ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಆಚರಣೆ

Bhima Koregaon Victory Program Celebration

ಗಂಗಾವತಿ : ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಾಗೂ ರೈತ ಸಂಘ ದಲಿತ ಅಲ್ಪಸಂಖ್ಯಾತರ ಒಕ್ಕೂಟದದಿಂದ ಗಂಗಾವತಿ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭೀಮ ಕೋರೆಗಾಂವ್ ಸ್ಥಂಭದ ಭಾವಚಿತ್ರಕ್ಕೆ, ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶರಣೆಗೌಡ ಕೆಸರಟ್ಟಿ ರೈತ ಸಂಘದ ರಾಜ್ಯಾಧ್ಯಕ್ಷ ಮಾತನಾಡಿ
ಜನವರಿ 1, ಜಗತ್ತಿಗೆ ಹೊಸ ವರ್ಷದ • ಸಂಭ್ರಮಾಚಾರಣೆಯಾದರೆ ಶೋಷಿತರ ಪಾಲಿಗೆ ಇದು ಅಸ್ಪೃಶ್ಯತೆಯ ಈ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ – ಮಹಾ‌ರ್ ಯೋಧರ ಶೌರ್ಯದ ಸಂಕೇತ ಮೆರೆದ ವಿಜಯೋತ್ಸವ ದಿನ ಇದು ಹಾಗಿದೆ
ಡಾ ಬಾಬಾ ಸಾಹೇಬ್ ಅಂಬೇಡ್ಕರ್ – ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ > ನೀಡಿದ ಈ ದಿನವು ನಮ್ಮೆಲ್ಲರ ಪಾಲಿಗೆ > ವಿಜಯೋತ್ಸವದ ದಿನವಾಗಿದೆ. ಕ್ರಿಶ. 1800 ರ ಸಂದರ್ಭದಲ್ಲಿ ಮಹರಾಷ್ಟ್ರ ದಲ್ಲಿ ಆಡಳಿತ ನಡೆಸುತ್ತಿದ್ದ ಪೇಶ್ವಗಳು ಮನು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಅಸ್ಪೃಶ್ಯರ ಜೀವನವನ್ನು ಕಠೋರವಾಗಿಸಿದ್ದರು. ಸಾರ್ವಜನಿಕ ಕೆರೆಗಳನ್ನು ಬಳಸದಂತೆ • ನಿರ್ಬಂಧ ಹೇರಲಾಗಿತ್ತು.ತಮ್ಮ ಮೇಲೆ ಈ ರೀತಿಯ ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದ ಪೇಶ್ವಗಳ ದೌರ್ಜನ್ಯ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಅಸ್ಪೃಶ್ಯರು ತಮ್ಮ ಜನಾಂಗದ ಮುಕ್ತಿಗಾಗಿ ಈ ಯುದ್ಧವನ್ನು ಮಾಡಬೇಕಾದ ಪ್ರಸಂಗದಿಂದ ಪೇಶ್ವೆಗಳ ವಿರುದ್ಧ 500 ಮಹರ್ ಸೈನಿಕರು ಸೇರಿಕೊಂಡು 28000 ಪೇಶ್ವೆಗಳ ಸೈನಿಕರನ್ನು ಹೊಡೆದು ಉಳಿಸಿದಂತಹ ಈ ಮಹರ್ ಸೈನಿಕರು 01.01.1818 ರಂದು ವಿಜಯವನ್ನು ಸಾಧಿಸಿದಂತಹ ದಿನವಾಗಿದೆ. ಆ ಯುದ್ಧ ಮುಗಿದ ನಂತರ ಕೊರೆಗಾವ್ ಗ್ರಾಮಕ್ಕೆ ಬಂದು ಯುದ್ಧದಲ್ಲಿ ಮರಣ ಹೊಂದಿದಂತಹ ಮಹರ್ ಸೈನಿಕರ ಧ್ವಜಸ್ತಂಭವನ್ನು ಹಾಕಿ ವಿಜಯೋತ್ಸವವನ್ನು ಆಚರಣೆ ಮಾಡಿದ ದಿನ ಇದಾಗಿದೆ ಎಂದರು
