Breaking News

ಮಕ್ಕಳ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಡಾ.ಅಭಿಶೇಕಸ್ವಾಮಿ ಹೇರೂರ ಆಯ್ಕೆ.

Children’s conference: Dr. Abhishekaswamy Heroor elected as president.

ಜಾಹೀರಾತು

ಗಂಗಾವತಿ:ಮೈಸೂರು ರಾಜ್ಯವೆಂದು ಕರೆಯಲಾಗುತ್ತಿದ್ದ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳಾಗಿದ್ದರಿಂದ ಸರ್ಕಾರ, ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿ, ವರ್ಷದಾದ್ಯಂತ ಕನ್ನಡ ನಾಡು,ನುಡಿಯ ಹಿರಿಮೆಯನ್ನು ತೋರಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದೆ.

ಈ ಕಾರ್ಯಕ್ರಮಗಳನ್ನು “ಕರ್ನಾಟಕ ಸಂಭ್ರಮ-೫೦” ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ನಗರದ ‘ಲಿಟಲ್ ಹಾರ್ಟ್ಸ್’ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 30-11-2023 ರಂದು ಮಕ್ಕಳ 2 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಈ ಮಕ್ಕಳ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಾಲೆಯ ಹಳೆಯ ವಿದ್ಯಾರ್ಥಿ, ಎಂ.ಬಿ.ಬಿ.ಎಸ್.ವೈದ್ಯಕೀಯ ಪದವಿ ಪಡೆದು,ಪ್ರಸ್ತುತ ಎಂ.ಡಿ.(ಜನರಲ್ ಮೆಡಿಸಿನ್) ಅಭ್ಯಾಸ ಮಾಡುತ್ತಿರುವ ಅಭಿಶೇಕಸ್ವಾಮಿ ಹೇರೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಆ ದಿನ ಶಾಲಾ ಮಕ್ಕಳ ವಿವಿಧ ವಾದ್ಯ,ನೃತ್ಯ,ಕುಂಭ ಹಾಗೂ ಹಲವಾರು ಸ್ತಬ್ಧ ಚಿತ್ರಗಳೊಂದಿಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಹಾಗೂ ಮಕ್ಕಳಿಂದ ಘೋಷ್ಟಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನಂತರ ದಿನಾಂಕ 02-12-2023 ರ ಶನಿವಾರದಂದು ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.

About Mallikarjun

Check Also

ಕೆರೆ ಹೂಳೆತ್ತುವ ಕಾಮಗಾರಿ ಅಭಿವೃದ್ಧಿ ಅಧಿಕಾರಿಗಳಿಂದ ಪರಿಶೀಲನೆ

Development officials inspect lake dredging work ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಲಿ,ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ …

Leave a Reply

Your email address will not be published. Required fields are marked *