.

ಈ ನಿಟ್ಟಿನಲ್ಲಿ ಪ್ರಾರಂಭವಾದ ನಮ್ಮ ವಿಭಿನ್ನ ಯೋಜನೆಗಳಾದ “ನಮ್ಮ ಆರೋಗ್ಯ ಕೇಂದ್ರ ಹಾಗು ಕೌಶಲ್ಯ ತರಬೇತಿ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳುವಂತೆ ಜನತೆಗೆ ಮಾಹಿತಿ ತಿಳಿಸುವ ಸಲುವಾಗಿ ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರಾಜ್ಯ ಮಟ್ಟದ ಮಾಧ್ಯಮ ಹಬ್ಬದಲ್ಲಿ ಪಾಲ್ಗೊಳ್ಳಲಾಯಿತು.
ನಮ್ಮ ಮಹತ್ವಾಕಂಕ್ಷೆಯ ಯೋಜನೆಗಳಾದ ನಮ್ಮ ಆರೋಗ್ಯ ಕೇಂದ್ರ ಹಾಗು ಯುವ ಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರದ ಸದುದ್ದೇಶಗಳನ್ನು ಹಾಗು ಸೌಲಭ್ಯಗಳನ್ನು ತಿಳಿಸಲು ತುಮಕೂರಿನ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರಾಜ್ಯ ಮಟ್ಟದ ಮಾಧ್ಯಮ ಹಬ್ಬದಲ್ಲಿ ನಮ್ಮ
ಭಾಗವಹಿಸಿ ಯುವ ಜನತೆಗೆ ನಮ್ಮ ಸೌಲಭ್ಯಗಳು ಹಾಗು ಮಾಹಿತಿಗಳನ್ನು ತಿಳಿಸಿದರು.