ನಂತರ ಶಂಕರ್ ಸಿದ್ದಾಪುರ ವಕೀಲರ ಮಾತನಾಡಿ ಹೊಸ ವರ್ಷ ಆಚರಣೆ ಮತ್ತು ಭೀಮ ಕೊರೆಗಾವ್ ನಮ್ಮ ಮಹರ್ ಸೈನಿಕರ ನೆನಪು ಮಾಡಿಕೊಳ್ಳುವುದರ ಜೊತೆಗೆ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರು ಲಕ್ಷ್ಮಿ ನಾರಾಯಣ್ ನಾಗವರ್ ಇವರು ನಮ್ಮನ್ನೆಲ್ಲ ಬಿಟ್ಟು ಹಗಲಿದ್ದಾರೆ ಅವರಿಗೆ ಕೂಡ ನಮ್ಮ ಮಹಾರ್ ಸೈನಿಕರ ಜೊತೆಗೆ ಅವರಿಗೂ ಕೂಡ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ನಂತರದ ದಿನಮಾನಗಳಲ್ಲಿ ಭೀಮ ಕೊರೆಗಾವ್ ಯುದ್ಧ ನಡೆಯಬೇಕಾದರೆ ಪೇಶ್ವೆಗಳ ಕೊಳಕು ಮನಸ್ಥಿತಿಗಳಿಂದ ನಮ್ಮ ಮಹಾರ್ ಸೈನಿಕರ ಅಸ್ಪೃಶ್ಯತೆ ದಬ್ಬಾಳಿಕೆ ಒಳಗಾಗುವುದರಿಂದ ಈ ಯುದ್ಧ ನಡೆಯಲು ಕಾರಣ ಮತ್ತು ಯುದ್ಧವು ಅಸ್ಪೃಶ್ಯರ ಸ್ವಾಭಿಮಾನದ ಸಂಕೇತವಾಗಿದೆ ಈ ಘಟನೆಯು ನಮ್ಮೆಲ್ಲರಿಗೂ ಆತ್ಮಗೌರವನ್ನು ಎತ್ತಿ ಹಿಡಿಯುವ ದಿನವಾಗಿದೆ. ಇಂತಹ ಸ್ವಾಭಿಮಾನದ, ಆತ್ಮಗೌರವದ ದಿನವನ್ನು ಶೋಷಿತ ಸಮುದಾಯದವರು ನೆನಪಿಸಿಕೊಂಡು ಅಮರ ವೀರರ ಕೆಚ್ಚೆದೆಯ ಸ್ವಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನದಿಂದ ಮನು ಸಂವಿದಾನಕ್ಕೆ ಪೆಟ್ಟುಬಿದ್ದು ಅಸ್ಪೃಶ್ಯರಿಗೆ ವಿದ್ಯಾಭ್ಯಾಸ ನೀಡಲು, ಸೈನ್ಯಕ್ಕೆ ಸೇರಲು, ಸಾಮಾಜಿಕವಾಗಿ ಅಲ್ಪ ಪ್ರಮಾಣದಲ್ಲಿ ನಾಗರೀಕ ಬದುಕು ಕಾಣಲು ಸಾಧ್ಯವಾಗಿದೆ.
ಅಂದು ಅಸ್ಪೃಶ್ಯರು ಬ್ರಿಟೀಷರ ಪರ ವಾಗಿ ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಜನಾಂಗಕ್ಕೆ ತಮ್ಮ ಮಕ್ಕಳು ಮುಂದಿನ ಭವಿಷ್ಯ, ಹೊಟ್ಟೆಗೆ ಅನ್ನ ದೊರಕಿಸಿಕೊ ಳ್ಳುವ ಸ್ವಾಭಿಮಾನದಿಂದ ಬದುಕುವ ಉದ್ದೇಶಕ್ಕೆ ತಮ್ಮ ಅಮೂಲ್ಯ ಜೀವವನ್ನು ಅರ್ಪಣೆ ಮಾಡಿದ ನಮ್ಮಹುತಾತ್ಮರಾದ ಯೋಧರಿಗೆ ನಾವೆಲ್ಲ ಗೌರವಿಸಬೇಕಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಜಿಲ್ಲಾ ಮುಖಂಡರಾದ ಗಂಗಣ್ಣ ಸಿದ್ದಾಪುರ ಹೊನ್ನೂರ ಸಿದ್ದಾಪುರ ಅಯ್ಯಣ್ಣ ಮೈಲಾಪುರ್ ಪರುಶುರಾಮ ಮಹಾದೇವ ಕಾಟಾಪುರ ಶರಣಪ್ಪ ಸಿದ್ದಾಪುರ ಮೂರ್ತಿ ಸಂಗಾಪುರ ಹುಲ್ಲಿಗೇಶ ಕಾಟಾಪುರ ಸೇರಿದಂತೆ ಇತರರು ಯುವಕರು ಭಾಗವಹಿಸಿದ್ದರು

