Breaking News

ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟ ಪರಿಸರದ ಸುಸ್ಥಿರತೆಗೆ ಅತ್ಯಗತ್ಯ : ಪ್ರಗತಿಪರ ಕೃಷಿಕಪಿಶಿವಕುಮಾರಸ್ವಾಮಿ

Soil, air and water quality essential for environmental sustainability: Progressive farmer P Sivakumaraswamy

ಜಾಹೀರಾತು

ಚಾಮರಾಜನಗರ, ಡಿ. ೧೫:
ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟ ಪರಿಸರದ ಸುಸ್ಥಿರತೆಗೆ ಅತ್ಯಗತ್ಯ : ಪ್ರಗತಿಪರ ಕೃಷಿಕ ಪಿ ಶಿವಕುಮಾರಸ್ವಾಮಿಸಂತೆಮರಳ್ಳಿಯ ಸಮೀಪದ ಉಗಮ ಫಾರಂನಲ್ಲಿ ಜೆಎಸ್’ಬಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಆಸಕ್ತ ರೈತರಿಗೆ ಒಂದು ದಿನದ ‘ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಗಿಡಗಳನ್ನು ಕಸಿ ಕಟ್ಟುವ (Grafting) ತರಬೇತಿ’ ಕಾರ್ಯಾಗಾರದಲ್ಲಿ (Workshop) ಉದ್ಘಾಟಿಸಿ ಕೃಷಿಕ ಪಿ ಶಿವಕುಮಾರಸ್ವಾಮಿ ಅವರು ಮಾತನಾಡಿದರು.
ಭೂಮಿಯ ಮೇಲಿನ ಜೀವಕ್ಕೆ ಮಣ್ಣು ಪೋಷಕ ಅಂಶವಾಗಿದೆ. ಭೂಮಿಯ ಮೇಲಿನ ಹೊರಪದರವು ಜೀವಿಗಳು, ದ್ರವಗಳು ಮತ್ತು ಖನಿಜ ಕಣಗಳಿಂದ ತುಂಬಿದೆ. ಮಣ್ಣಿನಿಂದ ಜೀವ, ಮಣ್ಣಿನಿಂದ ಕಾಯ, ಮಣ್ಣಿನಿಂದಲೇ ಜೀವನ. ಮಣ್ಣು ಅಳಿದರೆ ಮಾನವ ಅಳಿದಂತೆ. ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತಾಗಿರುವುದರಿಂದ ಇದನ್ನು ಉಳಿಸಲೇಬೇಕಾದ ಮಹತ್ತರ ಜವಾಬ್ದಾರಿ‌ ಹಾಗೂ ಕರ್ತವ್ಯ ಪ್ರತಿಯೊಬ್ಬರದ್ದು. ನೆಲ, ಜಲ, ಪರಿಸರ ಸಂರಕ್ಷಣೆ, ಮಣ್ಣಿನ ಮಹತ್ವವನ್ನು ತಿಳಿಸುವ ಪ್ರಯತ್ನಗಳು ಆಗಬೇಕು. ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಣ್ಣಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಮಣ್ಣಿನ ಸಂರಕ್ಷಣೆಯ ಪ್ರಮುಖ ಉದ್ದೇಶವೆಂದರೆ ಅದರಲ್ಲಿ ವಾಸಿಸುವ ಪರಿಸರ ಸಮುದಾಯಗಳ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಮತ್ತು ಅದರ ಫಲವತ್ತತೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವುದಾಗಿದೆ. ಮಣ್ಣು ನಿರಂತರವಾಗಿ ಬದಲಾಗುತ್ತಿರುವ ಪರಿಸರ ವ್ಯವಸ್ಥೆಯಾಗಿದ್ದು, ಅಲ್ಲಿ ಸೂಕ್ಷ್ಮಜೀವಿಗಳು, ಹುಳುಗಳು ಮತ್ತು ಇತರ ಜೀವಿಗಳು ಇಂಗಾಲ, ಸಾರಜನಕ ಮತ್ತು ನೀರಿನಿಂದ ಸಮೃದ್ಧವಾಗಿರುವ ಅದ್ಭುತವಾದ ಸಂಕೀರ್ಣವಾದ ಸೂಕ್ಷ್ಮ ಭೂದೃಶ್ಯದಲ್ಲಿ ಅಭಿವೃದ್ಧಿ ಹೊಂದುತ್ತವೆ. ಒಂದು ಹಿಡಿ ಮಣ್ಣು, ಗ್ರಹದಲ್ಲಿ ಇರುವ ಜನರಿಗಿಂತ ಹೆಚ್ಚು ಜೀವಂತ ಜೀವಿಗಳನ್ನು ಹೊಂದಿರುತ್ತದೆ. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಜೀವವೈವಿಧ್ಯವು ಮಣ್ಣಿನಲ್ಲಿ ಕಂಡುಬರುತ್ತದೆ. ಮಣ್ಣುಗಳು ಅವುಗಳ ಅಂತರ್ಗತ ಗುಣಲಕ್ಷಣಗಳಲ್ಲಿ ವ್ಯಾಪಕವಾಗಿ ಬದಲಾಗುತ್ತವೆ ಏಕೆಂದರೆ ಅವು ವಿವಿಧ ರೀತಿಯ ಬಂಡೆಗಳು ಮತ್ತು ಜೀವಿಗಳಿಂದ ರೂಪುಗೊಂಡಿವೆ ಮತ್ತು ವಿಶಿಷ್ಟವಾದ ಇತಿಹಾಸವನ್ನು ಹೊಂದಿವೆ. ಮಣ್ಣಿನ ಆರೋಗ್ಯವು ಉತ್ಪಾದಕತೆಯನ್ನು ಹೆಚ್ಚಿಸಲು, ವೈವಿಧ್ಯತೆಯನ್ನು ಪೋಷಿಸಲು ಮತ್ತು ವಿಜ್ಞಾನ-ಆಧಾರಿತ ನಿರ್ವಹಣಾ ಅಭ್ಯಾಸಗಳ ಮೂಲಕ ಪರಿಸರ ವ್ಯವಸ್ಥೆಯ ಸೇವೆಗಳನ್ನು ಸಕ್ರಿಯಗೊಳಿಸಲು ಮಣ್ಣಿನ ಕ್ರಿಯಾತ್ಮಕ ಗುಣಲಕ್ಷಣಗಳನ್ನು ಉತ್ತಮಗೊಳಿಸುವುದರ ಮೇಲೆ ಕೇಂದ್ರಿತವಾಗಿದೆ. ಅತಿಯಾದ ಕೀಟನಾಶಕ, ರಾಸಯನಿಕಗಳ ಬಳಕೆಯಿಂದ ದಿನದಿಂದ ದಿನಕ್ಕೆ ಮಣ್ಣು ಹಾಳಾಗುತ್ತಿದೆ. ಹೀಗಾಗಿ, ಜೀವ ಸಂಕುಲದ ಉಳಿವಿಗೆ ಮಣ್ಣಿನ ಅಗತ್ಯತೆ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕಾರ್ಯ ಆಗಬೇಕು. ಇದು ನಮ್ಮೆಲ್ಲರಿಗೆ ಜವಾಬ್ದಾರಿ. ನೆಲ, ಜಲ ಸಂರಕ್ಷಣೆಯ ಭಾಗವಾಗಿ ಮಣ್ಣಿನ ಸಂರಕ್ಷಣೆಯು ಪ್ರತಿಯೊಬ್ಬರು ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ ಮಾತನಾಡಿ, ಜಗತ್ತಿನ ಶೇ.95ರಷ್ಟು ಆಹಾರ ಮಣ್ಣಿನಿಂದಲೇ ದೊರಕುವುದು. ಈಗಾಗಲೇ ಅರ್ಧದಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿರುವುದು ವಿಜ್ಞಾನಿಗಳಿಂದ ತಿಳಿದು ಬರುತ್ತದೆ. ಉತ್ಪಾದಕತೆಯು ಕಡಿಮೆಯಾಗಿದೆ. ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಜೀವವಾಗಿದೆ. ಮಣ್ಣಿನ ಫಲವತ್ತತೆ ಪೋಷಕಾಂಶಗಳು ಮಾತ್ರವಲ್ಲ, ಅನುಕೂಲಕರ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂದಗಳನ್ನು ಒಳಗೊಂಡಿದೆ ಎಂದರು.
ಕಾರ್ಯಕ್ರಮದ ಭಾಗವಾಗಿ, ನೆರೆದಿದ್ದ ರೈತರಿಗೆಲ್ಲಾ ಕಸಿ ಕಟ್ಟುವ ಪ್ರಾತ್ಯಕ್ಷಿಕೆ ಜೊತೆಗೆ ತೋಟದಲ್ಲಿ ಹಲವಾರು ಗಿಡಗಳನ್ನು ಕಸಿ ಮಾಡಿಸುವ ತರಬೇತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುತ್ತುರಾಜು, ಚಂದ್ರಕಾಂತ, ಮಹೇಶ, ಮಲ್ಲರಾಜು, ರಾಮಚಂದ್ರ, ಶಶಿಶೇಖರ, ರಾಜೇಶ, ನಂದಿನಿ, ಸುಮಾ, ನಳಿಸಿ, ಲೀಲಾ, ಮಂಜುನಾಥ, ಕರುಣಾಕರ, ಸ್ಥಳೀಯರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುಮಾರು ಅರವತ್ತಕ್ಕೂ ಹೆಚ್ಚಿನ ಜನರಿಗೆ ತರಬೇತಿಯನ್ನು ನೀಡಲಾಯಿತು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *