Breaking News

ದಸರಾಹಬ್ಬದಅಂಗವಾಗಿ ಸುಮಂಗಲಿಯರಿಂದ ನೂತನ ರಥೋತ್ಸವ


A new chariot festival from Sumangali as part of Dussehra festival

IMG 20241016 WA0012

ಮಾನ್ವಿ: ಪಟ್ಟಣದ ಜಯನಗರದಲ್ಲಿನ ಸಂಗಾಪುರ ಖಿದ್ಮತ್ ಹಿರೇಮಠ ಶಾಖಮಠದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ೩೩ನೇ ವರ್ಷದ ಶ್ರೀದೇವಿ ಪುರಾಣ ಮಹಾಮಂಗಲೋತ್ಸವ ಹಾಗೂ ೩೨೪ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ನೂತನ ರಥೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ರಾಯಚೂರು ೧೦೮ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠ ಶ್ರೀ .ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶಿವಾಚನ ನೀಡಿ ದಸರಾ ಹಬ್ಬವು ನಾಡ ಹಬ್ಬವಾಗಿದ್ದು ನವರಾತ್ರಿಯ ೯ ದಿನಗಳ ಕಾಲ ದೇವಿಯನ್ನು ಪೂಜಿಸಿದಲ್ಲಿ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಹಾಗೂ ಜೀವನದಲ್ಲಿ ಯಶಸ್ಸು ದೊರೆಯುವುದರಿಂದ ಭಕ್ತಿ ಭಾವದಿಂದ ದೇವಿಯನ್ನು ಆರಾದಿಸುವಂತೆ ತಿಳಿಸಿದರು.
೩೨೪ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಶ್ರೀದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದಲ್ಲಿ ಕೂಡಿಸಿದ ನಂತರ ನೂತನ ರಥಕ್ಕೆ ಶ್ರೀ .ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ನೂರಾರು ಮಹಿಳೆಯರು ನೂತನ ರಥವನ್ನು ಎಳೆಯುವ ಮೂಲಕ ರಥೋತ್ಸವ ನೆರವೇರಿಸಿದರು. ಸುತ್ತಮುತ್ತಲಿನ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರು. ವೀರಗಾಸೆ ಕಲಾವಿದರಾದ ಯದ್ದಲದಿನ್ನಿಯ ಹೆಚ್.ಎಂ.ಸಿದ್ದರಾಮಯ್ಯಸ್ವಾಮಿ ಯವರಿಂದ ಪುರವಂತಿಕೆ ಪ್ರದರ್ಶನ ನಡೆಯಿತು.
ಸಂಗಾಪುರ ಹಿರೇಮಠದ ಶ್ರೀ ವೀರಭದ್ರಯ್ಯಸ್ವಾಮಿಗಳು, ಶ್ರೀ ಶರಭಯ್ಯ ಶಾಸ್ತ್ರಿಗಳು, ದೇವಿ ಉಪಾಸಕರಾದ ಮರಿಸ್ವಾಮಿ,ಮುದ್ದಯ್ಯಸ್ವಾಮಿ,ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

screenshot 2025 12 08 17 40 00 68 680d03679600f7af0b4c700c6b270fe7.jpg

ಭಾಗ್ಯನಗರ: ಪ್ರಾಣಿ ಆರೈಕೆ ಕೇಂದ್ರದಲ್ಲಿನ ನಾಯಿಗಳನ್ನು ದತ್ತು ಪಡೆಯಲು ಅವಕಾಶ

ಭಾಗ್ಯನಗರ: ಪ್ರಾಣಿ ಆರೈಕೆ ಕೇಂದ್ರದಲ್ಲಿನ ನಾಯಿಗಳನ್ನು ದತ್ತು ಪಡೆಯಲು ಅವಕಾಶ Bhagyanagar: Dogs at animal care center available …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.