ಭೀಮ ಕೊರೆಗಾಂವ್ ವಿಜಯೋತ್ಸವಆಚರಣೆಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ

Bhima Koregaon Victory celebrations kick off with floral tributes to Dr BR Ambedkar’s portrait


ಕೊಟ್ಟೂರು: ಇತಿಹಾಸದಲ್ಲಿ ಯುದ್ಧಗಳು ಹೆಣ್ಣು ಮಣ್ಣು ಸಾಮ್ರಾಜ್ಯ ಸ್ಥಾಪನೆಗೆ ಯುದ್ಧಗಳು ನಡೆದಿದ್ದಾವೆ. ಆದರೆ ಆತ್ಮ ಗೌರವ ಸ್ವಾಭಿಮಾನಕ್ಕಾಗಿ ನಡೆದಿರುವ ಇದ್ದವೇ ಭೀಮ ಕೊರೆಗಾಂವ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ಹೇಳಿದರು.

ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾದ್ವಾರ ಬಾಗಿಲು ಹತ್ತಿರ ದಲಿತ ಸಂಘಟನೆಯಿಂದ ಆಯೋಜಿಸಿದ್ದ ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ ನೀಡಿ ನಂತರ ಮಾತನಾಡಿದರು ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕಾಲವಾಗಿತ್ತು ಆಗಿನ ಸಂದರ್ಭದಲ್ಲಿ ಮಹಾರ್ (ದಲಿತರು)ಜನರನ್ನು ಹೀನಾಯ ಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದ ಮಹರ್ (ದಲಿತರು) ಜನರ ನಾಯಕನಾದ ಸಿದ್ಧಿ ನಾಯಕ ಮತ್ತು ಎರಡನೇ ಬಾಜಿರಾಯ ವಿರುದ್ಧ ಯುದ್ಧ ಸಾರಿ 28 ಸಾವಿರ ಪೇಶ್ವೆ ಗಳ ಸೈನಿಕರು ಕೇವಲ 500 ದಲಿತ ಸೈನಿಕರು ಸೇರಿಕೊಂಡು ಸೋಲಿಸದ ಇದ್ದವೇ ಭೀಮ ಕೊರೆಗಾಂವ್ ವಿಜಯೋತ್ಸವ ಎಂದು ಹೇಳಿದರು.

ನಂತರ ದಲಿತ ಮುಖಂಡರುಗಳಾದ ಬಿ ಮರಿಸ್ವಾಮಿ ಮತ್ತು ತೆಗ್ಗಿನಕೇರಿ ಕೊಟ್ರೇಶ್ ಮಾತನಾಡಿದರು ಮೇಲ್ಜಾತಿಯ ದೌರ್ಜನ್ಯಕ್ಕೆ ಒಳಗಾದ ಶೋಷಿತ ಸಮುದಾಯವು ತಮ್ಮ ಹಕ್ಕಿಗಾಗಿ ಸಮಾನತೆಗಾಗಿ ಮಾನವಿತೆಯ ಮೌಲ್ಯಗಳನ್ನು ಪಡೆದುಕೊಳ್ಳಲು ಕೆಚ್ಚೆದೆಯ ಹೋರಾಟ ಸಾಹಸ ಮಹರ್ ಸೈನಿಕರು ನಡೆಸಿದ ಯುದ್ದವೇ ಭೀಮ ಕೋರಂಗಾವ್ ಯುದ್ಧ ಎಂದು ಇತಿಹಾಸದಲ್ಲಿ ಪ್ರಸಿದ್ಧಿ ಹೊಂದಿದೆ ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಬಿ ರೇಖಾ ರಮೇಶ್, ಡಿ ವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ ಟಿ, ಪಿ ಎಸ ಐ ಗೀತಾಂಜಲಿ ಸಿಂಧೆ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಬುಗ್ಗಳಿ ಕೊಟ್ರೇಶ್, ಯುವ ಮುಖಂಡ ಎಂ ಎಂ ಜೆ ಶೋಬಿತ್, ಹಾಲಿ ಪ. ಪಂ. ಸದಸ್ಯರುಗಳಾದ ತೆಗ್ಗಿನಕೇರಿ ಜಗದೀಶ್, ಕೆಂಗಪ್ಪ, ದಲಿತ ಮುಖಂಡಗಳಾದ ಟಿ. ಹನುಮಂತಪ್ಪ ವಕೀಲರು, ಬಿ ದುರುಗೇಶ್, ಬಣಕರ್ ಕುಮಾರಪ್ಪ, ಟಿ ಸುರೇಶ್, ಶಿವು, ಬಿ ಪರಶುರಾಮ್, ಕೊಲ್ಲಾರಿ, ವೀರಭದ್ರಪ್ಪ, ದಡೇರಪ್ಪ, ಕೆ ಶಿವರಾಜ್, ಮಣಿಕಂಠ, ತಿಮಲಾಪುರ ಮೈಲಪ್ಪ, ಇತರರು ಉಪಸ್ಥಿತರಿದ್ದರು.

ಶಿಲೆಯನ್ನು ಕಲೆಯಾಗಿ ಅರಳಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿಗೆ ಸಲ್ಲಿತ್ತದೆ‌ : ಗಿರಿಧರ್ ಜೋಷಿ

Amarashilpi Jakanachari is credited with blossoming rock into art: Giridhar Joshi

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರ : ತಾಲೂಕ ಪಂಚಾಯತ ಕುಕನೂರ ಕಛೇರಿಯಲ್ಲಿ ವಿಶ್ವ ಕಂಡ ಮಹಾ ಶಿಲ್ಪಕಾರ ಅಮರಶಿಲ್ಪಿ ಜಕಣಾ ರರ ಜಯಂತಿಯನ್ನು ಆಚರಿಸಲಾಯಿತು.

ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ತಾಲೂಕ ಪಂಚಾಯತ ಕುಕನೂರ ಮ್ಯಾನೇಜರ್ ಗಿರಿಧರ್ ಜೋಷಿ ಮಾತನಾಡಿ ಅಮರಶಿಲ್ಪಿ ಜಕಣಾಚಾರಿಯವರು ನಾಡು ಕಂಡ ಮಹಾನ್ ಚೇತನ ರಾಮಾನುಜಾಚಾರ್ಯರ ಮಾರ್ಗದರ್ಶನದಿಂದ ತಮ್ಮ ವೃತ್ತಿಯಲ್ಲಿ ಏಕಾಗೃತೆಯನ್ನು ಸಾಧಿಸಿ ಹೋಯ್ಸಳ, ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯಗಳಲ್ಲಿ ಅನೇಕ ದೇವಾಲಯಗಳನ್ನು ನಾಜೂಕಾದ ಕುಸುರಿ ಕೆತ್ತನೆಗಳಿಂದ ನಿರ್ಮಾಣ ಮಾಡಿ ಕವಿಗಳಿಗೆ ಕಲೆಯ ಬಲೆಯಾಗಿ, ಇತಿಹಾಸಕಾರರಿಗೆ ಆಕರವಾಗಿ, ಕೆಲವರಿಗೆ ವಿಸ್ಮಯದ ತಾಣಗಳಾಗಿವೆ,

ಕಾಯ ಅಳಿದರೂ ಕೀರ್ತಿ ಇಂದಿಗೂ ಶಿಲೆಗಳಲ್ಲಿ ಉಳಿದಿವೆ. ನಾವು ನಮ್ಮ ನಮ್ಮ ಕೆಲಸಗಳನ್ನು ಶ್ರೆದ್ದೆಯಿಂದ ಮಾಡಿದರೆ ಮಹಾನ್ ಸಾಧಕರ ಸಾಲಿನಲ್ಲಿ ನಿಲ್ಲ ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಚೆನ್ನಬಸಪ್ಪ ಸಣ್ಣಕರಡದ್, ತಾಂತ್ರಿಕ ಸಂಯೋಜಕ ಸುರೇಶ್ ದೇಸಾಯಿ, ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ತಾಪಂ ಸಿಬ್ಬಂದಿಗಳು, ಎನ್.ಆರ್.ಎಲ್ ಎಮ್ ಸಿಬ್ಬಂದಿಗಳು ಹಾಜರಿದ್ದರು.

ಕಾಂಗ್ರೆಸ್ ವಿಜಯೋತ್ಸವ

Satyasodha News Koppala.

ಈ ಹಿರೇವಂಕಲಕುಂಟಾ ಪ್ರಾಥಮಿಕಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಆಯ್ಕೆ

ವರದಿ : ಪಂಚಯ್ಯ ಹಿರೇಮಠ.


ಕೊಪ್ಪಳ : ಭಾನುವಾರದಂದು ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಗೊಂಡರು.

ಹಿರೇ ವಂಕಲಕುಂಟಾದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ವಿರೇಶ ಬಸನಗೌಡ ಗೌಡ, ಖಲೀಲಸಾಬ್ ಶ್ಯಾಮೀದಸಾಬ್‌ ಗುಬ್ಬಿ, ವೆಂಕಟೇಶ ರಾಮಣ್ಣ ಈಳಿಗೇ‌ರ್, ಬಾಲನಗೌಡ ನಾಗನಗೌಡ ಮಾಲಿಪಾಟೀಲ್, ನಿರುಪಾದೆಪ್ಪ ಹನಮಪ್ಪ ದಾಸರ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ) ಮಂಜುನಾಥ ಹನುಮಪ್ಪ ಬೇವೂರ (ಪರಿಶಿಷ್ಟ ಪಂಗಡ ಎಸ್ ಟಿ ಮೀಸಲು ಕ್ಷೇತ್ರ), ಕುಂಟೆಪ್ಪ ಶಿವಪ್ಪ ಕಂಬಳಿ( ಹಿಂದುಳಿದ ಆ ವರ್ಗ), ಅಶೋಕ ಈಶ್ವರಪ್ಪ ಹರ್ಲಾಪೂರ( ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರ), ಈರಮ್ಮ ಆದಪ್ಪ ಗೌಡ್ರ (ಮಹಿಳಾ ಮೀಸಲು ಕ್ಷೇತ್ರ), ಫಾತೀಮಾ ಬೇಗಂ ಮುನಿರಸಾಬ್ ಕುಷ್ಟಗಿ (ಮಹಿಳಾ ಮೀಸಲು ಕ್ಷೇತ್ರ), ಹನುಮೇಶ ಚಿಣಗಿ, ಮಾಹಾಂತೇಶ ಹಡಪದ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಾಬುಸಾಬ್ ಲೈನಂದಾರ್ ತಿಳಿಸಿದ್ದಾರೆ.

ವಿಜಯೋತ್ಸವ:
ವೇಳೆ ನೂತನವಾಗಿ ಕಾಂಗ್ರೆಸ್ ಬೆಂಬಲಿತವಾಗಿ ನಿರ್ದೇಶಕರ ಆಯ್ಕೆ ಹಿನ್ನೆಲೆ ಸಡಗರ ಸಂಭ್ರಮದಿಂದ ಕಾರ್ಯಕರ್ತರು, ಮುಖಂಡರು ಪಕ್ಷದ ಅಭಿಮಾನಿಗಳು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ ಹಳ್ಳಿ, ಮುಖಂಡ ಅಪ್ಪಣ್ಣ ಜೋಷಿ, ಕಾಂಗ್ರೆಸ್ ಕಾರ್ಯಕರ್ತರಾದ ಮಂಜುನಾಥ ಸಜ್ಜನ್, ಕಾಸೀಂಸಾಬ್ ಗುಬ್ಬಿ, ಮಂಜುನಾಥ ಬಂಗಾರಿ, ಲೆಂಕೆನಗೌಡ ಚಿಕ್ಕವಂಕಲಕುಂಟಾ, ನಾಗರಜಾ ಓಜನಹಳ್ಳಿ, ನಿಂಗಪ್ಪ ತೊಣಿಸಿಹಾಳ್‌, ಅಜ್ಜಪ್ಪ ಹರ್ಲಾಪೂರ, ಬಸವರಾಜ ಸಜ್ಜನ್ (ಸಾಹುಕಾರ್), ನಜೀರಮೀಯಾ ಕುಷ್ಟಗಿ, ಹುಸೇನಸಾಬ್ ಬಳಿಗಾರ್, ಇಮಾಮಸಾಬ್ ಅತ್ತಾರ್.ಹನ್ಮಂತ ಓಜನಹಳ್ಳಿ, ಕೇಶವ ಜ್ಞಾನಮೋಟೆ ಹಾಗೂ ಇನ್ನಿತರರು ಇದ್ದರು.